Why the spirit of dalit movement died out in Karnataka: An exmaple from the Holeya-madiga departures

27/08/2011

ಚಪ್ಪಾಳೆ,ಎಡಗೈ ಬಲಗೈ ಸೇರಿದರೆ ಮಾತ್ರ!

ಈ ಲೇಖನವನ್ನು  “ಡಾ.ಅಂಬೇಡ್ಕರ್ ದೃಷ್ಟಿಯಲ್ಲಿ ಕಲಿಯುಗ” ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.

 

ಗುರುವಿನ ಗುಲಾಮನಾಗದ ಯಾವುದೇ ಶಿಷ್ಯ, ತಂದೆಯನ್ನು ಮೀರಿಸಲಾಗದ ಮಗ ದೊಡ್ಡ ಸಾಧನೆ ಮಾಡುವುದು ಅಸಾಧ್ಯ. ಗುರುವಿನ ಶಕ್ತಿ ಮತ್ತು ತಂದೆಯ ಬದ್ದತೆ ಎರಡನ್ನೂ ಹೊಂದಿರುವ ನಾಯಕ ಸಿಗುವುದು ದುರ್ಲಭ. ಯಾವುದೇ ಜನಾಂಗದ ನಾಯಕನಿಗೆ ಪ್ರಾಮಾಣಿಕತೆ, ನಿಷ್ಠೆ ಮತ್ತು ನಿದರ್ಿಷ್ಠ ಸಿದ್ದಾಂತ ಇರಲೇಬೇಕು. ಭಾರತದಂತಹ ವಿಲಕ್ಷಣ ಸಮಾಜದಲ್ಲಿ ಜನಾಂಗವೊಂದರ ನಾಯಕತ್ವ ವಹಿಸುವುದು ಅಷ್ಟು ಸುಲಭದ ಮಾತಲ್ಲ. ಇಲ್ಲಿ ನಾಯಕನಾದವನು ಸ್ವಲ್ಪ ಜಾರಿದರೂ ಸಹ ಇಡೀ ಸಮುದಾಯವೇ ದಿಕ್ಕು ತಪ್ಪಿ ಹೋಗುತ್ತದೆ. ಅದರಲ್ಲೂ ಸಾವಿರಾರು ವರ್ಷಗಳಿಂದ ವಿದ್ಯೆ ಅಧಿಕಾರ ಆಯುಧ ಮತ್ತು ಆಸ್ತಿಗಳಿಂದ ವಂಚಿತರಾಗಿರುವ ಜಾತಿಗಳ ನಾಯಕರು ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಕನರ್ಾಟಕ ಮತ್ತು ಆಂಧ್ರದ ಮಟ್ಟಿಗೆ ಒಳಮೀಸಲಾತಿ ಎಂಬ ಒಳಸುಳಿಗೆ ಸಿಕ್ಕಿರುವ ಹೊಲೆಯರು ಮತ್ತು ಮಾದಿಗರ ನಾಯಕತ್ವವನ್ನು ಈ ಹಿನ್ನೆಲೆಯಲ್ಲಿ ಒರೆಗಲ್ಲಿಗೆ ಹಚ್ಚಬೇಕಾಗಿದೆ.
ಈ ಎರಡು ಉಪಜಾತಿಗಳು ಇಂದು ಅನಾಯಕತ್ವದ ಅರಾಜಕತೆಗೆ ಸಿಕ್ಕಿ ಒದ್ದಾಡುತ್ತಿವೆ. ಈ ಅರಾಜಕತೆಯಿಂದ ಹೊಲೆಯರು ಮತ್ತು ಮಾದಿಗರು ಶಾಸಕಾಂಗ ಮತ್ತು ಕಾಯರ್ಾಂಗದಲ್ಲಿ ಅತ್ಯಂತ ವ್ಯವಸ್ಥಿತವಾಗಿ ತಮ್ಮ ಅವಕಾಶಗಳನ್ನು ಸ್ಪೃಶ್ಯ ಜಾತಿಗಳಿಗೆ ಬಿಟ್ಟುಕೊಡುತ್ತಿದ್ದಾರೆ. ಈ ಎರಡೂ ಜಾತಿಗಳ ಕೆಲವು ರಾಜಕಾರಣಿಗಳು, ಪುಡಾರಿಗಳು ಹಾಗೂ ಹೊಟ್ಟೆ ಪಾಡಿಗಾಗಿ ಮಾಡಿಕೊಂಡಿರುವ ಕೆಲಸಂಘ ಸಂಸ್ಥೆಗಳ ಪದಾಧಿಕಾರಿಗಳು ತಮ್ಮ ಅಜ್ಞಾನ, ಹೊಣೆಗೇಡಿತನ ಮತ್ತು ಸ್ವಾರ್ಥದಿಂದ ಸ್ವತಃ ತಮ್ಮ ಸಮುದಾಯಗಳನ್ನೇ ದಿಕ್ಕು ತಪ್ಪಿಸುತ್ತಿದ್ದಾರೆ. ನೆಹರೂ ಮತ್ತು ಇಂದಿರಾ ನಂತರ ಜಾತಿ ಎಂಬ ಎರಡು ಅಲಗಿನ ಕತ್ತಿಯನ್ನು ತಮ್ಮ ವರಸೆಗೆ ತಕ್ಕಂತೆ ಬಳಸಿದ ಶ್ರೇಷ್ಠ ರಾಜಕೀಯ ಚಿಂತಕರಾದ ಶ್ರೀ ದಾದಾಸಾಹೇಬ ಕಾನ್ಸಿರಾಂ ರವರು ತಮ್ಮ ಅ“CHAMACHAAGE”  ಕೃತಿಯಲ್ಲಿ “SHEDULED CASTES ARE FORCED CHAMACHAS” ಎಂದಿದ್ದಾರೆ, ಹಾಗೆಯೇ ಅವರು ಮುಂದುವರಿದುINTELLECTUALS HAVE JOINED THE SERVICE WHERE AS IDIOTS ARE RUNNING THE MOVEMENT g“SHEDULED CASTES ARE FORCED CHAMACHAS” ಎಂದು ಹೇಳಿದ್ದಾರೆ. ಇಂದು ಹೊಲೆಯರ ಮತ್ತು ಮಾದಿಗರ ನಾಯಕತ್ವ ಈ CHAMACHA ಗಳ ಮತ್ತು IDIOTS ಗಳ ಕೈಯಲ್ಲಿ ಸಿಕ್ಕಿ ನರಳಾಡುತ್ತಿದೆ.
ನಮ್ಮ ದಲಿತ ನಾಯಕರನ್ನು ಕುರಿತು ಪ್ರಖ್ಯಾತ ದಲಿತ ಸಾಹಿತಿ ದಿ. ಶ್ರೀ ದೇವಯ್ಯಹರವೆಯವರು 30 ವರ್ಷಗಳ ಹಿಂದೆ ಹೇಳಿರುವ ಈ ಮಾತನ್ನು ನೋಡಿ ಅಂಬೇಡ್ಕರ್ ತಲೆ ಹಿಡಿದು ತಮ್ಮ ಸ್ವಾರ್ಥ ಸಾಧಿಸಿಕೊಳ್ಳುವ ಈ ದೇಶದ ದಲಿತ  ನಾಯಕರು ತಲೆ ಹಿಡುಕರಾಗಿರುವುದರಿಂದಲೇ ಇಂದು ಅಂಬೇಡ್ಕರ್ವಾದ ಅಪಾಯಕ್ಕೆ ಸಿಲುಕಿದೆ. ತಿರುಪತಿ ತಿಮ್ಮಪ್ಪ ಧರ್ಮಸ್ಥಳ ಮಂಜುನಾಥನನ್ನು ಪೂಜಿಸಿ ಅವರ ಕಥೆಗಳನ್ನು ಹೇಳುವ ಪೂಜಾರಿಗಳಿಗಿಂತಲೂ ತಮ್ಮ ಸ್ವಾರ್ಥಕ್ಕಾಗಿ ಜನರನ್ನು ಕುರಿಗಳನ್ನಾಗಿ ಮಾಡಲು ಹೊರಟಿರುವ ದಲಿತ ನಾಯಕರುಗಳು ಮಹಾ ಮೋಸಗಾರರಾಗಿದ್ದಾರೆಂಬ ಸತ್ಯವನ್ನು  ನಾವು ತಿಳಿಯಬೇಕಾಗಿದೆ.
ಮಾದಿಗ ಜನಾಂಗದ ಕೆಲವರು ಕಡಿಮೆ ಜನಸಂಖ್ಯೆ ಹೊಂದಿರುವ ಹೊಲೆಯರು ಮೀಸಲಾತಿಯಲ್ಲಿ ಸಿಂಹಪಾಲು ಪಡೆದಿರುವುದರಿಂದ ಅನ್ಯಾಯಕ್ಕೀಡಾಗಿರುವ ಮಾದಿಗರಿಗೆ ಒಳ ಮೀಸಲಾತಿಯಿಂದ ಮಾತ್ರ ಸಾಮಾಜಿಕ ನ್ಯಾಯ ಸಿಗಲು ಸಾಧ್ಯವೆಂದು ಅಭಿಪ್ರಯಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಸಕರ್ಾರಗಳು ಪರಿಶಿಷ್ಟ ಜಾತಿಗಳ ಆಥರ್ಿಕ ಮತ್ತು ಸಾಮಾಜಿಕ ಅಭಿವೃದ್ದಿಯನ್ನು ಸಮರ್ಪಕವಾಗಿ ಮಾಡಿದರೆ ಒಳ ಮೀಸಲಾತಿ ಅವಶ್ಯವಿಲ್ಲ ಎಂದು ಹೇಳುವ ಹೊಲೆಯ ನಾಯಕರಿಗೇನು ಇಲ್ಲಿ ಕೊರತೆ ಇಲ್ಲ.  ಎರಡೂ ಜಾತಿಯ ನಾಯಕರು ತಮ್ಮ ಜನಾಂಗವೇ ಸಂಖ್ಯೆಯಲ್ಲಿ ಅಧಿಕವಾಗಿರುವರೆಂದು ಹೇಳುತ್ತಿದ್ದಾರೆ.  ಆದರೆ ಈ ಬಗ್ಗೆ ಸ್ಪಷ್ಟವಾದ ಅಂಕಿ ಅಂಶ ಯಾರ ಬಳಿಯೂ ಇಲ್ಲ.  ನ್ಯಾ.ಸದಾಶಿವ ಆಯೋಗದ ವರದಿ ಬಂದಲ್ಲಿ ಜನಸಂಖ್ಯೆಯ ಸ್ಪಷ್ಟ ಚಿತ್ರಣ ಸಿಗಲು ಸಾಧ್ಯ.
ಹುಟ್ಟುವಾಗಲೇ ಗುರಿ ಮತ್ತು ಮಾರ್ಗದ ಬಗ್ಗೆ ಅದಕ್ಕೂ ಮಿಗಿಲಾದ ಸಿದ್ದಾಂತದ ಬಗ್ಗೆ ಸ್ಪಷ್ಟತೆ ಇಲ್ಲದೆ ಸಾಂದಬರ್ಿಕ ಒತ್ತಡದಿಂದ ಜನಿಸಿ ಅದೇ ಕಾರಣದಿಂದ ಛಿದ್ರವಾದ ದಸಂಸವನ್ನು ಮತ್ತದೇ ಅಸ್ಪಷ್ಟತೆಯಿಂದಲೇ ಒಂದು ಮಾಡುವ ಹಗಲುಗನಸು ಕಾಣುತ್ತಿರುವ, ಅಶ್ಪೃಶ್ಯರ ಹೋರಾಟಕ್ಕೆ ಯಾವುದೇ ಸಂಬಂಧವಿಲ್ಲದ ಲೋಹಿಯಾರವರ ಅನುಯಾಯಿಯಾಗಿರುವ ಶ್ರೀ ದೇವನೂರು ಮಹಾದೇವರವರು ಒಳಮೀಸಲಾತಿ ಕೇಳುವವರ ಹಕ್ಕಾಗಿದೆ. ಅದನ್ನು ಬೇಡವೆನ್ನಲು ಯಾರಿಗೂ ಹಕ್ಕಿಲ್ಲವೆಂದು ಹೇಳುವ ಮೂಲಕ ವಾಸ್ತವವನ್ನು ಒಪ್ಪಿಕೊಂಡು ಇದು ತೀಮರ್ಾನವಾಗಬೇಕಾದ ಜಾಗ ಸಂಸತ್ತು ಎಂದಿದ್ದಾರೆ. ಇವರ ಮಾತಿನಲ್ಲಿ ಸತ್ಯಾಂಶವಿರುವುದನ್ನು ಒಪ್ಪಬಹುದಾದರೂ ಸಹ ಹೊಲೆಮಾದಿಗರು ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೋ ಇಲ್ಲವೋ ಹೇಳಲು ಸಾಧ್ಯವಿಲ್ಲ.
ಆದರೆ ನಾನು ಇಲ್ಲಿ ಚಚರ್ಿಸಬಯಸುವ ವಿಚಾರವೆಂದರೆ ಒಳಮೀಸಲುಬೇಕೆಂದಾಗ ಜಾರಿ ಮಾಡಿಕೊಳ್ಳಬಲ್ಲ ಅಥವಾ ಪಡೆಯಬಲ್ಲ ಸ್ಥಿತಿಯಲ್ಲಿ ಮಾದಿಗರಾಗಲಿ, ಮಾದಿಗ ಸಂಘಟನೆಗಳಾಗಲೀ, ನಾಯಕರಾಗಲೀ ಇದ್ದಾರೆಯೇ? ಅದೇ ಸಂದರ್ಭದಲ್ಲಿ ಇವರು ಒಳಮೀಸಲು ಬೇಡವೆಂದಾಗ ತಡೆಯಬಲ್ಲ ಅಥವಾ ನಿರಾಕರಿಸಬಲ್ಲ ಸ್ಥಿತಿಯಲ್ಲಿ ಹೊಲೆಯರಾಗಲೀ ಇದ್ದಾರೆಯೇ? ಹೌದು ಆ ತಾಕತ್ತು ನಮಗಿದೆ ಎಂದು ಎದೆ ತಟ್ಟಿಕೊಂಡು ಯರಾದರೂ ಹೇಳಬಲ್ಲರೇ?
ಪರಿಸ್ಥಿತಿ ಹೀಗಿರುವಾಗ  ಇವರು ಎಷ್ಟು ಬೇಜವಾಬ್ದಾರಿಗಳಾಗಿದ್ದಾರೆಂದರೆ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 100ಕ್ಕೂ ಹೆಚ್ಚು ಜಾತಿಗಳು ಮತ್ತು ಆ ಜಾತಿಗಳ ಜನಸಂಖ್ಯೆಯನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಅಲ್ಲದೆ ಹೊಲೆಮಾದಿಗರಿಬ್ಬರೂ ಸಂಖ್ಯೆಯಲ್ಲಿ ತಾವೇ ದೊಡ್ಡವರೆಂದು ತಿಳಿದಿದ್ದಾರೆ. ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಇವರ ಸಂಖ್ಯೆ ದೊಡ್ಡದಿರಬಹುದೇನೋ ಆದರೆ ರಾಜ್ಯದ ಎಲ್ಲಾ ಜಾತಿಗಳನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ಇವರ ಸ್ಥಾನ ಎಲ್ಲಿಗೆ ನಿಲ್ಲಬಹುದು. ಅಲ್ಲದೆ  ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ‘ಆದಿಜಾಂಬವ’ ಎಂಬ ಹೆಸರಿಲ್ಲದ ಕಾರಣದಿಂದ ಮಾದಿಗರು, ‘ಆದಿಕನರ್ಾಟಕ’ ಎಂದೇ ಜಾತಿ ದೃಢೀಕರಣ ಪಡೆದಿರುವುದು ಎಲ್ಲರೂ ಬಲ್ಲ ಸತ್ಯ. ಹಾಗೆಯೇ ಕೆಲವೆಡೆ ಹೊಲೆಯರು  ‘ಆದಿದ್ರಾವಿಡ’ರೆಂದು ದೃಢೀಕರಣ ಪಡೆದಿರುವುದೂ ನಿಜ. ತಮ್ಮ ಉಪಜಾತಿಗಳ ಬಗ್ಗೆ ಇವರಿಗಿರುವ ವಿಪರೀತವಾದ ಕೀಳರಿಮೆಯಿಂದ ಮಾದಿಗ ಮತ್ತು ಹೊಲೆಯ ಎಂದು ಜಾತಿ ದೃಢೀಕರಣ ಪತ್ರ ಪಡೆದಿರುವವರ ಸಂಖ್ಯೆ ತುಂಬಾ ಕಡಿಮೆ ಇದೆ ಎಂದು ಖಚಿತವಾಗಿ ಹೇಳಬಹುದು. ಈ ಕಾರಣದಿಂದ ಜನಸಂಖ್ಯೆ ವಿಷಯದಲ್ಲಿ ‘ಆದಿಕನರ್ಾಟಕ’ ಎಂದು ಜಾತಿದೃಢೀಕರಣ ಪಡೆದಿರುವ ಹೊಲೆಮಾದಿಗರಿಬ್ಬರೂ ಇರುವ ಗುಂಪು ಬಹುಸಂಖ್ಯಾತರಾಗಿ ಹೊರಹೊಮ್ಮಬಹುದು. ಒಳಮೀಸಲಾತಿಯ ಪ್ರಬಲ ಪ್ರತಿಪಾದಕರೆನಿಸಿಕೊಂಡವರೂ ಸಹ ಆದಿಕನರ್ಾಟಕ ಎಂದೇ ದೃಢೀಕರಣ ಪಡೆದಿರುವ ಸಾಧ್ಯತೆ ಇದೆ (ಉದಾಹರಣೆಗೆ, ಸಿ.ರಮೇಶ್, ಕೃಷ್ಣ ಇತ್ಯಾದಿ) ಸಕರ್ಾರಿ ದಾಖಲೆಗಳನ್ನು ಪರಿಶೀಲಿಸಿದರೆ ಈ ಬಗ್ಗೆ ವಿವರ ಪಡೆಯುವುದು ಕಷ್ಟವೇನಲ್ಲ. ಈ ಮದ್ಯೆ ಹೊಲೆಯರನ್ನು ಛಲವಾದಿಗಳೆಂದು ಹೇಳುವ ಹೊಸಗುಂಪೊಂದು ಕನರ್ಾಟಕದಲ್ಲಿ ಸೃಷ್ಟಿಯಾಗಿದೆ. ಇದರ ಇತಿಹಾಸದ ಬಗ್ಗೆ ನಾನಿಲ್ಲಿ ಚಚರ್ಿಸಬಯಸುವುದಿಲ್ಲ. ಆದರೆ ಅಧಿಕೃತವಾಗಿ ಹೊಲೆಯರು ‘ಛಲವಾದಿ’ಗಳೆಂದು ದೃಢೀಕರಣ ಪಡೆಯುವ ಸಾಧ್ಯತೆ ಸಹ ಅತ್ಯಂತ ಕ್ಷೀಣವೆಂದು ಹೇಳಬಹುದು. ಇಂತಹ ಪರಿಸ್ಥಿತಿಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದು ಹೇಗೆ. ಶ್ರೀ ಮಹಾದೇವರವರು ಹೇಳಿರುವಂತೆ ಒಳಮೀಸಲಾತಿಯ ವಿಚಾರ ಸಂಸತ್ತಿನಲ್ಲಿ ತೀಮರ್ಾನವಾಗಬೇಕಾಗಿರುವುದರಿಂದ ಅದನ್ನು ಸಂಸತ್ತಿನಲ್ಲಿ ಮಂಡಿಸಬಲ್ಲ ನಾಯಕರು ಯಾರಿದ್ದಾರೆ? ದೇಶದಲ್ಲಿ ಮಾದಿಗ ಜನಾಂಗ ಇರುವ ಕನರ್ಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮಾದಿಗ ಜನಾಂಗದ ಎಂ.ಪಿ.ಗಳು ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವ ಧೈರ್ಯ ತೋರಬೇಕು ಅಥವಾ ಸ್ವತಃ ಕೇಂದ್ರ ಸಕರ್ಾರವೇ ಇದನ್ನು ಕೈಗೆತ್ತಿಕೊಳ್ಳಬೇಕು. ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ತೀಮರ್ಾನವಾಗದೆ ಮತ್ತು ಹೈಕಮಾಂಡ್ ಅನುಮತಿ ಇಲ್ಲದೆ    ಮಾದಿಗ ಜನಾಂಗದ ಸಂಸತ್ ಸದಸ್ಯರಿಂದ ಇಂತಹ ನಡೆಯನ್ನು ನಿರೀಕ್ಷಿಸುವುದು ಕಷ್ಟ. ಮಾದಿಗರಿಗೆ ಒಳಮೀಸಲಾತಿಯನ್ನು ಕಲ್ಪಿಸುವುದರಿಂದ ಸಿಗಬಹುದಾದ ರಾಜಕೀಯ ಲಾಭದ ವಾಸನೆಯಿಲ್ಲದೆ ಯಾವುದೇ ಕೇಂದ್ರ ಸಕರ್ಾರ ಇಂತಹ ಸಾಹಸಕ್ಕೆ ಕೈ ಹಾಕಲಾರದು.
ದೇಶದ ಪರಿಶಿಷ್ಟ ಜಾತಿಗಳ ಪೈಕಿ ಕೇಂದ್ರ ಸಕರ್ಾರವನ್ನು ಅಲುಗಾಡಿಸಬಲ್ಲ ಏಕೈಕ ಜನಾಂಗವೆಂದರೆ ಉತ್ತರ ಭಾರತದ ಚಮ್ಮಾರರು ಮಾತ್ರ ಅವರ ಸಹಾಯವಿಲ್ಲದೆ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ಜಾರಿಗೊಳಿಸುವುದು ಅಸಾಧ್ಯವೇ ಸರಿ. ಶಾಸಕಾಂಗ ಮತ್ತು ಕಾಯರ್ಾಂಗದಲ್ಲಿ ಉತ್ತರ ಭಾರತದ ಪರಿಶಿಷ್ಟ ಜಾತಿಗಳಲ್ಲಿ ಅತಿ ಹೆಚ್ಚು ಲಾಭ ಪಡೆದಿರುವ ಚಮ್ಮಾರರಿಂದ ಇದನ್ನು ನಿರೀಕ್ಷಿಸುವುದು ಕಷ್ಟ. ಮಾಜಿ ಉಪಪ್ರಧಾನಿ ಶ್ರೀ.ಬಾಬು ಜಗಜೀವನರಾಂರವರ ಪುತ್ರಿ ಲೋಕಸಭೆಯ ಸ್ಪೀಕರ್ ಶ್ರೀಮತಿ ಮೀರಾಕುಮಾರ್ರವರು ತಮ್ಮ ತಂದೆಯವರ ಜನ್ಮ ದಿನಾಚರಣೆಯ ಸಂಧರ್ಭದಲ್ಲಿ ತಾನು ಸಾಮಾಜಿಕ ನ್ಯಾಯ ಇಲಾಖೆಯ ಮಂತ್ರಿಯಾಗಿದ್ದ ಸಂಧರ್ಭದಲ್ಲಿ ಪರಿಶಿಷ್ಟ ಜಾತಿ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ರದ್ದುಪಡಿಸಲು ಬಯಸಿದ್ದೆನೆಂದು ಹೇಳಿದ್ದಾರೆ.  ದೇಶದ ದೊಡ್ಡರಾಜ್ಯ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿಯವರನ್ನು ರಾಷ್ಟ್ರೀಯ ಪಕ್ಷವೊಂದರ ರಾಜ್ಯ ಘಟಕದ ಅಧ್ಯಕ್ಷರಾದ ರೀಟಾ ಜೋಷಿ ಮತ್ತು ರೈತ ನಾಯಕನೆಂದು ಹೆಸರಾದ ಮಹೇಂದ್ರಸಿಂಗ್ ಟಿಕಾಯತ್ ನಂತಹವರೇ ಜಾತಿನಿಂದನೆ ಮಾಡಿ ಅವಮಾನಿಸಿರುವುದನ್ನು ನೋಡಿದರೆ  ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಕಾಯ್ದೆಯನ್ನು ರದ್ದು ಪಡಿಸುವುದರಿಂದ ಹಿಂದೂ ಜಾತಿಗಳು ದೌರ್ಜನ್ಯವನ್ನು ಸಾರಾಸಗಟಾಗಿ ನಿಲ್ಲಿಸಿ ಬಿಡುತ್ತಾರೆಂದಾಗಲೀ, ಇದರಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಗಳು ಸಾಮಾಜಿಕ ನ್ಯಾಯವನ್ನು ಪಡೆಯುತ್ತಾರೆಂದಾಗಲೀ ಶ್ರೀಮತಿ ಮೀರಾಕುಮಾರ್ ಯಾವ ಆಧಾರದ ಮೇಲೆ ಚಿಂತಿಸಿದರೋ ಅರ್ಥವಾಗುತ್ತಿಲ್ಲ. ಯಾವುದೇ ಸ್ವಯಂ ಶ್ರಮವಿಲ್ಲದೇ ಅತ್ಯುನ್ನತ ಸ್ಥಾನಗಳನ್ನು ಪಡೆದಿರುವ ಶ್ರೀಮತಿ ಮೀರಾಜಿಯವರಿಗೆ ‘ಚಮ್ಮಾರ’ ಜನಾಂಗವೆಂಬ ಕಾರಣಕ್ಕಾಗಿಯೇ ಅದನ್ನು ನೀಡಲಾಗಿದೆ  ಎಂಬ ಸತ್ಯದ ಅರಿವಿಲ್ಲದಿರುವುದು ನಮ್ಮ ದುರಂತವೇ ಸರಿ.  ಇಂತಹ ರಾಜಕಾರಣಿಗಳಿಂದ ಒಳ ಮೀಸಲಾತಿಯಂತಹ  ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಪರಿಹಾರ ನಿರೀಕ್ಷಿಸಬಹುದೇ?
ಅಕ್ಟೋಬರ್ 14, 1956 ರಂದು ಬಾಬಾ ಸಾಹೇಬರು ತಮ್ಮ 7 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ದೀಕ್ಷೆ ಪಡೆದ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಬೌದ್ಧ ಧರ್ಮ ಸೇರುವುದರಿಂದ ಅಸ್ಪೃಶ್ಯರು  ಮೀಸಲಾತಿ ಸೌಲಭ್ಯವನ್ನು ಕಳೆದುಕೊಳ್ಳಲಿರುವರೆಂದು ಪ್ರಚಾರ ಮಾಡುವ ಮೂಲಕ ನನ್ನ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನವನ್ನು ನನ್ನ ವಿರೋಧಿಗಳು ಮಾಡುತ್ತಿದ್ದಾರೆ.  ನನ್ನ  ಜನರಿಗೆ ನಾನು ಹೇಳುವುದೇನೆಂದರೆ ಇಂಥಹ ವದಂತಿಗಳಿಗೆ ನೀವು ಕಿವಿಗೊಡಬೇಡಿ.  ಮೀಸಲಾತಿಯನ್ನು ಗಳಿಸಿಕೊಟ್ಟವನಿಗೆ ಮೀಸಲಾತಿಯನ್ನು ಉಳಿಸಿಕೊಳ್ಳುವುದು ಅಸಾಧ್ಯವಲ್ಲ.  ನಿಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ.   ನನ್ನ ಪ್ರಾಣವನ್ನು ಪಣವಿಟ್ಟಾದರೂ ಸರಿ ನಿಮ್ಮ ಹಕ್ಕುಗಳನ್ನು ಉಳಿಸಿಯೇ ಉಳಿಸುತ್ತೇನೆ. ನನ್ನ ಜನರು ಮೀಸಲಾತಿ ಸೌಲಭ್ಯ ಕಳೆದುಕೊಳ್ಳುವುದರಿಂದ ಖಾಲಿಯಾಗುವ ಹುದ್ದೆಗಳನ್ನು ಬ್ರಾಹ್ಮಣರು, ರಜಪೂತರು ತುಂಬುವುದಾದರೆ ನಾನದನ್ನು ಸಂತೋಷದಿಂದ ಸ್ವಾಗತಿಸುತ್ತೇನೆ.  ನನ್ನ ಹೋರಾಟ ಮಾನವನ ಘನತೆ, ಗೌರವಗಳ, ಮರು ಸ್ಥಾಪನೆಗಾಗಿಯೇ ಹೊರತು ಕೇವಲ ಆಸ್ತಿ, ಅಧಿಕಾರಕ್ಕಾಗಿ ಅಲ್ಲ   ಎಂದು ಗುಡುಗಿದ್ದರು.
ಅಂಥಹ ಗಂಡೆದೆಯಿರುವ, ಬದ್ಧತೆ ಇರುವ ನಾಯಕರನ್ನು ಹೊಲೆಯರಾಗಲೀ, ಮಾದಿಗರಾಗಲೀ ಇಂದು ಹೊಂದಿದ್ದಾರೆಯೇ? ಎರಡೂ ಜನಾಂಗಗಳು ಸಾವಿರಾರು ವೈದ್ಯರನ್ನು, ಇಂಜಿನಿಯರ್ಗಳನ್ನು, ನೂರಾರು ಕೆ.ಎ.ಎಸ್. ಅಧಿಕಾರಿಗಳನ್ನು, ಐಎಎಸ್ ಅಧಿಕಾರಿಗಳನ್ನು, ವಕೀಲರನ್ನು, ಶಿಕ್ಷಕರನ್ನು, ಗುಮಾಸ್ತರನ್ನೂ ಸೃಷ್ಟಿಸಿವೆ.   ಆದರೆ ಇವರಿಗೆ ಮಾರ್ಗದರ್ಶನ ಮಾಡಬಲ್ಲ ಒಬ್ಬನೇ ಒಬ್ಬ ಸಮರ್ಥ ನಾಯಕನನ್ನು  ಈ ಜಾತಿಗಳು ಸೃಷ್ಟಿಸಿವೆಯೇ?  1952 ರಿಂದ ಈವರೆವಿಗೆ ನೂರಾರು ಎಂಎಲ್ಎ, ಎಂಪಿಗಳು, ಜಿಲ್ಲಾಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರು  ಗೆದ್ದು ಮಾಜಿಯಾಗಿದ್ದಾರೆ ಸಾವಿರಾರು ಸಂಘಗಳನ್ನು ಕಟ್ಟಲಾಗಿದೆ,  ಲೆಕ್ಕವಿಲ್ಲದಷ್ಟು ಪದಾಧಿಕಾರಿಗಳು  ಆಗಿಹೋಗಿದ್ದಾರೆ.  ಆದರೆ ಇವರಲ್ಲಿ ಒಬ್ಬನೇ ಒಬ್ಬ ಸಮರ್ಥ ನಾಯಕ  ಎದ್ದು ಬಂದಿದ್ದಾನೆಯೆ?  ಸಂದರ್ಭಕ್ಕೆ ತಕ್ಕಂತೆ ಹೇಳಿಕೆಗಳನ್ನು ನೀಡಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಯತ್ನಿಸಿರುವ ಮಾಧ್ಯಮ ಕುಮಾರರನ್ನು ಹೊರತುಪಡಿಸಿದರೆ, ಅಂಬೇಡ್ಕರ್ ಹಾಗೂ ಜಗಜೀವನ್ರಾಂ ಜನ್ಮ ದಿನಚರಣೆಗಳಲ್ಲಿ ತಮ್ಮ  ಉಗ್ರ  ಪ್ರತಾಪ ತೋರುವ ನಟರನ್ನು ಬಿಟ್ಟರೆ ಒಂದು ನಿದರ್ಿಷ್ಟ ಸಿದ್ದಾಂತ ಮತ್ತು ಗುರಿಯ ಆಧಾರದ ಮೇಲೆ ಸಮುದಾಯವನ್ನು ಮುನ್ನಡೆಸಬಲ್ಲ ಮುಂದಾಳುಗಳು ಸೃಷ್ಠಿಯಾಗಿದ್ದಾರೆಯೇ?
ಇಂದು ಅನಾಯಕತ್ವದ ಅರಾಜಕತೆಗೆ ಸಿಕ್ಕು ದಿಕ್ಕು ತಪ್ಪಿರುವ ಹೊಲೆ ಮಾದಿಗರ ಮಧ್ಯೆ ಇಂಥದ್ದೊಂದು ಭಿನ್ನಾಭಿಪ್ರಾಯ ಮೂಡಲು ಕಾರಣವೇನು?  ಇದು ಬಗೆಹರಿಸಲಾಗದ ಸಮಸ್ಯೆಯೇ? ಇಷ್ಟಕ್ಕೂ ಈ ಎರಡೂ ಜಾತಿಗಳು ಒಂದಾಗಲೇಬೇಕೆ? ಒಂದಾಗುವುದೆಂದರೆ ಹೇಗೆ?  ಏತಕ್ಕಾಗಿ ಒಂದಾಗಬೇಕು? ಒಂದಾಗದಿದ್ದರೆ ಏನಾಗಬಹುದು? ಒಂದಾಗಲು ಇರುವ ತೊಡಕುಗಳೇನು?  ಐತಿಹಾಸಿಕವಾಗಿ ಈ ಎರಡೂ ಜಾತಿಗಳ ನಡುವೆ ಇರುವ ಸಂಬಂಧವೆಂಥದು?  ಹೊಲೆಯರು ಬಲಗೈ ಆದರೆ, ಮಾದಿಗರು ಎಡಗೈ ಆದದ್ದೇಕೆ?  ಹೊಲೆಯರು ಬಾಬಾ ಸಾಹೇಬರನ್ನು ತಮ್ಮ ಆದರ್ಶವಾಗಿ ಸ್ವೀಕರಿಸಿದ್ದೇಕೆ?  ಮರಾಠಿ ಮಾತೃ ಭಾಷೆಯಾಗಿ ಹೊಂದಿರುವ ಬಾಬಾ ಸಾಹೇಬರಿಗೂ ಕನ್ನಡದ ಹೊಲೆಯರಿಗೂ ಇರುವ ಸಂಬಂಧವೇನು?  ಮಾದಿಗರು ಜಗಜೀವನ್ ರಾಂರವರನ್ನು ಸ್ವೀಕರಿಸಿದ್ದೇಕೆ? ಕನ್ನಡ ಮತ್ತು ತೆಲುಗುಗಳನ್ನು ಮಾತೃ ಭಾಷೆಯಾಗಿ ಹೊಂದಿರುವ ಮಾದಿಗರಿಗೂ ಬಿಹಾರದ ಹಿಂದಿ ಮಾತನಾಡುವ ಜಗಜೀವನ್ರಾಂ ರವರಿಗೂ ಯಾವ ಸಂಬಂಧ? ಬಾಬಾ ಸಾಹೇಬರನ್ನು ಆದರ್ಶವೆಂದು ಹೇಳುವ ಹೊಲೆಯರೆಲ್ಲರೂ ಅವರ ಮಾರ್ಗವನ್ನು  ಖಂಡಿತವಾಗಿಯೂ ಪಾಲಿಸುತ್ತಿದ್ದಾರೆಯೇ?  ಮಾದಿಗರಲ್ಲಿ ಅಂಬೇಡ್ಕರ್ ವಾದಿಗಳಿಲ್ಲವೆ?  ಮಾದಿಗರು ಜಗಜೀವನ್ರಾಂರವರನ್ನು ಕಾಯಾ ವಾಚಾ ಮನಸಾ ಒಪ್ಪಿಕೊಂಡಿದ್ದಾರೆಯೇ?  ಹೊಲೆಯರೇಕೆ ಜಗಜೀವನ್ರಾಂರವರನ್ನು ಒಪ್ಪುವುದಿಲ್ಲ? ಬಾಬಾ ಸಾಹೇಬರನ್ನು ಒಪ್ಪದ ಮಾದಿಗರಿಲ್ಲವೆ?  ಬದುಕಿನುದ್ದಕ್ಕೂ ಗಾಂಧಿ ಮತ್ತು ಗಾಂಧಿವಾದವನ್ನು ವಿರೋಧಿಸಿದ ಬಾಬಾ ಸಾಹೇಬರ ಸಿದ್ಧಾಂತವನ್ನು ಅನುಸರಿಸಬೇಕೆ?  ಅಥವಾ ಗಾಂಧಿವಾದಿ ಜಗಜೀವನರಾಂರವರನ್ನು ಅನುಸರಿಸಬೇಕೆ?  ಚಮ್ಮಾರರೇಕೆ ಜಗಜೀವನರಾಂರವರನ್ನು ಆದರ್ಶವಾಗಿ ಸ್ವೀಕರಿಸದೆ ಬಾಬಾ ಸಾಹೇಬರನ್ನು ಸ್ವೀಕರಿಸಿದರು?  ಮೀಸಲಾತಿ ಕಲ್ಪಿಸಿಕೊಡುವಲ್ಲಿ ಜಗಜೀವನರಾಂ ರವರು ವಹಿಸಿದ ಪಾತ್ರವೇನು?  ಬಾಬಾ ಸಾಹೇಬರ ಮತ್ತು ಜಗಜೀವನರಾಂ ರವರ ನಡುವೆ ಏಂತಹ ಸಂಬಂಧವಿತ್ತು?  ಹಿಂದೂಗಳನ್ನು ಬದಲಾಯಿಸಲಾಗದೆಂದು ತೀಮರ್ಾನಿಸಿದ ಬಾಬಾ ಸಾಹೇಬರು ಬೌದ್ಧ ಧರ್ಮವನ್ನು ಸ್ವೀಕರಿಸಿದಾಗ ಜಗಜೀವನರಾಂ ರವರೇಕೆ ಅವರನ್ನು ಅನುಸರಿಸಲಿಲ್ಲ?
ಇಂತಹ ನೂರಾರು ಪ್ರಶ್ನೆಗಳು ಸಾವಿರಾರು ಜನ ಹೊಲೆಮಾದಿಗರಲ್ಲಿ ಮನೆಮಾಡಿದೆ.  ಆದರೆ, ಇದಕ್ಕೆ ಉತ್ತರ ಹುಡುಕುವ ಸಣ್ಣ ಪ್ರಯತ್ನವನ್ನೂ ಸಹಾ ಯಾವುದೇ ಹೊಲೆಮಾದಿಗ ಬರಹಗಾರ ಇದುವರೆವಿಗೂ ಮಾಡಿಲ್ಲ.  ಮನಸ್ಸು ಒಂದಾಗಬೇಕಾದರೆ ಮನದೊಳಗಿನ ಗೊಂದಲ ಮೊದಲು ನಿವಾರಣೆ ಆಗಬೇಕು.  ಗೊಂದಲ ನಿವಾರಿಸದಿದ್ದರೆ ಇಬ್ಬರು ವ್ಯಕ್ತಿಗಳೇ ಜೊತೆಯಾಗಲು ಅಸಾಧ್ಯವಿರುವಾಗ ಎರಡು ಪ್ರಮುಖ ಜನಾಂಗಗಳ ಮಧ್ಯೆ ಬಲಿಷ್ಠವಾದ ಬಂಧನ ಸೃಷ್ಟಿಸಲು ಹೇಗೆ ಸಾಧ್ಯ?  ಸತ್ಯವನ್ನು ಸತ್ಯವೆಂದು ತಿಳಿ, ಸುಳ್ಳನ್ನು ಸುಳ್ಳೆಂದು ತಿಳಿ ಎಂದ ಭಗವಾನ್ ಬುದ್ಧರ ಧಮ್ಮದ ತಿರುಳನ್ನು ಎರಡೂ ಜನಾಂಗದ ಬುದ್ಧಿಜೀವಿಗಳು ಅರಿತಿದ್ದಾರೆ.  ಆದರೂ ಇವರು ಸತ್ಯವನ್ನು ಸ್ವೀಕರಿಸಿ ಸುಳ್ಳನ್ನು ನಿರಾಕರಿಸಲು ಮುಂದಾಗದಿರುವುದು ಸೋಜಿಗವೇ ಸರಿ.  ಮೇಲ್ಕಂಡ ವಿಚಾರಗಳ ಬಗ್ಗೆ ಒಂದು ಗ್ರಂಥವನ್ನೇ ಬರೆಯಬಹುದು.  ಆದರೆ, ಇಲ್ಲಿ ಕೆಲವು ಅಂಶಗಳನ್ನು ಮಾತ್ರ ಪ್ರಸ್ತಾಪಿಸಿ ಕವಿದಿರುವ ಕಾಮರ್ೊಡವನ್ನು ಸ್ವಲ್ಪವಾದರೂ ಸರಿಸುವ ಪ್ರಯತ್ನ ಮಾಡುತ್ತೇನೆ.
ಸುಳ್ಳನ್ನು ನಿರಾಕರಿಸಬೇಕಾದರೆ ಮೊದಲು ಸತ್ಯದ ಶೋಧನೆಯಾಗಬೇಕು.  ಸತ್ಯದ ಬೆಳಕಿನ ಮುಂದೆ ಸುಳ್ಳಿನ ಕಾಮರ್ೊಡ ತಂತಾನೇ ಕರಗಿ ಹೋಗುತ್ತದೆ.  ಇಲ್ಲಿ ನಾನೊಂದು ಘಟನೆಯನ್ನು ದಾಖಲಿಸುತ್ತೇನೆ.  ಒಮ್ಮೆ ನನ್ನ ಬಂದು ಅಧಿಕಾರಿಗಳೊಬ್ಬರ ಮನೆಗೆ ಹೋಗಿದ್ದೆ. ಅವರ ಇಬ್ಬರು ಮಕ್ಕಳು ಬೆಂಗಳೂರಿನ ಇಂಗ್ಲೀಷ್ ಮಾಧ್ಯಮದ ಪ್ರತಿಷ್ಠಿತ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅವರ ಮನೆಯ ದೇವ(?)ರ ಕೋಣೆಯಲ್ಲಿ ಚಾಮುಂಡೇಶ್ವರಿ, ಗಣಪತಿ, ಲಕ್ಷ್ಮಿ, ಸರಸ್ವತಿ, ತಿರುಪತಿ, ಮಂಜುನಾಥ ಮತ್ತು ಸತ್ಯ ಸಾಯಿಬಾಬಾ ಇತ್ಯಾದಿ ಫೋಟೋಗಳಿದ್ದವು.  (ಈ ದೇವ(?)ರುಗಳು ಹಿಂದುಗಳಾದದ್ದಕ್ಕೆ ಬೇರೆಯದೇ ಇತಿಹಾಸವಿದೆ.  ಅದನ್ನು ಬೇರೊಂದು ಲೇಖನದಲ್ಲಿ ವಿವರಿಸಿದ್ದೇನೆ)  ಒಂದೇ ಒಂದು ಬಾಬಾ ಸಾಹೇಬರ ಮತ್ತು ಬುದ್ಧರ ಚಿತ್ರ ಅಲ್ಲಿರಲಿಲ್ಲ.  ನನಗೆ ಅಲ್ಲಿ ಹೆಚ್ಚು ಹೊತ್ತು ಇರಬೇಕೆನಿಸಲಿಲ್ಲ.  ಒಂದು ರೀತಿಯ ಕಸಿವಿಸಿಯಿಂದಲೇ ನನ್ನ ಬಂದುವನ್ನು ಕೇಳಿದೆ.
ನಾನು: ಈ ಫೋಟೋದಲ್ಲಿರುವವರಿಗೂ ನಿಮಗೂ ಏನು ಸಂಬಂಧ?  ನಿಮ್ಮ ಮಕ್ಕಳಿಗೆ ಸತ್ಯ ತಿಳಿಯುವುದು ಬೇಡವೆ?  ಏನೂ ತಿಳಿಯದ ಮುಗ್ಧ ಮಕ್ಕಳ ಮನಸ್ಸಿನಲ್ಲಿ ಸುಳ್ಳನ್ನೇಕೆ ತುಂಬುತ್ತೀರಿ.  ನೀವು ಹೇಳುವ / ಹೇಳದಿರುವ ಸುಳ್ಳಿನಿಂದ ಮಕ್ಕಳು ದುರ್ಬಲರಾಗುವುದಿಲ್ಲವೇ?  ಸುಳ್ಳಿನ ಅಡಿಪಾಯದ ಮೇಲೆ ಬೆಳೆದ ಮಕ್ಕಳ ಭವಿಷ್ಯದಲ್ಲಿ ಎದುರಾಗುವ ಸತ್ಯವನ್ನು ಎದುರಿಸಲು ಹೇಗೆ ಸಾಧ್ಯ?  ನಿಮ್ಮ ಮಕ್ಕಳನ್ನು ನೀವೇ ದುರ್ಬಲಗೊಳಿಸಿದಂತಾಗುವುದಿಲ್ಲವೆ?
ನನ್ನ ಪ್ರಶ್ನೆ ಅರ್ಥವಾಗದ ಆತ ಪೆದ್ದುನಗೆ ನಕ್ಕ.ಆತನ ಹೆಂಡತಿ ನನ್ನ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿದರು.  ಈತ ಸುಮ್ಮನೆ ನಕ್ಕು ಮೌನವಾಗಿ ಸಮ್ಮತಿ ನೀಡುತ್ತಿದ್ದ.  ಸಿಟ್ಟು, ನೋವು ನನ್ನನ್ನು ಆವರಿಸಿತು.
ಆತನ ಹೆಂಡತಿ: ನಮಗೆ ಇತ್ತೀಚೆಗೆ ತುಂಬಾ ತೊಂದರೆಯಾಗಿತ್ತು ಶಿರಡಿ ಸಾಯಿಬಾಬನ ಪೂಜೆ ನಂತರ ನಮ್ಮ ಸಮಸ್ಯೆಗಳೆಲ್ಲಾ ಪರಿಹಾರವಾಯಿತು.
ಎಂದು ಸಾಯಿಬಾಬನ ಫೋಟೋ ಇರುವುದಕ್ಕೆ ಸಮಜಾಯಿಷಿ ನೀಡಿದರು.
 ನಾನು: ಹಾಗಾದರೆ  ಉಳಿದ ಫೋಟೋಗಳು ವೇಸ್ಟ್ ಅಲ್ಲವೆ?  ಅದನ್ನೆಲ್ಲಾ ಡಸ್ಟ್ಬಿನ್ಗೆ ಹಾಕಬಾರದೆ?
 ನನ್ನ ಬಂಧು: ಅಯ್ಯೋ! ಹಾಗೆ ಮಾಡಲು ಸಾಧ್ಯವೆ?  ಅವರೆಲ್ಲಾ ದೇವರುಗಳಲ್ಲವೆ?  ಆತನ ಮುಖದಲ್ಲಿ ಗಾಬರಿ ಎದ್ದು ಕಾಣುತ್ತಿತ್ತು.
ನಾನು: ಶಿರಡಿ ಸಾಯಿಬಾಬಾ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದರೆ? ಇನ್ನುಳಿದ ದೇವರುಗಳೆಲ್ಲಾ ಕಮಿಟಿಯ ಮೆಂಬರ್ಗಳಾಗಿದ್ದರೆ?  ಹೊಲೆಮಾದಿಗರನ್ನು ಜಾತಿವಾದಿಗಳು ಕತ್ತರಿಸಿ ಹಾಕಿದಾಗ, ರೇಪ್ ಮಾಡಿದಾಗ, ದೇವಸ್ಥಾನಕ್ಕೆ ಪ್ರವೇಶ ನೀಡದೆ ಹೊರಗಿಟ್ಟಾಗ ಈ ದೇವರುಗಳೆಲ್ಲಿದ್ದರು?  ಅವರೇಕೆ ನಮ್ಮ ಪರವಾಗಿ ನಿಂತು ಜಾತಿವಾದಿಗಳಿಗೆ ಬುದ್ಧಿ ಹೇಳಲಿಲ್ಲ?  ಮೊದಲು ನಿಮಗೆಲ್ಲಾ ನೌಕರಿ ಸಿಗಲು ಕಾರಣರಾಗಿರುವ  ಒಂದು ಅಂಬೇಡ್ಕರ್ ಫೋಟೋ ಹಾಕಿ.
ನನ್ನ ಬಂಧು: ಅಯ್ಯೋ ನಿನ್ನ ಮಾತು ಕೇಳಿ ಹಾಗೆ ಮಾಡಲು ಸಾಧ್ಯವೇ?  ನಿಜ ನಾವೆಲ್ಲಾ ಈ ಮಟ್ಟಕ್ಕೆ ಬರಲು ಅಂಬೇಡ್ಕರ್ರವರೇ ಕಾರಣ. ಆದರೆ ದೇವರ ಫೋಟೋಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ.  ಈ ಏರಿಯಾದಲ್ಲಿ  Others ಸೇ ಜಾಸ್ತಿ ನಮ್ಮವರು ಯಾರೂ ಇಲ್ಲ ಆಮೇಲೆ ನಮ್ಮವರಿಗೆ ಇಲ್ಲಿ ಮನೆಯನ್ನೇ ಕೊಡುವುದಿಲ್ಲ.  ಇನ್ನು ನಿನ್ನ ಮಾತು ಕೇಳಿ ಅಂಬೇಡ್ಕರ್ ಫೋಟೋ ಹಾಕಿದರೆ ನಾವು ಜಾಗ ಖಾಲಿ ಮಾಡಬೇಕಾಗುತ್ತದೆ ಅಷ್ಟೆ.  ಆತ ತನ್ನ ಆತಂಕವನ್ನು ವ್ಯಕ್ತ ಮಾಡಿದ.
ನಾನು: ನಿಮ್ಮಂತಹ ಅಧಿಕಾರಿಗಳೇ ಇಂತಹ ಕೀಳರಿಮೆ ಹೊಂದಿರುವುದು ಒಳ್ಳೆಯದಲ್ಲ.  ಬಾಬಾ ಸಾಹೇಬರು ನಿಮ್ಮಂತೆಯೇ ಬದುಕಿದ್ದರೆ ನಾವು ಈ ಮಟ್ಟಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ.  ನೀವೇ ಧೈರ್ಯವಂತರಾಗದಿದ್ದರೆ ನಿಮ್ಮ ಮಕ್ಕಳು ಹೇಡಿಗಳಾಗುವುದು ಖಂಡಿತ. ಸುಳ್ಳು ಹೇಳಿ ಬದುಕುವುದಕ್ಕಿಂತ ಸತ್ಯ ಹೇಳಿ ಸಾಯುವುದು ಮೇಲು. ನೀವು ಇಲ್ಲಿ ಅನಾಮಿಕರಂತೆ ಬದುಕುವುದರಿಂದ ನೀವೂ ಬದಲಾಗುವುದಿಲ್ಲ. ಹಾಗೆಯೇ, ನಿಮ್ಮ ನೆರೆಹೊರೆಯಾಗಿರುವ ಇತರೆ ಜಾತಿಗಳಲ್ಲೂ ಸಹ ಬದಲಾವಣೆ ತರಲು ಸಾಧ್ಯವಿಲ್ಲ.
ಇಂತಹ ಹೇಡಿಗಳು ಹೊಲೆಮಾದಿಗರಲ್ಲಿ ಯಥೇಚ್ಚವಾಗಿದ್ದಾರೆ.  ಬಹುತೇಕ ಎಲ್ಲಾ ಟಿಜಿಜಡಿಠಡಿ ಅಚಿಣಜ ಗಳಲ್ಲೂ ಇಂತಹವರನ್ನು ಕಾಣಬಹುದು.  ಹೊಲೆಮಾದಿಗರಲ್ಲಿ ಅಕ್ಷರಸ್ಥರ ಸಂಖ್ಯೆ ಶೇ.50 ರಿಂದ ಶೇ.60  ಇದೆಯಾದರೂ ಎಸ್.ಎಸ್.ಎಲ್.ಸಿ. ದಾಟಿದವರ ಸಂಖ್ಯೆ ಕೇವಲ 20% ಮಾತ್ರ.  ಒಟ್ಟು ಜನಸಂಖ್ಯೆಯಲ್ಲಿ ಕೇವಲ 1 1/2% ಯಿಂದ 2% ಮಾತ್ರ ಸಕರ್ಾರಿ ನೌಕರರಿದ್ದಾರೆ.  ಈ 2% ನೌಕರರಲ್ಲಿ ಸಿ ಮತ್ತು ಡಿ ದಜರ್ೆಯವರೇ ಅಧಿಕ.  ಜನಾಂಗದ ಬಗ್ಗೆ ಕಾಳಜಿ ಇರುವವರು ಸಿಗುವುದಾದರೆ ಈ ವರ್ಗದಲ್ಲೆ.  ಪದವಿ, ಸ್ನಾತಕೋತ್ತರ ಪದವಿ ಮತ್ತು ಸಂಶೋಧನೆ ಮಾಡುವ ವಿದ್ಯಾಥರ್ಿಗಳು ಜನಾಂಗದ ಒಟ್ಟು ಜನಸಂಖ್ಯೆಯ 5% ಇರಬಹುದು.  ಈ ವಿದ್ಯಾಥರ್ಿಗಳೇ ಎಲ್ಲಾ ಚಳುವಳಿಗಳ, ಚಿಂತನೆಗಳ, ಭಿನ್ನಾಭಿಪ್ರಾಯಗಳ  ಮುಖ್ಯ ಪ್ರವರ್ತಕರಾಗಿದ್ದಾರೆ.  ಇವರ ಭಾವನೆಗಳನ್ನು ಮತ್ತು ಸಾಮಥ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಎರಡೂ ಜನಾಂಗಗಳ ರಾಜಕೀಯ ನಾಯಕರು ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ.  ಇವರ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಈ ವಿದ್ಯಾಥರ್ಿ ಸಮುದಾಯವನ್ನು ಪ್ರಚೋದಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ.  ಅವಿದ್ಯಾವಂತ ಹೊಲೆಮಾದಿಗರನ್ನು ರಾಜಕೀಯ ಕಾರ್ಯಕ್ರಮಗಳಿಗೆ ಲಾರಿಗಳಲ್ಲಿ ಸಾಗಿಸಲು, ಚುನಾವಣೆಗಳಲ್ಲಿ ಓಟು ಹಾಕಿಸಲು, ಹಣ ಮತ್ತು ಹೆಂಡ ಹಂಚಲು ಈ ವಿದ್ಯಾಥರ್ಿಗಳು ಗುತ್ತಿಗೆದಾರರಂತೆ ಕೆಲಸ ಮಾಡುತ್ತಾರೆ.   ಎರಡೂ ಜಾತಿಗಳಲ್ಲಿ ಜನಾಂಗದ ಬಗ್ಗೆ ಕಾಳಜಿ ಇರುವವರು ವಿದ್ಯಾವಂತ ಯುವಕರು, ಸಕರ್ಾರಿ ನೌಕರರು ಮತ್ತು ಅವಿದ್ಯಾವಂತರೂ ಸೇರಿದಂತೆ 10% ಸಿಗಬಹುದು.  ಅದರಲ್ಲೂ ನಿದರ್ಿಷ್ಠ ಸಿದ್ದಾಂತ ಮತ್ತು ಚಿಂತನೆಗಳನ್ನು ಅರಗಿಸಿಕೊಂಡು ಮಾರ್ಗದರ್ಶನ ಮಾಡಬಲ್ಲವರು ಸಿಗುವುದು ತೀರಾ ಅಪರೂಪ.  ಇಂತಹವರು ಹೆಚ್ಚೆಂದರೆ ಲಕ್ಷಕ್ಕೊಬ್ಬರು ಸಿಗಬಹುದು.  ಇಂತಹ ವ್ಯಕ್ತಿಗಳ ವಿರುದ್ಧ ಸುಳ್ಳು ಮತ್ತು ಗಾಸಿಪ್ಗಳ ಮೂಲಕ ಮುಗ್ಧ ಜನರನ್ನು ಎತ್ತಿಕಟ್ಟುವವರು ಎಲ್ಲೆಡೆಯೂ ಇದ್ದಾರೆ.  ಈ ಬಗ್ಗೆ ಬಾಬಾ ಸಾಹೇಬರು ಪಾಕಿಸ್ತಾನ ಅಥವಾ ಭಾರತ ವಿಭಜನೆ ಕೃತಿಯಲ್ಲಿ ಹೀಗೆ ಹೇಳುತ್ತಾರೆ;  ತಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಒಬ್ಬರು ತರುವ ಯಾವುದೇ ಸುಧಾರಣೆಗಳನ್ನು ಇನ್ನೊಬ್ಬ ಅಸೂಯೆಯಿಂದ ಕಾಣುವುದು, ಇಂಥ ಒಂದು ಮುಜಗರದ ಸಂಗತಿ.  ಈ ಬದಲಾವಣೆಯ ಪ್ರಭಾವದಿಂದ ಪ್ರತಿಭಟನೆಯ ಸಾಮಥ್ರ್ಯ ವೃದ್ಧಿಯಾದರಂತೂ ಇದು ಅವರಲ್ಲಿ ವೈರತ್ವವನ್ನೇ ಸೃಜಿಸುತ್ತದೆ.  ಈ ಆಂತರಿಕ ಭಿನ್ನತೆಯಿಂದಾಗಿ ಹೊಲೆಯ ಮತ್ತು ಮಾದಿಗ ಜಾತಿಯನ್ನು ಒಂದು ದಿಟ್ಟ ಸಮುದಾಯವನ್ನಾಗಿ ಮಾಡುವ ಪ್ರಕ್ರಿಯೆಗೆ ಹಿನ್ನೆಡೆಯಾಗಿದೆ.  ಸಾಮಾಜಿಕ ಸ್ಥಿತಿಯಲ್ಲಿ ಯಾವುದೇ ಪ್ರಗತಿ ಕಾಣದೇ ನಿಂತಲ್ಲೇ ಇದೆ.  ರಾಜಕೀಯವಾಗಿ ಗುಲಾಮರಾಗಿದ್ದರೆ ಆಥರ್ಿಕವಾಗಿ ಬೇಡುವ ಸಮಾಜವಾಗಿಯೇ ಉಳಿದಿದೆ.  ಇದಕ್ಕಾಗಿ ನಾವು ಪ್ರಬಲ ಜಾತಿಗಳನ್ನು ಟೀಕಿಸುವುದರಲ್ಲೇ ಕಾಲ ಕಳೆಯುತ್ತಿದ್ದೇವೆ. ವಾಸ್ತವವಾಗಿ ನಮ್ಮ ಸೋಲಿಗೆ ನಮ್ಮ ಆಂತರಿಕ ಭಿನ್ನಾಭಿಪ್ರಾಯಗಳು ಕಾರಣವೇ ಹೊರತು ಬಾಹ್ಯಶಕ್ತಿಗಳಲ್ಲ.  ನಮ್ಮ ಮನೆಯ ಮಗುವಿನ ಉದ್ಧಾರಕ್ಕೆ ಎದುರು ಮನೆ ಮಗುವನ್ನು ಜಿಗುಟ ಬೇಕಾಗಿಲ್ಲ.  ನಮ್ಮ ಮಗುವನ್ನು ಮುದ್ದು ಮಾಡಿದರಷ್ಟೇ ಸಾಕು.
ಇನ್ನು ಮುಂದೆ ನಮ್ಮ ಇತಿಹಾಸವನ್ನು ನೋಡೋಣ. ಮಾತಂಗ ಮೂಲದ ಮಾದಿಗರು ಮತ್ತು ನಾಗ ಮೂಲದ ಹೊಲೆಯರು ಒಂದು ಕಾಲದಲ್ಲಿ ಬುದ್ಧನ ಅನುಯಾಯಿಗಳಾಗಿ ತಮ್ಮದೇ ರಾಜ್ಯಗಳನ್ನು ಕಟ್ಟಿ ಆಳಿದ್ದಾರೆ.  ಕ್ರಿಸ್ತಶಕ 400 ರಿಂದ ಕ್ರಿಸ್ತಶಕ 18ನೇ ಶತಮಾದವರೆಗೆ ಗುಪ್ತರ ಕಾಲದಿಂದ ನವಾಬರ ವರೆಗೆ ನಡೆದ ಅತಿಕ್ರಮಣ ಮತ್ತು ಸತತ ಯುದ್ಧಗಳಿಂದ ಹೊಲೆಮಾದಿಗರು ಅಸ್ಪೃಶ್ಯರಾಗಿದ್ದಾರೆ.  ಒಂದು ಪುರಾಣದ ಕಥೆಯ ಪ್ರಕಾರ ಹೊಲೆಯ ಮತ್ತು ಮಾದಿಗರಿಬ್ಬರೂ ಅಣ್ಣ ತಮ್ಮಂದಿರು.  ಅವರಿಬ್ಬರೂ ಶಿವನನ್ನು ಕುರಿತು ತಪಸ್ಸು ಮಾಡುತ್ತಾರೆ.  ಪ್ರತ್ಯಕ್ಷನಾದ ಶಿವ ಹೊಲೆಯನನ್ನು ಬಲಗೈನಿಂದಲೂ, ಎಡಗೈಯಿಂದ ಮಾದಿಗನನ್ನು ಆಲಂಗಿಸಿಕೊಳ್ಳುತ್ತಾನೆ.  ಅಂದಿನಿಂದ ಇವರು ಎಡಗೈ ಮತ್ತು ಬಲಗೈ ಆದರೆಂದು ಕಥೆ ಹೇಳುತ್ತದೆ.  ಆದರೆ ಖಚಿತವಾಗಿ ಐತಿಹಾಸಿಕವಾಗಿ ಇದಕ್ಕೆ ಸಮರ್ಥ ದಾಖಲೆಗಳಿಲ್ಲ.  ಆದರೆ, ಬಾಬಾ ಸಾಹೇಬರು ಭಾರತದ ಇತಿಹಾಸವನ್ನು ಪುರಾಣವನ್ನಾಗಿ ಮಾಡಲಾಗಿದೆ ಎಂದಿದ್ದಾರೆ.  ಈ ಹಿನ್ನೆಲೆಯನ್ನು ನಿರಾಕರಿಸದೆ ಸಂಶೋಧನೆ ಮಾಡಬೇಕು. ಆದರೆ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಬ್ರಾಹ್ಮಣರನ್ನು ಹೊರತುಪಡಿಸಿದರೆ ಇಡೀ ಸಮಾಜವೇ ಎಡಗೈ ಮತ್ತು ಬಲಗೈ ಪಂಗಡವೆಂದು ವಿಭಜಿತವಾಗಿತ್ತು. ಈ ಕೆಳಗಿನ ಪಟ್ಟಿ ನೋಡಿ.
ಪಣದ ಬಲಗೈ ಪಟ್ಟಿ:
1. ಬಣಜಿಗ
2. ಒಕ್ಕಲಿಗ
3. ಗಾಣಿಗ (ಒಂಟಿತ್ತು)
4. ರಂಗಾರೆ (ಬಣ್ಣ ಹಾಕುವವರು)
5. ಲಾಡ (ಮರಾಠಿ ವ್ಯಾಪಾರಸ್ಥರು)
6. ಗುಜರಾತಿ (ಗುಜರಾತಿ ವ್ಯಾಪಾರಸ್ಥರು)
7. ಕಾಮಾಟಿ (ಕೂಲಿಗಾರರು)
8. ಜೈನ ಅಥವಾ ಕೋಮಟಿ
9. ಕುರುಬ
10. ಕಂಬಾರ
11. ಅಗಸ
12. ಬೆಸ್ತ
13. ಪದ್ಮಸಾಲಿ
14. ನಾಯಿಂದ (ಕ್ಷೌರಿಕ ಜನಾಂಗ)
15. ಉಪ್ಪಾರ
16. ಚಿತ್ರಗಾರ
17. ಗೊಲ್ಲ
18. ಹೊಲೆಯ
ಪಣದ ಎಡಗೈ ಪಟ್ಟಿ:
1. ಪಂಚಾಲರು
2. ನಗರ್ತರು (ಭೇರಿ)
3. ಹೆಗ್ಗಾಣಿಗ (ಜ್ಯೋತಿ ನಗರ ಶೆಟ್ಟಿ)
4. ದೇವಾಂಗ
5. ಬೇಡ / ವಾಲ್ಮೀಕಿ ಕುಲಸ್ಥರು
6. ಯಾಕುಲ / ತೊರೆಯ / ಏಕಲಿಯವರು
7. ಪಳ್ಳಿ /ತಿಗಳ (ಚಂದ್ರ ವಂಶದ ವಹ್ನಿ ಕುಲದವರು)
8. ಕೋಮ ಟಿ
9. ಮಾದಿಗ (ಪಂಚ ಜಾಂಬುಕುಲಗಳು)
ಆದರೆ ಇಂದು ಮೇಲ್ಕಂಡ ಜಾತಿಗಳಲ್ಲಿ ಹೊಲೆ ಮಾದಿಗರನ್ನು ಬಿಟ್ಟರೆ ಉಳಿದ ಎಲ್ಲಾ ಜಾತಿಗಳು ತಮ್ಮ ಎಡ ಬಲದ ಮೂಲವನ್ನು ಕಳೆದುಕೊಂಡಿವೆ.
ಮೀಸಲಾತಿಯ ಇತಿಹಾಸ: ವಿದ್ಯೆ, ಆಸ್ತಿ, ಅಧಿಕಾರ, ಆಯುಧಗಳನ್ನು ಕಳೆದುಕೊಂಡು ಇಂದು ಎಡಗೈ ಬಲಗೈಗಳಾಗಿ ಕದನಕ್ಕೆ ನಿಂತಿರುವ ಹೊಲೆಮಾದಿಗರಿಗೆ ಮೀಸಲಾತಿಯ ಇತಿಹಾಸವನ್ನು ನೆನಪು ಮಾಡಬಯಸುತ್ತೇನೆ.
1837 ರಲ್ಲಿ ‘ಮೆಕಾಲೆಯ ಶಿಕ್ಷಣ ನೀತಿ’ ಆಧಾರದ ಮೇಲೆ ಜಾರಿಗೊಂಡ ‘ಸಾರ್ವಜನಿಕ ಶಿಕ್ಷಣ ಪದ್ಧತಿ’ಯಿಂದ ಪ್ರಾರಂಭವಾದ ಕ್ರೈಸ್ತ ಶಾಲೆಯಲ್ಲಿ ವಿದ್ಯೆ ಕಲಿತ ‘ಮಾಲಿ’ ಜಾತಿಯ ಮಹಾತ್ಮ ಜ್ಯೋತಿರಾವ್ ಬಾಪುಲೆ 1848 ರಲ್ಲಿ ತಮ್ಮ ಶ್ರೀಮತಿ ತಾಯಿ ಸಾವಿತ್ರಿ ಬಾಪುಲೆಯವರೊಡಗೂಡಿ ಅಸ್ಪೃಶ್ಯರಿಗೆ ಶಾಲೆ ತೆರೆಯುವ ಮೂಲಕ ಅಕ್ಷರದ ದೀಪ ಹಚ್ಚಿದರು.  ಅವರು 1873 ರಲ್ಲಿ ಪ್ರಾರಂಭಿಸಿದ ಸತ್ಯ ಶೋಧಕ ಸಮಾಜದಿಂದ ಪ್ರಭಾವಿತರಾದ ಕೊಲ್ಲಾಪುರದ ದೊರೆ ಛತ್ರಪತಿ ಶಾಹು ಮಹಾರಾಜರು ತಮ್ಮ ಜನ್ಮದಿನವಾದ ಜುಲೈ 26, 1902 ರಂದು ಬ್ರಾಹ್ಮಣೇತರರಿಗೆ 50% ಮೀಸಲಾತಿಯನ್ನು ತಮ್ಮ ಸಂಸ್ಥಾನದಲ್ಲಿ ಜಾರಿಗೆ ತಂದರು.  ಮಹಾರಾಜರ ಈ ತೀಮರ್ಾನವನ್ನು ವಿರೋಧಿಸಿದ  ಲೋಕ ಮಾನ್ಯ ತಿಲಕ್ ಶಾಹು ಮಹಾರಾಜ್ ಅವರನ್ನು ಕೊಲ್ಲುವ ಬೆದರಿಕೆ ಹಾಕಿದರೂ  ಅವರು ಬಗ್ಗಲಿಲ್ಲ. ನಂತರ ಮೈಸೂರು ಒಡೆಯರ್ ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ರವರು 1918 ರಲ್ಲಿ ಆಗಸ್ಟ್ 8 ರಂದು ಅಂದಿನ ಮುಖ್ಯ ನ್ಯಾಯಾಧೀಶರಾಗಿದ್ದ ಸರ್. ಲೆಸ್ಲಿ ಮಿಲ್ಲರ್ರವರ ಅಧ್ಯಕ್ಷತೆಯಲ್ಲಿ ದೇಶದ ಮೊಟ್ಟ ಮೊದಲ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿದರು.  ಇದನ್ನು ವಿರೋಧಿಸಿ 1918 ಡಿಸೆಂಬರ್ 9 ರಂದು ಸರ್. ಎಂ.ವಿಶ್ವೇಶ್ವರಯ್ಯ ನವರು ದಿವಾನ್ ಹುದ್ದೆಗೆ ರಾಜೀನಾಮೆ ನೀಡಿದರು.  ನಂತರ ಮಹಾರಾಜರು 1921 ರಲ್ಲಿ ಬ್ರಾಹ್ಮಣೇತರರಿಗೆ ಶೇ. 75 ಮೀಸಲಾತಿ ನೀಡಿ ಆದೇಶಿಸಿದರು.
1911ರ ಜನಗಣತಿಯಲ್ಲಿ ಮುಸ್ಲಿಂರ ಒತ್ತಾಯದ ಮೇರೆಗೆ ಮೊದಲ ಬಾರಿಗೆ ಹಿಂದುಗಳಲ್ಲದ 429 ಜಾತಿಗಳನ್ನು ಗುರುತಿಸಲಾಯಿತು. ಇವರನ್ನೇ ಮುಂದೆ ಅನುಸೂಚಿತ ಜಾತಿ ಮತ್ತು ವರ್ಗವೆಂದು ಪರಿಗಣಿಸಲಾಯಿತು.  ಇದರ ಆಧಾರದ ಮೇಲೆ ಡಾ||ಬಿ.ಆರ್.ಅಂಬೇಡ್ಕರ್ರವರು 1918ರ  ಸೌತ್ಬರೋ ಆಯೋಗದ ಮುಂದೆ ಅಸ್ಪೃಶ್ಯರಿಗೆ ಮತದಾನದ ಹಕ್ಕು ಮತ್ತು ರಾಜಕೀಯದಲ್ಲಿ ಪ್ರತ್ಯೇಕ ಚುನಾಯಕಗಳನ್ನು ಕೇಳಿದರು.   ಪರಿಣಾಮವಾಗಿ 1919ರಲ್ಲಿ ಮಾಂಟೆಗೊ ಚಲ್ಮ್ಸ್ ಫಡರ್್ ಕಾಯಿದೆ ಜಾರಿಗೆ ಬಂದು ಅಸ್ಪೃಶ್ಯ ವರ್ಗದ ಪ್ರತಿನಿಧಿಗಳನ್ನು ಕೇಂದ್ರ ಮತ್ತು ಪ್ರಾಂತೀಯ ಮಂಡಳಿಗೆ ನಾಮಕರಣಕ್ಕೆ ಅವಕಾಶ ಕಲ್ಪಿಸಲಾಯಿತು.  ನಂತರ 1930ರ ನವೆಂಬರ್ನಲ್ಲಿ ಲಂಡನ್ನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ ಬಾಬಾ ಸಾಹೇಬ್ ಡಾ||ಅಂಬೇಡ್ಕರ್ರವರು ಮತದಾನದ ಹಕ್ಕು, ರಾಜಕೀಯ ಕ್ಷೇತ್ರದಲ್ಲಿ ಪ್ರತ್ಯೇಕ ಚುನಾಯಕಗಳು ಮತ್ತು ಕಾಯರ್ಾಂಗದಲ್ಲಿ ಮೀಸಲಾತಿಯ ಬೇಡಿಕೆ ಇಟ್ಟರು.  ಈ ಸಭೆಗೆ ಗೈರುಹಾಜರಾಗಿದ್ದ ಗಾಂಧೀಜಿ 1931ರ ಎರಡನೇ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಬಾಬಾ ಸಾಹೇಬರು ಕೇಳಿದ್ದ ಎಲ್ಲಾ ಬೇಡಿಕೆಗಳನ್ನು ವಿರೋಧಿಸಿದರು.  ಅಂತಿಮವಾಗಿ ಬ್ರಿಟಿಷ್ ಸಕರ್ಾರ ಡಾ||ಅಂಬೇಡ್ಕರ್ರವರ ಕೋರಿಕೆಯ ಪ್ರತ್ಯೇಕ ಚುನಾಯಕಗಳ ಬದಲಿಗೆ ಮತ್ತು ಗಾಂಧೀಜಿಯವರ ಸಂಯುಕ್ತ ಚುನಾಯಕಗಳ ಬದಲಿಗೆ ವಿಶೇಷ ಚುನಾಯಕಕ್ಕೆ ಅವಕಾಶ ನೀಡುವ  ಕೋಮುವಾರು ತೀರ್ಪನ್ನು ಘೋಷಿಸಿತು.  ಇದನ್ನು ವಿರೋಧಿಸಿದ ಗಾಂಧೀಜಿ ಪೂನಾದ ಯರವಾಡ ಜೈಲಿನಲ್ಲಿ  ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.  ಅಂತಿಮವಾಗಿ ಸೆಪ್ಟೆಂಬರ್ 24, 1932 ರಲ್ಲಿ ವಿಶೇಷ ಚುನಾಯಕಗಳ ಬದಲಿಗೆ ಜಂಟಿ ಚುನಾಯಕಗಳನ್ನು ಜಾರಿಗೊಳಿಸಲು ಬಾಬಾ ಸಾಹೇಬ್ ಡಾ||ಅಂಬೇಡ್ಕರ್ ಮತ್ತು ಗಾಂಧೀಜಿ ನಡುವೆ ಒಪ್ಪಂದ ಏರ್ಪಟ್ಟಿತ್ತು.  ಗಾಂಧೀಜಿಯವರ ಜೀವ ಉಳಿಸಲು ಒಪ್ಪಂದಕ್ಕೆ ಸಹಿ ಹಾಕಿದ ಬಾಬಾ ಸಾಹೇಬರು ನಿಜವಾದ ಅರ್ಥದಲ್ಲಿ ಅಪ್ಪಟ ಅಹಿಂಸಾ ವಾದಿ ನಾಯಕನಾಗಿ ಹೊರಹೊಮ್ಮಿದರು. ಇದೇ ಐತಿಹಾಸಿಕವಾದ ಪೂನಾ ಒಪ್ಪಂದವಾಗಿದೆ.  ನಂತರ 1935ರಲ್ಲಿ ಜಾರಿಗೆ ಬಂದ ಭಾರತ ಸಕರ್ಾರ ಕಾಯಿದೆಯಲ್ಲಿ ಉದ್ಯೋಗ ಮತ್ತು ರಾಜಕೀಯ ಮೀಸಲಾತಿಯನ್ನು ಉಳಿಸಿಕೊಳ್ಳಲು ಅಂಬೇಡ್ಕರ್ ಯಶಸ್ವಿಯಾದರು.  ಆದರೆ, ಸಂವಿಧಾನ ರಚನಾ ಸಭೆಗೆ 1947ರಲ್ಲಿ ಪೂನಾದಿಂದ ಬಾಬಾ ಸಾಹೇಬರನ್ನು ಅವಿರೋಧವಾಗಿ ಆಯ್ಕೆ ಮಾಡುವುದಕ್ಕಿಂತ ಮೊದಲು ನಡೆದ ಘಟನಾವಳಿಗಳು ಯಥಾಪ್ರಕಾರ ಇತಿಹಾಸದಲ್ಲಿ ದಾಖಲಾಗಿಲ್ಲ.   ಬಾಬಾ ಸಾಹೇಬರು ರಾಜ್ಯಾಂಗ ರಚನಾ ಸಭೆಗೆ ಆಯ್ಕೆ ಬಯಸಿ South Bombay ಯಿಂದ ಸ್ಪಧರ್ಿಸಿದಾಗ ಕಾಂಗ್ರೆಸ್ ಮತ್ತು ಎಡಪಂಥೀಯರೆಲ್ಲಾ ಸೇರಿ ಅವರ ಆಪ್ತ ಸಹಾಯಕನಾಗಿದ್ದ ಕಜರೋಳ್ಕರ್ನನ್ನು ಒಮ್ಮತದ ಅಭ್ಯಥರ್ಿಯಾಗಿ ನಿಲ್ಲಿಸಿ ಬಾಬಾ ಸಾಹೇಬರನ್ನು ಸೋಲಿಸುತ್ತಾರೆ.  ಇವರ ಸೋಲಿನಿಂದ ದಿಗಿಲುಗೊಂಡ ಬಂಗಾಳದ ಅಸ್ಪೃಶ್ಯರಾದ ಚಂಡಾಲ ಜನಾಂಗದವರು ಪಶ್ಚಿಮ ಬಂಗಾಳದ ಜೈಸೂರ್ – ಕುಲ್ನಾ ಕ್ಷೇತ್ರದಿಂದ ಮುಸ್ಲಿಂಲೀಗ್ ಅಭ್ಯಥರ್ಿಯಾಗಿ ಗೆದ್ದಿದ್ದ  ಚಂಡಾಲ ಜನಾಂಗದ  ಜೋಗೆಂದ್ರನಾಥ್ ಮಂಡಲ್ ರವರನ್ನು ರಾಜೀನಾಮೆ ಕೊಡಿಸಿ ಅದೇ ಸ್ಥಾನದಿಂದ ಬಾಬಾ ಸಾಹೇಬರನ್ನು ಗೆಲ್ಲಿಸಿದರು.  ಅಲ್ಲದೇ, ಶ್ರೀ.ಜೋಗೇಂದ್ರನಾಥ ಮಂಡಲ್ ರವರು ಸಹ ಬಂಗಾಳದ ಬೇರೊಂದು ಕ್ಷೇತ್ರದಿಂದ ಆಯ್ಕೆಯಾಗುತ್ತಾರೆ.  ಈ ಕಾರಣಕ್ಕೆ ಬಂಗಾಳದ ಚಂಡಾಲರಿಗೆ ಇಡೀ ದೇಶದ ಅಸ್ಪೃಶ್ಯರು ಋಣಿಯಾಗಿರಬೇಕು.  ಚಂಡಾಲರು  ಅಂತಹ ತ್ಯಾಗ ಮಾಡದಿದ್ದರೆ ದೇಶದ ಸಂವಿಧಾನ ಇಂದು ಇರುವಂತೆ ಖಂಡಿತ ಇರುತ್ತಿರಲಿಲ್ಲ.
ಬಾಬಾ ಸಾಹೇಬರು South Bombay ಯಿಂದ ಸ್ಪಧರ್ಿಸಿ ಸೋತು ಜೈಸೂರ್ ಕುಲ್ನಾ ದಲ್ಲಿ ಗೆಲ್ಲುವವರೆಗಿನ ಅವಧಿಯಲ್ಲಿ ಸದರ್ಾರ್ ವಲ್ಲಭಬಾಯಿ ಪಟೇಲ್ ನೇತೃತ್ವದ ಮೂಲಭೂತ ಹಕ್ಕುಗಳ ಸಮಿತಿ 1935ರ ಭಾರತ ಸಕರ್ಾರದ ಕಾಯಿದೆಯಲ್ಲಿ ಅಸ್ಪೃಶ್ಯರಿಗೆ ಕಲ್ಪಿಸಲಾಗಿದ್ದ ಉದ್ಯೋಗ ಮೀಸಲಾತಿಯನ್ನು ರದ್ದುಪಡಿಸಲು ಮುಂದಾಗುತ್ತದೆ.  ಇದರಿಂದಾಗುವ ಭೀಕರ ಪರಿಣಾಮವನ್ನು ಅರಿತ ಬಾಬಾ ಸಾಹೇಬರು ರಾಜ್ಯಾಂಗ ರಚನಾ ಸಮಿತಿಗೆ ಆಯ್ಕೆಯಾಗಿದ್ದ ಅಸ್ಪೃಶ್ಯ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ಸದಸ್ಯರೆಲ್ಲರನ್ನೂ ಭೇಟಿ ಮಾಡಿ ಯಾವುದೇ ಕಾರಣಕ್ಕೂ ಉದ್ಯೋಗ ಮೀಸಲಾತಿಯನ್ನು ತೆಗೆದುಹಾಕದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡುತ್ತಾರೆ.  ಆ ಸಂದರ್ಭದಲ್ಲಿ ಶ್ರೀ.ಬಾಬು ಜಗಜೀವನರಾಂರವರು ಅನಾರೋಗ್ಯದ ನಿಮಿತ್ತ ಈಗಿನ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ.  ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಬಾಬಾ ಸಾಹೇಬರು ಉದ್ಯೋಗದಲ್ಲಿನ ಮೀಸಲಾತಿಯನ್ನು ಹೇಗಾದರೂ ಮಾಡಿ ಉಳಿಸುವಂತೆ ಕಾಂಗ್ರೆಸ್ ಮುಖಂಡರನ್ನು ಒಪ್ಪಿಸಬೇಕೆಂದು ಮನವಿ ಮಾಡುತ್ತಾರೆ.  ಆಗ ಬಾಬೂಜಿ ನನಗೆ ಗಾಂಧೀಜಿ ಮತ್ತು ಕಾಂಗ್ರೆಸ್ ನಾಯಕರ ಮೇಲೆ ಅಪಾರವಾದ ಭರವಸೆ ಇದೆ.  ಅವರು ಒಂದು ವೇಳೆ ಉದ್ಯೋಗ ಮೀಸಲಾತಿಯನ್ನು ರದ್ದುಪಡಿಸಿದರೂ ಸಹ ಅದಕ್ಕೆ ಪಯರ್ಾಯ ವ್ಯವಸ್ಥೆಯನ್ನು ಖಂಡಿತವಾಗಿಯೂ ಮಾಡುತ್ತಾರೆ ಎಂದು ಹೇಳುತ್ತಾರೆ.  ಇದರಿಂದ ನಿರಾಶೆಗೀಡಾದ ಬಾಬಾ ಸಾಹೇಬರು ತೀವ್ರವಾಗಿ ನೊಂದುಕೊಳ್ಳುತ್ತಾರೆ.  ನಂತರ ಜೈಸೂರ್ ಮತ್ತು ಕುಲ್ನಾದಿಂದ ಗೆದ್ದು ಬಂದ ಬಾಬಾ ಸಾಹೇಬರು ಉದ್ಯೋಗ ಮೀಸಲಾತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.
ಲಾಡರ್್ ಮೌಂಟ್ ಬ್ಯಾಟನ್ ರವರ ಯೋಜನೆಯಂತೆ 1947ರ ಜುಲೈ 02 ರಂದು ದೇಶ ವಿಭಜನೆ ಮಾಡಲಾಗುತ್ತದೆ.  ಶೇ.50ಕ್ಕಿಂತ ಹೆಚ್ಚು ಮುಸ್ಲಿಂರನ್ನು ಹೊಂದಿರುವ ಪ್ರದೇಶವನ್ನು ಪಾಕಿಸ್ತಾನಕ್ಕೂ ಮುಸ್ಲಿಂರು ಶೇ.50ಕ್ಕಿಂತ ಕಡಿಮೆ ಇರುವ ಪ್ರದೇಶವನ್ನು ಭಾರತಕ್ಕೂ ಸೇರಿಸಬೇಕೆನ್ನುವುದು ವಿಭಜನೆ ಸಿದ್ಧಾಂತವಾಗಿತ್ತು.  ಆದರೆ, ಬಾಬಾ ಸಾಹೇಬರನ್ನು ಸಂವಿಧಾನ ರಚನಾ ಸಭೆಯಿಂದ ಹೊರಗಿಡಬೇಕೆಂಬ ಕಾಂಗ್ರೆಸ್ ನಾಯಕರ ಕುತಂತ್ರದಿಂದ ಮುಸ್ಲಿಂರು ಶೇ.42 ರಷ್ಟಿದ್ದು, ಅಸ್ಪೃಶ್ಯರು ಮತ್ತು ಇತರ ಹಿಂದೂಗಳು ಶೇ.58 ರಷ್ಟಿದ್ದ ಅವರು ರಾಜ್ಯಾಂಗ ರಚನಾ ಸಭೆಗೆ ಆಯ್ಕೆಯಾಗಿದ್ದ ಜೈಸೂರ್ ಮತ್ತು ಕುಲ್ನಾ ಹಾಗೂ ಜೋಗೇಂದ್ರನಾಥ್ ಮಂಡಲ್ ರವರು ಗೆದ್ದು ಹೋಗಿದ್ದ ಕ್ಷೇತ್ರಗಳನ್ನು ಪಾಕಿಸ್ತಾನಕ್ಕೆ ಸೇರಿಸಲಾಗುತ್ತದೆ.  ಇದರಿಂದ ಬಾಬಾ ಸಾಹೇಬ್ ಡಾ||ಅಂಬೇಡ್ಕರ್ ಮತ್ತು ಶ್ರೀ.ಜೋಗೇಂದ್ರನಾಥ್ಮಂಡಲ್ರವರು ಪಾಕಿಸ್ತಾನದ ಸಂವಿಧಾನ ರಚನಾ ಸಭೆಗೆ ಸದಸ್ಯರಾಗಿ ಹೋಗಬೇಕಾದ ಪರಿಸ್ಥಿತಿ ಬರುತ್ತದೆ.  ಶ್ರೀ.ಮಂಡಲ್ರವರು ಅದೇ ಪ್ರದೇಶದ ಮೂಲ ನಿವಾಸಿಗಳಾಗಿದ್ದರಿಂದ ಅವರು ಪಾಕಿಸ್ತಾನದ ಸಂವಿಧಾನ ಸಭೆಯ ಸದಸ್ಯರಾಗಿ ಮುಂದುವರೆಯುತ್ತಾರೆ.  ಆದರೆ, ಡಾ||ಅಂಬೇಡ್ಕರ್ರವರು ನನ್ನ ಜನ ಭಾರತದಲ್ಲಿರುವಾಗ ಪಾಕಿಸ್ತಾನದ ರಾಜ್ಯಾಂಗ ರಚನಾ ಸಭೆಯ ಸದಸ್ಯನಾಗಿ ನಾನೇನು ಮಾಡಲಿ ಎಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ.  ನಂತರ ಇಂಗ್ಲೆಂಡ್ಗೆ ಪ್ರಯಾಣಿಸಿದ ಡಾ||ಅಂಬೇಡ್ಕರ್ರವರು ಬ್ರಿಟಿಷ್ ಪ್ರಧಾನ ಮಂತ್ರ್ರಿಗಳನ್ನು, ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರುಗಳನ್ನು ಭೇಟಿ ಮಾಡಿ ಕಾಂಗ್ರೆಸ್ ನಾಯಕರು ಮಾಡಿದ ಅನ್ಯಾಯವನ್ನು ಅವರಿಗೆ ಮನವರಿಕೆ ಮಾಡಿಕೊಡುತ್ತಾರೆ.  ಡಾ||ಅಂಬೇಡ್ಕರ್ರವರ ಮಾತನ್ನು ಮನಗಂಡ ಬ್ರಿಟಿಷರು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿರುವ ಜೈಸೂರ್ ಮತ್ತು ಕುಲ್ನಾ ಕ್ಷೇತ್ರವನ್ನು ಭಾರತಕ್ಕೆ ಸೇರಿಸಿಕೊಳ್ಳುವಂತೆ ಅಥವಾ ಯಾವುದಾದರೊಂದು ಕ್ಷೇತ್ರದ ಅಭ್ಯಥರ್ಿಯಿಂದ ರಾಜೀನಾಮೆ ಪಡೆದು ಡಾ||ಅಂಬೇಡ್ಕರ್ರವರನ್ನು ಭಾರತದ ರಾಜ್ಯಾಂಗ ರಚನಾ ಸಭೆಗೆ ಆಯ್ಕೆ ಮಾಡುವಂತೆ ತಾಕೀತು ಮಾಡುತ್ತಾರೆ.  ಇಲ್ಲದಿದ್ದರೆ, ಸ್ವಾತಂತ್ರ್ಯವನ್ನೇ ನೀಡುವುದಿಲ್ಲವೆಂದು ಧಮಕಿ ಹಾಕುತ್ತಾರೆ.   ಬ್ರಿಟೀಷರ ಈ ನಿಲುವಿನಿಂದ ಗಾಬರಿಬಿದ್ದ ನೆಹರು ಮತ್ತು ಇತರೆ ನಾಯಕರು ಪೂನಾದಿಂದ ಆಯ್ಕೆಯಾಗಿದ್ದ ಬ್ಯಾರಿಸ್ಟರ್ ಜಯಕರ್ ರವರಿಂದ ಅವರ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಬಾಬಾ ಸಾಹೇಬ್ ಅಂಬೇಡ್ಕರ್ರವರನ್ನು ಜುಲೈ 9, 1947 ರಂದು ಅವಿರೋಧವಾಗಿ  ಸಂವಿಧಾನ ರಚನಾ ಸಭೆಗೆ ಆಯ್ಕೆ ಮಾಡುತ್ತಾರೆ.  ನಂತರ ಡಾ||ಅಂಬೇಡ್ಕರ್ರವರು ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡು ಸುಮಾರು 2 ವರ್ಷ 4 ತಿಂಗಳು 17 ದಿನಗಳ ಸತತ ಪರಿಶ್ರಮದಿಂದ ಸಂವಿಧಾನದ ಕರಡು ಪ್ರತಿಯನ್ನು ಸಿದ್ಧಪಡಿಸುತ್ತಾರೆ.  ಅಂತಿಮವಾಗಿ 395 ಅನುಚ್ಚೇಧಗಳು, 8 ಷೆಡ್ಯೂಲ್ಗಳು ಮತ್ತು 12 ಅಧ್ಯಾಯಗಳನ್ನೊಳಗೊಂಡ ಸಂವಿಧಾನವು 1949ರ ನವೆಂಬರ್ 26 ರಂದು ರಾಜ್ಯಾಂಗ ರಚನಾ ಸಮಿತಿಯಿಂದ ಅಂಗೀಕೃತವಾಗಿ 1950ರ ಜನವರಿ 26 ರಲ್ಲಿ ಜಾರಿಗೆ ಬಂದಿತು.
ಬಾಬಾ ಸಾಹೇಬ್ ಅಂಬೇಡ್ಕರ್ರವರ ನೇತೃತ್ವದಲ್ಲಿ ರಚಿತವಾದ ನೂತನ ಸಂವಿಧಾನ ಅಸ್ಪೃಶ್ಯರಿಗೆ ನೀಡಿದ್ದೇನು?  ಈ ಕೆಳಗಿನ ಅನುಚ್ಚೇಧಗಳನ್ನು ನೋಡಿ.
ಅನುಚ್ಛೇದ 15(4): ಸಕರ್ಾರಕ್ಕೆ ಸಾಮಾಜಿಕ ಮತ್ತು ಆಥರ್ಿಕವಾಗಿ ಹಿಂದುಳಿದ ಜನಾಂಗದ ಜನರ ಕಲ್ಯಾಣಕ್ಕಾಗಿ ಮತ್ತು ಅವರ ಸುಧಾರಣೆಗಾಗಿ ವಿಶೇಷ ಕಾನೂನು ರಚಿಸುವ ಅಧಿಕಾರವನ್ನು ನೀಡುತ್ತದೆ.
ಅನುಚ್ಛೇದ 16(4): ಈ ಅನುಚ್ಛೇದದಲ್ಲಿರುವ ಯಾವುದೊಂದೂ, ಯಾವುದಾದರೂ ಹಿಂದುಳಿದ ನಾಗರಿಕ ವರ್ಗದವರಿಗೆ ರಾಜ್ಯದಲ್ಲಿರುವ ಸೇವೆಗಳಲ್ಲಿ ತಕ್ಕಷ್ಟು ಪ್ರಾತಿನಿಧ್ಯವಿಲ್ಲವೆಂದು ರಾಜ್ಯದ ಅಭಿಪ್ರಾಯವಿರುವಲ್ಲಿ ಅಂಥವರಿಗೆ ನಿಯುಕ್ತಿಗಳನ್ನು ಅಥವಾ ಹುದ್ದೆಗಳನ್ನು ಮೀಸಲಿಡುವುದಕ್ಕಾಗಿ ರಾಜ್ಯವು ಯಾವುದಾದರೂ ಉಪಬಂಧವನ್ನು ರಚಿಸಲು ಅಡ್ಡಿಯಾಗತಕ್ಕದ್ದಲ್ಲ.
ಅನುಚ್ಛೇದ 17: ಅಸ್ಪೃಶ್ಯತೆಯನ್ನು ನಿಮರ್ೂಲನಗೊಳಿಸಲಾಗಿದೆ ಮತ್ತು ಯಾವ ರೂಪದಲ್ಲೂ ಅದರ ಆಚರಣೆಯನ್ನು ನಿಷಿದ್ಧಗೊಳಿಸಲಾಗಿದೆ.  ಅಸ್ಪೃಶ್ಯತೆಯಿಂದ ಉಂಟಾಗಬಹುದಾದ ಯಾವುದೇ ನಿಯರ್ೊಗ್ಯತೆಯನ್ನು ನಿರ್ಬಂಧದಿಂದ ಆಚರಣೆಗೆ ತರುವುದು ಕಾನೂನಿಗನುಸಾರವಾಗಿ ದಂಡನೀಯ ಅಪರಾಧವಾಗತಕ್ಕದ್ದು.
ಅನುಚ್ಛೇದ 330:ಲೋಕಸಭೆಗೆ ಸ್ಥಾನ ಹಂಚಿಕೆಯಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗಾಗಿ ಮೀಸಲಾತಿ.
ನುಚ್ಛೇದ 332:ರಾಜ್ಯಗಳ ವಿಧಾನಸಭೆಯಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಮೀಸಲಾತಿ.
ಇದರಿಂದ ಇಂದು ಈ ದೇಶದ ರಾಷ್ಟ್ರಪತಿ, ಸುಪ್ರೀಂ ಕೋಟರ್್ನ ಮುಖ್ಯ ನ್ಯಾಯಮೂತರ್ಿ, ಮುಖ್ಯಮಂತ್ರಿ, ಮುಖ್ಯ ಕಾರ್ಯದಶರ್ಿ ಹುದ್ದೆಯಿಂದ ಹಿಡಿದು ಡಿ ಗ್ರೂಪ್ ನೌಕರರ ವರೆಗೆ ಅಸ್ಪೃಶ್ಯರು ಅಧಿಕಾರ ಅನುಭವಿಸುವ ಅವಕಾಶ ಪಡೆದಿದ್ದಾರೆ.
ಭಾರತದ ಈಗಿನ ಸಂವಿಧಾನ ಜಾರಿಯಾಗುವ ಮೊದಲು  ಕ್ರಿ.ಪೂ.185 ರಲ್ಲಿ ಸುಮತಿ ಭಾರ್ಗವನಿಂದ ರಚಿತವಾದ ಮನುಸ್ಮೃತಿಯಡಿಯಲ್ಲಿ ಅಸ್ಪೃಶ್ಯರು ಹೇಗಿದ್ದರು ಗೊತ್ತೆ? ಈ ಕೆಳಗಿನ ಮನುಸ್ಮೃತಿಯ ಕಾನೂನುಗಳನ್ನು ನೋಡಿ.
ಘಿ.51:  ಚಂಡಾಲರ ಮತ್ತು ಸ್ವಪಚರ ಮನೆಗಳು ಊರ ಹೊರಗೆ ಇರತಕ್ಕದ್ದು.  ಅವರನ್ನು ಅಪಾತ್ರರನ್ನಾಗಿ ಮಾಡಬೇಕು ಮತ್ತು ನಾಯಿ ಮತ್ತು ಕತ್ತೆ ಇವರ ಸಂಪತ್ತಾಗಬೇಕು.
ಘಿ.52:  ಅವರು ಶವಕ್ಕೆ ತೊಡಿಸಿದ ಬಟ್ಟೆ ತೊಡಬೇಕು.  ಒಡಕು ತಟ್ಟೆಯಲ್ಲಿ ಊಟ ಮಾಡಬೇಕು.  ಅವರ ಆಭರಣಗಳು ಕಬ್ಬಿಣದಿಂದ ಮಾಡಿದವಾಗಿರಬೇಕು.  ಅವರು ಯಾವಾಗಲೂ ಸ್ಥಳದಿಂದ ಸ್ಥಳಕ್ಕೆ ಅಲೆದಾಡುತ್ತಿರಬೇಕು.
ಘಿ.55:  ಸಂಬಂಧಿಕರಲ್ಲದವರ ಶವವನ್ನು ಹೊರುವುದು ಇವರಿಗೆ ಕಡ್ಡಾಯ.
(ಬಾಬಾ ಸಾಹೇಬರು ಇದಕ್ಕೆ ನೀಡಿರುವ ವಿವರಣೆ : ಅಸ್ಪೃಶ್ಯರು ಮೂಲತ:  ಬಿಡಿ ಜನರಾಗಿದ್ದರು.  ಅಂದರೆ ಅವರು ತಮ್ಮ ಮೂಲ ಜನಾಂಗದ ಗುಂಪಿನಿಂದ ವಿಭಿನ್ನ ಕಾರಣದಿಂದಾಗಿ ಬೇರ್ಪಟ್ಟವರಾಗಿದ್ದು, ಬೇರೊಂದು ಪ್ರದೇಶ ಅಥವಾ ಗ್ರಾಮದಲ್ಲಿ ಊರ ಹೊರಗೆ ವಾಸಿಸುತ್ತಿದ್ದರು)
ಮನುಸ್ಮೃತಿ ನೀಡಿದ್ದ ಮೀಸಲಾತಿಗೂ ಬಾಬಾ ಸಾಹೇಬ್ ಅಂಬೇಡ್ಕರ್ರವರ ಸಂವಿಧಾನ ನೀಡಿರುವ ಮೀಸಲಾತಿಗೂ ಎಂತಹ ವ್ಯತ್ಯಾಸವಿದೆ ಎನ್ನುವ ಅಂಶ ಇದರಿಂದ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ.  ವಿದ್ಯೆ, ಆಸ್ತಿ, ಅಧಿಕಾರ ಮತ್ತು ಆಯುಧಗಳನ್ನು ಕಳೆದುಕೊಂಡು ಪ್ರಾಣಿಗಳಿಗಿಂತಲೂ ಕಡೆಯಾಗಿ ಬದುಕಿದ್ದ ಹೊಲೆ ಮಾದಿಗರು ಇಂದು ಸಾಮಾಜಿಕ, ಆಥರ್ಿಕ ಮತ್ತು ರಾಜಕೀಯ ಏಳಿಗೆಯತ್ತ ಮುನ್ನಡೆಯುತ್ತಿರುವ ಸಂದರ್ಭದಲ್ಲಿ ಮೀಸಲಾತಿಯಂತಹ ಬದುಕುವ ಹಕ್ಕಿನ ವಿಚಾರದಲ್ಲಿ ಎಷ್ಟು ಪ್ರಜ್ಞಾವಂತಿಕೆಯಿಂದ ವತರ್ಿಸಿದರೂ ಸಾಲದು. ಆದರೆ ನಾವು ಈ ಬಗ್ಗೆ ವಹಿಸಬೇಕಾದ ಎಚ್ಚರಿಕೆಯನ್ನಾಗಲೀ ಕಾಳಜಿಯನ್ನಾಗಲೀ ತೋರಿದ್ದೇವೆಯೇ?
ಯಾವುದೇ ತಂದೆ ತನ್ನ ಆಸ್ತಿಯನ್ನು ತನ್ನೆಲ್ಲಾ ಮಕ್ಕಳು ಸಮಾನವಾಗಿ ಹಂಚಿಕೊಂಡು ಬಾಳಬೇಕೆಂದು ಬಯಸುವುದು ಸ್ವಾಭಾವಿಕ.   ಆಸ್ತಿ ಸಂಪಾದಿಸುವ ಮೂಲಕ ತನ್ನ ಮಕ್ಕಳ ಬದುಕಿಗೆ ಭದ್ರವಾದ ಅಡಿಪಾಯ ಹಾಕಲು ತನ್ನ ಬದುಕನ್ನೇ ತ್ಯಾಗ ಮಾಡಿದ ತಂದೆಯ ಶ್ರಮ ಆಸ್ತಿ ಹಂಚಿಕೆ ಕೊಳ್ಳಲು ಕದನಕ್ಕಿಳಿಯುವ ಮಕ್ಕಳಿಗೆ ಖಂಡಿತ ತಿಳಿದಿರಲಾರದು. ತಂದೆಯನ್ನು ಅರ್ಥಮಾಡಿಕೊಂಡ ಮಕ್ಕಳು ಖಂಡಿತವಾಗಿ ಕಾದಾಡಲಾರರು.  ಈಗ ಯೋಚಿಸಿ ನೋಡಿ?  ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಾಬಾ ಸಾಹೇಬರೆಂಬ ವ್ಯಕ್ತಿ ಇಲ್ಲದೇ ಹೋಗಿದ್ದರೆ? ಅಥವಾ ಇದ್ದರೂ ಅವರು ತನ್ನ ಜನಾಂಗಕ್ಕಾಗಿ ಧನಿ ಎತ್ತದೇ ಹೋಗಿದ್ದರೆ?  ಧನಿ ಎತ್ತಿದ ಕಾರಣಕ್ಕಾಗಿ ಅವರ ಬದುಕಿನುದ್ದಕ್ಕೂ ನಡೆದ 11 ಕೊಲೆ ಪ್ರಯತ್ನಗಳಲ್ಲಿ  ಅವರು ಜೀವ ಕಳೆದುಕೊಂಡಿದ್ದರೆ?  ರಾಜ್ಯಾಂಗ ರಚನಾ ಸಭೆಗೆ ನಡೆದ ಚುನಾವಣೆಯಲ್ಲಿ South Bombay ಯಿಂದ ಸ್ಪಧರ್ಿಸಿ ಸರ್ವ ಪಕ್ಷಗಳ ಅಭ್ಯಥರ್ಿಯಾದ ತಮ್ಮ ಆಪ್ತ ಸಹಾಯಕ ಕಜ್ರೋಳ್ಕರ್ ವಿರುದ್ಧವೇ ಸೋತಾಗ ಅದನ್ನು ಭೀಕರ ಅವಮಾನವೆಂದು ಪರಿಗಣಿಸಿ ಇನ್ನು ಸಾಕು ಎಂದು ಸುಮ್ಮನಾಗಿದ್ದರೆ?  ಸಂವಿಧಾನದ ರಚನಾ ಸಭೆಗೆ ಆಯ್ಕೆಯಾಗಿದ್ದ ಪಶ್ಚಿಮ ಬಂಗಾಳದ ಜೈಸೂರ್ ಮತ್ತು ಕುಲ್ನಾ ಕ್ಷೇತ್ರವನ್ನು ಬಂಗಾಳ ವಿಭಜನೆ ಸಂದರ್ಭದಲ್ಲಿ ಪೂರ್ವ ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಾಗ ಬಾಬಾ ಸಾಹೇಬರು  ಪಾಕಿಸ್ತಾನದ ಸಂವಿಧಾನ ರಚನಾ ಸಭೆಗೆ ಹೋಗಲು ಸಮ್ಮತಿಸಿದ್ದರೆ?  ಅಥವಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಯಾವುದೇ ಪ್ರಯತ್ನ ಮಾಡದೇ ಸುಮ್ಮನಾಗಿದ್ದರೆ?  ಇಂದು ಜಾರಿಯಲ್ಲಿರುವ ಸಂವಿಧಾನ ಇರುತ್ತಿತ್ತೆ? ಇಂದು ಅಸ್ತಿತ್ವದಲ್ಲಿರುವ ಸಂವಿಧಾನ ಇಲ್ಲದಿದ್ದರೆ  ಹೊಲೆಮಾದಿಗರ ರಾಜಕೀಯ, ಸಾಮಾಜಿಕ, ಆಥರ್ಿಕ ಮತ್ತು ಧಾಮರ್ಿಕ ಸ್ಥಿತಿ ಹೇಗಿರಬಹುದಿತ್ತು ಯೋಚಿಸಿ ನೋಡಿ?
ಈ ಪವಿತ್ರ ಹೋರಾಟದ ಯಶೋಗಾಥೆಯನ್ನು ಹೊಲೆಮಾದಿಗರು ನಮ್ರತೆ ಮತ್ತು ಗೌರವದಿಂದ ನೆನೆಯಬೇಕು.  ಇಲ್ಲದಿದ್ದರೆ, ಅಂತಹ ನಡವಳಿಕೆ ಸುಸಂಸ್ಕೃತ ಎನಿಸಿಕೊಳ್ಳುವುದಿಲ್ಲ.  ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಠಿಸಲಾರರು ಎಂದ ಬಾಬಾ ಸಾಹೇಬರ ಮಾತನ್ನು ನೆನಪಿಸಿಕೊಳ್ಳಿ.
ಸಂವಿಧಾನ ಜಾರಿಯಾಗಿ 60 ವರ್ಷಗಳ ನಂತರವೂ ಅಸ್ಪೃಶ್ಯತೆ ಆಚರಣೆಯಾಗಲೀ, ದೌರ್ಜನ್ಯಗಳಾಗಲೀ ನಿಂತಿಲ್ಲ.  ವಿಜ್ಞಾನ, ತಂತ್ರಜ್ಞಾನ ಮತ್ತು ರಕ್ಷಣೆಯಂತಹ ಪ್ರಮುಖ ಇಲಾಖೆಗಳಲ್ಲಿ ಮೀಸಲಾತಿಯೇ ಜಾರಿಯಾಗಿಲ್ಲ. ಇಲ್ಲಿ ಮತ್ತೊಂದು ವಿಚಾರವನ್ನು ಹೊಲೆಮಾದಿಗರಿಬ್ಬರೂ ಗಂಭೀರವಾಗಿ ಚಿಂತಿಸಬೇಕು.  ನಮ್ಮ ಸಂವಿಧಾನದ ಅನುಚ್ಚೇಧ 16(4) ಉದ್ಯೋಗ ಮೀಸಲಾತಿಯನ್ನೂ, ಅನುಚ್ಚೇಧ  330 ಮತ್ತು 332 ಲೋಕಸಭೆ, ವಿಧಾನಸಭೆಗಳಲ್ಲಿ ಮತ್ತು ಅನುಚ್ಚೇಧ 243ಎ ಯಿಂದ 243 ಜಿ ಪಂಚಾಯಿತಿಗಳಲ್ಲಿ ರಾಜಕೀಯ ಮೀಸಲಾತಿಯನ್ನು ಕಲ್ಪಿಸಿದೆ.  ನ್ಯಾಯಾಂಗ ಮತ್ತು ಕಾಯರ್ಾಂಗದ ವಿವಿಧ ವರ್ಗಗಳಲ್ಲಿ ದೇಶಾದ್ಯಂತ ವಿವಿಧ ಕಾರಣಕ್ಕೆ ಭತರ್ಿಯಾಗದೇ ಬಾಕಿ ಇರುವ ಒಂದು ಕೋಟಿಗೂ ಅಧಿಕ ಬ್ಯಾಕ್ಲಾಗ್ ಹುದ್ದೆಗಳಿವೆ.  ಆದರೆ ಲೋಕಸಭೆ, ವಿಧಾನಸಭೆ ಮತ್ತು ಪಂಚಾಯಿತಿ ಮೀಸಲು ಸ್ಥಾನಗಳನ್ನು ತುಂಬದೇ ಬಾಕಿ ಇರುವ ಹುದ್ದೆಗಳಿವೆಯೇ?  ರಾಜಕೀಯ ಮೀಸಲಾತಿಯನ್ನು ಸಲೀಸಾಗಿ ತುಂಬಿದ ಸಕರ್ಾರ ಕಾಯರ್ಾಂಗ ಮತ್ತು ನ್ಯಾಯಾಂಗದ ಮೀಸಲಾತಿಯನ್ನೇಕೆ ಬಾಕಿ ಉಳಿಸಿಕೊಂಡಿದೆ?  ಈ ಪ್ರಶ್ನೆಗೆ ಬಾಬಾ ಸಾಹೇಬರೇ ನೀಡಿದ ಉತ್ತರವೆಂದರೆ ರಾಜಕೀಯ ಮೀಸಲಾತಿಯಿಂದ ಗುಲಾಮರು ಸೃಷ್ಠಿಯಾದರೆ, ಉದ್ಯೋಗ ಮೀಸಲಾತಿ ಸ್ವಾಭಿಮಾನಿಗಳನ್ನು ಸೃಷ್ಠಿಸುತ್ತದೆ. ಪಟ್ಟಭದ್ರ ಜಾತಿಗಳಿಗೆ ಇದು ಇಷ್ಟವಾಗುವುದು ಹೇಗೆ?  ಆದರೆ ಇಂದು ಈ  So Called ಸ್ವಾಭಿಮಾನಿಗಳು ಇಂದು ದುರಭಿಮಾನಿಗಳಾಗಿ ಮೀಸಲಾತಿ ಮೂಲಕ ಬದುಕನ್ನು ಕೊಟ್ಟ ಬಾಬಾ ಸಾಹೇಬರನ್ನು ಬಿಟ್ಟು ಸಂಬಂಧವಿಲ್ಲದವರನ್ನು ಕೊಂಡಾಡುತ್ತಿದ್ದಾರೆ.  ಈ ದೌರ್ಬಲ್ಯವನ್ನೇ ಬಳಸಿ ಅವರಿಂದಲೇ ಅವರ ಮೀಸಲಾತಿಯನ್ನು ಕಿತ್ತುಹಾಕಲು ಶತ್ರು ಜಾತಿಗಳು ಸತತವಾಗಿ ಯತ್ನಿಸುತ್ತಿದ್ದಾರೆ. ಸಂವಿಧಾನವನ್ನೇ ಬದಲಾಯಿಸಬೇಕೆನ್ನುವವರು ಮೀಸಲಾತಿಯನ್ನು ತೆಗೆದುಹಾಕಲು ಹಿಂಜರಿಯುತ್ತಾರೆಯೇ?
ಹೊಲೆಯ, ಮಾದಿಗ ಹಾಗೂ ಬಾಬಾ ಸಾಹೇಬ್ ಡಾ||ಅಂಬೇಡ್ಕರ್, ಜಗಜೀವನರಾಂರವರನ್ನು ಕುರಿತಂತೆ ಕೆಲವು ಪ್ರಶ್ನೆಗಳಿಗಾದರೂ ನನ್ನ ಚಚರ್ೆಯಿಂದ ಸ್ವಲ್ಪವಾದರೂ ಉತ್ತರ ಸಿಕ್ಕಿರಬಹುದೆಂದು ನಾನು ಭಾವಿಸುತ್ತೇನೆ.  ಹಿಂದೂ ಸಮಾಜವೆಂಬ ಅಸಾಮಾನತೆಯ ಪಿರಮಿಡ್ನ್ನು ಉರುಳಿಸಿ ಸಮಸಮಾಜದ ನಿಮರ್ಾಣಕ್ಕೆ ಹೊಲೆಮಾದಿಗರು ಒಂದಾಗಲೇಬೇಕು.  ಆರಂಭ ಕಾಲದಲ್ಲಿ ಬಾಬಾ ಸಾಹೇಬರನ್ನು ಆದರ್ಶವಾಗಿ ಹೊಲೆಮಾದಿಗರಿಬ್ಬರೂ ಸ್ವೀಕರಿಸಿದ್ದರೂ ಸಹ ಅವರ ಸಿದ್ಧಾಂತವನ್ನು ತಿಳಿದು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಎರಡೂ ಜಾತಿಗಳ ನಾಯಕರು, ಚಿಂತಕರು ಮಾಡದ ಕಾರಣದಿಂದ ಈ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯವನ್ನು ಸೃಷ್ಠಿಸುವಲ್ಲಿ ಪಟ್ಟಭದ್ರರು ಯಶಸ್ವಿಯಾದರು.  ಐತಿಹಾಸಿಕವಾಗಿ ಇವರ ಮಧ್ಯೆ ಅಂತಹ ಪ್ರಬಲವಾದ ಭಿನ್ನಾಭಿಪ್ರಾಯವೇನೂ ಇರಲಿಲ್ಲ.  ಹಾಗೆಯೇ, ಗಮನಾರ್ಹವಾದ ಸಾಮಾಜಿಕ ಸಂಬಂಧವೂ ಇರಲಿಲ್ಲ. ಆದರೆ, ಗೋಮಾಂಸ ಸೇವನೆ ವಿಚಾರದಲ್ಲಿ ಮಾತ್ರ  ಇಬರಿಬ್ಬರ ಮಧ್ಯೆ ಅತ್ಯಂತ ಗಾಢವಾದ ಹೋಲಿಕೆ ಮತ್ತು ಸಂಬಂಧವಿತ್ತು.  ಇವರಿಬ್ಬರ ನಡುವಿನ ಸಮಾನ ಅಂಶವಾಗಿರುವ ಅಸ್ಪೃಶ್ಯತೆಗೆ ಗೋಮಾಂಸ ಸೇವನೆಯೇ ಪ್ರಮುಖ ಕಾರಣವೆಂದು ಬಾಬಾ ಸಾಹೇಬರು ತಮ್ಮ ಅಸ್ಪೃಶ್ಯರು.  ಅವರು ಯಾರು? ಮತ್ತು ಅವರೇಕೆ ಅಸ್ಪೃಶ್ಯರಾದರು?  ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ.
1970ರ ದಶಕದಲ್ಲಿ ಪ್ರಾರಂಭವಾದ ದಸಂಸದ ಸೃಷ್ಠಿಕರ್ತರಲ್ಲಿ ಪ್ರಮುಖರಾದ ಪ್ರೊ.ಬಿ.ಕೃಷ್ಣಪ್ಪ, ಶ್ರೀ.ದೇವನೂರು ಮಹದೇವ ಮತ್ತು ಶ್ರೀ.ಸಿದ್ದಲಿಂಗಯ್ಯನವರ ಬಗ್ಗೆ ಚಚರ್ಿಸಿದರೆ ಸಿದ್ಧಾಂತವನ್ನು ಕುರಿತ ಗೊಂದಲ ಸ್ವಲ್ಪವಾದರೂ ನಿವಾರಣೆಯಾಗಬಹುದೆನಿಸುತ್ತದೆ.  ಶ್ರೀ.ದೇವನೂರುರವರೇ ಹೇಳಿರುವಂತೆ ಮಾದಿಗ ಜನಾಂಗದ ಪ್ರೊ.ಬಿ.ಕೃಷ್ಣಪ್ಪನವರು ಅಂಬೇಡ್ಕರ್ವಾದಿಗಳಾಗಿದ್ದರೆ, ಹೊಲೆಯರಾದ ಡಾ||ಸಿದ್ಧಲಿಂಗಯ್ಯ ಮಾಕ್ಸರ್್ವಾದಿಯೂ, ಶ್ರೀ.ಮಹದೇವರವರು ಲೋಹಿಯಾವಾದಿಯೂ ಆಗಿದ್ದಾರೆ.  ಯಾವುದೇ ಸಿದ್ಧಾಂತವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಪ್ರತಿಯೊಬ್ಬನಿಗೂ ಇದೆಯಾದರೂ ಅಸ್ಪೃಶ್ಯ ವರ್ಗಕ್ಕೆ ಮಾರ್ಗದರ್ಶನ ಮಾಡಬೇಕಾದ ನಾಯಕರು ಈ ವಿಚಾರದಲ್ಲಿ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ.  ಈ ದಿಕ್ಕಿನಲ್ಲಿ ಶ್ರೀ.ಸಿದ್ದಲಿಂಗಯ್ಯ ಮತ್ತು ಶ್ರೀ.ಮಹದೇವರವರು ಆರಂಭದಲ್ಲೇ ದಿಕ್ಕುತಪ್ಪಿರುವುದು ಕಂಡು ಬರುತ್ತದೆ.
ಒಂದು ಕಾಲದಲ್ಲಿ ತಮ್ಮ ಪ್ರಚಂಡ ಭಾಷಣದಿಂದ ವಿದ್ಯುತ್ ಸಂಚಾರ ಮೂಡಿಸುತ್ತಿದ್ದ ನಮ್ಮ ಹಿರಿಯ ವಿದ್ವಾಂಸರಾದ ಡಾ||ಸಿದ್ಧಲಿಂಗಯ್ಯನವರು ಈಗ ಸದ್ದಿಲ್ಲದೇ ಇರುವುದರ ಹಿಂದೆ ಅಂದು ಹಸಿವಿನಿಂದ ಸತ್ತಿದ್ದ ಹೊಟ್ಟೆ ಇಂದು ಚೆನ್ನಾಗಿ ತುಂಬಿರುವುದೇ ಕಾರಣವಾಗಿರಬಹುದೇ?  ಇದು ನಿಜವಾದರೆ ಮಾಕ್ಸರ್್ನ ಸಿದ್ಧಾಂತ ಕಾರ್ಯರೂಪಕ್ಕೆ ಬಂದಂತೆಯೇ ಸರಿಯಲ್ಲವೇ?  ಬಾಬಾ ಸಾಹೇಬರು ತಮ್ಮ ಬುದ್ಧ ಅಥವಾ ಕಾಲರ್್ ಮಾಕ್ಸರ್್ ಎಂಬ ಕೃತಿಯಲ್ಲಿ ನೀಡಿರುವ ಅಭಿಪ್ರಾಯಗಳನ್ನು ನೋಡಿ.
1. ನನ್ನ ಸಮಾಜವಾದ ಅನಿವಾರ್ಯ ಎಂದು ಹೇಳಿದ ಮಾಕ್ಸರ್್ನ ಮಾತು ಸಂಪೂರ್ಣವಾಗಿ ಸುಳ್ಳಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವೂ ಇಲ್ಲ.
2. ಬುದ್ಧನು ಕಮ್ಯುನಿಸಮ್ನ್ನು ಸವರ್ಾಧಿಕಾರವಿಲ್ಲದೇ ಸ್ಥಾಪಿಸಿದನೆಂಬ ಅತ್ಯಾಶ್ಚರ್ಯಕರವಾದ ಸಂಗತಿಯನ್ನು ರಷಿಯನ್ ಕಮ್ಯುನಿಸ್ಟ್ರು ಮರೆಯುತ್ತಾರೆ.  ಅದು ಅತ್ಯಂತ ಅಲ್ಪ ಪ್ರಮಾಣದ ಕಮ್ಯುನಿಸಮ್ ಆಗಿದ್ದಿರಬಹುದು.  ಆದರೆ, ಅದು ಸವರ್ಾಧಿಕಾರವಿಲ್ಲದ ಕಮ್ಯುನಿಸಮ್ ಆಗಿತ್ತು.  ಈ ಪವಾಡವನ್ನು ಲೆನಿನ್ ಕೂಡ ಮಾಡಲಾಗಲಿಲ್ಲ.
3. ಬುದ್ಧನ ವಿಧಾನವೇ ಭಿನ್ನವಾಗಿತ್ತು.  ಅವನ ವಿಧಾನ ಮಾನವನ ಮನಸ್ಸನ್ನು ಮತ್ತು ಸ್ವಭಾವವನ್ನು ಬಲಪ್ರಯೋಗವಿಲ್ಲದೇ ಬದಲಾಯಿಸುವುದಾಗಿತ್ತು.  ಇದಕ್ಕಾಗಿ ಬುದ್ಧನಿಗಿದ್ದ ಮುಖ್ಯ ವಿಧಾನವೆಂದರೆ ಅವನ ಧಮ್ಮವೇ ಆಗಿತ್ತು.  ಧಮ್ಮದ ನಿರಂತರ ಬೋಧನೆಯಾಗಿತ್ತು.  ಒಳ್ಳೆಯದನ್ನೂ ಕೂಡ ಒತ್ತಾಯ ಮಾಡದೇ ಸ್ವಯಿಚ್ಚೆಯಿಂದ ಸ್ವೀಕರಿಸುವಂತೆ ಮಾಡುವುದೇ ಬುದ್ಧನ ಮಾರ್ಗವಾಗಿದೆ.
4. ಮಾನವ ಜನಾಂಗ ಕೇವಲ ಆಥರ್ಿಕ ಮೌಲ್ಯಗಳನ್ನಷ್ಟೇ ಬಯಸುವುದಿಲ್ಲ.  ಅದು ಆಧ್ಯಾತ್ಮಿಕ ಮೌಲ್ಯಗಳನ್ನು ಉಳಿಸಿಕೊಳ್ಳಲೂ ಕೂಡ ಇಚ್ಚಿಸುತ್ತದೆ.
ಬಾಬಾ ಸಾಹೇಬರ ಮೇಲಿನ ಮಾತುಗಳನ್ನು ಸಿದ್ಧಲಿಂಗಯ್ಯನವರು ಅಧ್ಯಯನ ಮಾಡಿದ್ದಿದ್ದರೆ  ಅವರು ಇಂದು ನಿಷ್ಕ್ರಿಯರಾಗಿ ಖಂಡಿತವಾಗಿಯೂ ಇರುತ್ತಿರಲಿಲ್ಲ.
ಸಂಪ್ರದಾಯವಾದಿ ಬ್ರಾಹ್ಮಣರಗಿಂತ ಸಮಾಜವಾದಿ ಬ್ರಾಹ್ಮಣರು ಅತ್ಯಂತ ಅಪಾಯಕಾರಿಗಳೆಂದು ಬಾಬಾ ಸಾಹೇಬರು ಹೇಳಿದ್ದಾರೆ.  ಬ್ರಾಹ್ಮಣಶಾಹಿ ವ್ಯವಸ್ಥೆಯನ್ನು ಅತ್ಯಂತ ವ್ಯವಸ್ಥಿತವಾಗಿ ಮತ್ತು ಕಟ್ಟುನಿಟ್ಟಾಗಿ ಜಾರಿ ಮಾಡಲು ಕಾರಣರಾದ ಶೂದ್ರರನ್ನು Social Police ಗಳೆಂದು ದಾದಾ ಸಾಹೇಬ್ ಕಾಂಶಿರಾಂರವರು ಹೇಳಿದ್ದಾರೆ.  ಡಾ||ರಾಮ್ ಮನೋಹರ್ ಲೋಹಿಯಾರವರ ಹಿಂಬಾಲಕರಲ್ಲಿ ಈ ಜಾತ್ಯಾತೀತ ಮುಖವಾಡದ Social Police ಗಳೇ ಮುಂಚೂಣಿಯಲ್ಲಿದ್ದಾರೆ. ಅದೇ ಸಂದರ್ಭದಲ್ಲಿ ಶ್ರೀ.ಲೋಹಿಯಾರವರನ್ನು ಕೆಲವು ಅಸ್ಪೃಶ್ಯ ನಾಯಕರೂ ಕೂಡ ಹಿಂಬಾಲಿಸಿದ್ದು ನಿಜ.  ಈ ಲೋಹಿಯಾ ವಾದಿಗಳಿಗೆ ಗಾಂಧಿವಾದದೊಂದಿಗೆ ಅಂತಹ ಪ್ರಬಲವಾದ ಭಿನ್ನಾಭಿಪ್ರಾಯ ಇರಲಿಲ್ಲವೆನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.
ಶ್ರೀ.ಲೋಹಿಯಾರವರ ಈ ಮಾತನ್ನು ಗಮನಿಸಿ ನನ್ನ ಪೀಳಿಗೆಯ ಜನರಿಗೆ ಗಾಂಧೀಜಿ ಕನಸಿನ, ನೆಹರೂ ಆಶಯದ ಮತ್ತು ನೇತಾಜಿ ಕೃತಿಯ ಪ್ರತೀಕವಾಗಿದ್ದಾರೆ.  ಕನಸು ಎಂದಿಗೂ ನನಸಾಗುವಂತಿಲ್ಲ, ಆಶಯ ಹುಳಿಯಾಗಿದೆ ಮತ್ತು ಕೃತಿ ಅಪೂರ್ಣವಾಗಿಯೇ ಉಳಿದಿದೆ.
ಡಾ||ಲೋಹಿಯಾರವರು ಗಾಂಧೀಜಿಯವರು  ಕೈಗೊಂಡಿದ್ದ ಉಪವಾಸಗಳ ಬಗ್ಗೆ  ಯಾವುದೇ ಕಾರಣಕ್ಕಾಗಿ ಸಾರ್ವಜನಿಕವಾಗಿ ಕೈಗೊಳ್ಳುವ ಉಪವಾಸ ಸತ್ಯಾಗ್ರಹವು ಆತ್ಮವಂಚನೆ, ಅಸತ್ಯ ಮತ್ತು ವಯಕ್ತಿಕತೆಯನ್ನು ಪೋಷಿಸುತ್ತದೆ.  ಗಾಂಧಿ ಬದುಕಿದ್ದಾಗಲೂ ಕೂಡ ನಾನು ಅವರೊಂದಿಗೆ ಉಪವಾಸ ಸತ್ಯಾಗ್ರಹವನ್ನು ಕಪಟತನವೆಂದೂ, ಉಪವಾಸ ಕಪಟವೆಂದೂ, ವಿಮಶರ್ಿಸಲು ಯತ್ನಿಸಿದ್ದೆ ಎಂದು ಹೇಳಿದ್ದಾರೆ.
ಭಾರತದ ಜಾತಿ ವ್ಯವಸ್ಥೆ ಬಗ್ಗೆ ಲೋಹಿಯಾರವರ ಅಭಿಪ್ರಾಯ ಹೀಗಿದೆ;  ಜಾತಿ ಭಾರತೀಯ ಸಮಾಜದ ಅತ್ಯಂತ ಭಾವಪರವಶ ಅಂಶ.  ಬದಲಾವಣೆ ವಿರೋಧಿಯಾದ ಭಯಂಕರ ಶಕ್ತಿ.  ಪ್ರಸ್ತುತದಲ್ಲಿನ ಎಲ್ಲಾ ಸಣ್ಣತನ, ಅಗೌರವ ಮತ್ತು ಸುಳ್ಳುಗಳನ್ನು ಭದ್ರಪಡಿಸುವ ಅಸ್ತ್ರ ಮತ್ತು ಹೊಸ ನಾಗರಿಕತೆಯನ್ನು ನಿಮರ್ಿಸಲು ಕಮ್ಯುನಿಸಮ್ ಮತ್ತು ಬಂಡವಾಳ ಶಾಹಿಗಳೆರಡೂ  ಸಮಾನವಾಗಿ ಅಸಂಬದ್ಧ ಎಂದು ಕಮ್ಯುನಿಸಂ ಸಿದ್ದಾಂತವನ್ನು ಲೋಹಿಯಾ ತಿರಸ್ಕರಿಸುತ್ತಾರೆ.
ಈಗ ಹೇಳಿ; ಲೋಹಿಯಾ ವಾದಿಯಾಗಿರುವ ಶ್ರೀ.ಮಹದೇವರವರು ಗಾಂಧೀಜಿ ಮತ್ತು ಬಾಬಾ ಸಾಹೇಬರ ಚಿಂತನೆಗಳ ಮೇಲೆ ಚಳುವಳಿಯನ್ನು ಮುನ್ನೆಡೆಸಬೇಕೆಂದು ಯಾವ ಆಧಾರದ ಮೇಲೆ ಹೇಳುತ್ತಿದ್ದಾರೆ?   ಕನಿಷ್ಠ ಲೋಹಿಯಾ ವಾದಕ್ಕಾದರೂ ಇವರು ನಿಷ್ಠರಾಗಿರಬಾರದಿತ್ತೆ?   ಇಂದು ಲೋಹಿಯಾ ವಾದಿಗಳು ದಿಕ್ಕಾಪಾಲಾಗಿರುವುದೂ, ದಸಂಸ ಚಿಂದಿಯಾಗಿರುವುದೂ ಕೇವಲ ಕಾಕತಾಳೀಯವಲ್ಲ ಎನಿಸುವುದಿಲ್ಲವೆ?
ಈ ಇಬ್ಬರ ಮಧ್ಯೆ ಕೊನೆಯ ಉಸಿರಿರುವವರೆಗೂ ಅಂಬೇಡ್ಕರ್ ವಾದಿಯಾಗಿದ್ದವರು ಮಾದಿಗ ಜನಾಂಗದ ಪ್ರೊ.ಕೃಷ್ಣಪ್ಪನವರು ಮಾತ್ರ.  ಅವರೇನಾದರೂ ಬದುಕಿದ್ದರೆ ಈಗ ಸೃಷ್ಟಿಯಾಗಿರುವ ಬಹುಪಾಲು ಗೊಂದಲಗಳು ಖಂಡಿತವಾಗಿಯೂ ಇರುತ್ತಿರಲಿಲ್ಲವೆಂದು ಕಾಣಿಸುತ್ತದೆ. ಶ್ರೀ.ದೇವನೂರು ಮಹಾದೇವ, ಡಾ||ಸಿದ್ಧಲಿಂಗಯ್ಯನವರು ಸೇರಿದಂತೆ ದಸಂಸದ ಆರಂಭದ ದಿನಗಳಲ್ಲಿದ್ದ ಎಲ್ಲಾ ನಾಯಕರು ಪ್ರೊ.ಬಿ.ಕೃಷ್ಣಪ್ಪನವರಂತೆ ಅಂಬೇಡ್ಕರ್ ವಾದಿಗಳಾಗಿದ್ದರೆ ಅಥವಾ ದಸಂಸ ಎಂಬ ಸಂಸ್ಥೆ ಅಂಬೇಡ್ಕರ್ ಸಿದ್ದಾಂತದ ಮೇಲೆ ಪ್ರಾರಂಭವಾಗಿದ್ದರೆ ಅದನ್ನು ಒಡೆಯಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ.  ಅಂಬೇಡ್ಕರ್ ವಾದದ ಆಯ್ಕೆಯಿಂದ ಕೆಲವು ಸಮಾಜವಾದಿ ಬ್ರಾಹ್ಮಣರು ಮತ್ತು ಜಾತ್ಯಾತೀತ ಶೂದ್ರರು ದಸಂಸದಿಂದ ದೂರವಾಗುತ್ತಿದ್ದರಾದರೂ ಅದರಿಂದ ಹೊಲೆಮಾದಿಗರಿಗೆ ಲಾಭವಾಗುತ್ತಿತ್ತೇ ಹೊರತು ನಷ್ಟವೇನೂ ಆಗುತ್ತಿರಲಿಲ್ಲ.
ಅಸ್ಪೃಶ್ಯರ ರಾಜಕೀಯ ಹಕ್ಕುಗಳ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಿ ಇಂದಿಗೂ ಅವರು ಪರಾವಲಂಭಿಗಳಾಗಿರುವುದಕ್ಕೆ ಕಾರಣವಾಗಿರುವ ಮತ್ತು ವರ್ಣ ವ್ಯವಸ್ಥೆಯನ್ನು ಸಮಥರ್ಿಸಿದ ಗಾಂಧೀಜಿಯವರ ಹಿಂಬಾಲಕರಾದ ಶ್ರೀ.ಜಗಜೀವನರಾಂರವರನ್ನು ಹೊಲೆಮಾದಿಗರ ಮಧ್ಯೆ
ತಂದಿರುವುದರ ಹಿಂದೆ ಪಟ್ಟಭದ್ರರ ಕುತಂತ್ರವಿದೆ.  ಗಾಂಧೀಜಿಯವರನ್ನು ಮಾದಿಗರು ಒಪ್ಪುವುದಿಲ್ಲವಾದ್ದರಿಂದ ಬಾಬೂಜಿಯವರನ್ನು ಮುಂದೆ ತರಲಾಗಿದೆ.  ಸಾಮಾಜಿಕ ಸಾಮ್ಯತೆಯಾಗಿ ಉತ್ತರದ ಚಮ್ಮಾರ ಮತ್ತು ದಕ್ಷಿಣದ ಮಾದಿಗರ ಮಧ್ಯೆ ಇರುವ ಚಮ್ಮಾರಿಕೆಯನ್ನೇ ಇದಕ್ಕೆ ಆಧಾರವಾಗಿಟ್ಟುಕೊಳ್ಳಲಾಗಿರುವಂತೆ ಕಾಣುತ್ತದೆ. ಹೊಲೆಮಾದಿಗರ ಮಧ್ಯೆ ಪ್ರಬಲವಾದ ಸಾಮಾಜಿಕ ಸಂಬಂಧವಿಲ್ಲದಿರುವ ಕಾರಣದಿಂದ ಈ ದುರ್ಬಲ ಅಂಶವನ್ನೇ ಬಳಸಿಕೊಂಡು ಇಬ್ಬರ ಮಧ್ಯೆ ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಸೃಷ್ಟಿಸುವ ಮೂಲಕ ಈ ಎರಡು ಪ್ರಭಲ ಜಾತಿಗಳು ಒಂದಾಗದಂತೆ ಮಾಡುವ ದುರಾಲೋಚನೆ ಇದರ ಹಿಂದಿದೆ. ಶ್ರೀ.ಜಗಜೀವನರಾಂರವರನ್ನು ಮುಂದಿಟ್ಟುಕೊಂಡು ನಡೆಯುವುದೆಂದರೆ ಸಿದ್ಧಾಂತರಹಿತ ಹೋರಾಟಕ್ಕೆ ಮುಂದಾದಂತೆಯೇ ಸರಿ.
ಬಾಬಾ ಸಾಹೇಬರಾಗಲೀ, ಅವರ ಚಿಂತನೆಯಾಗಲೀ ಯಾವುದೇ ಒಂದು ಜಾತಿಯ ಸ್ವತ್ತಲ್ಲ.  ಮಾದಿಗರ ಅಂತಿಮ ಗುರಿ ಕೇವಲ ಒಳಮೀಸಲಾತಿಯಷ್ಟೇ ಆಗಿರಲು ಸಾಧ್ಯವಿಲ್ಲ.  ಹಿಂದೂ ಸಮಾಜವೆಂಬ ಜೈಲಿನಿಂದ ಬಿಡುಗಡೆ ಹೊಂದಿ ಬೌದ್ಧ ಧರ್ಮವೆಂಬ ಸಾಗರ ಸೇರುವುದರ ಮೂಲಕ ಪ್ರಬುದ್ಧ ಭಾರತದ ನಿಮರ್ಾಣವೇ ಎಲ್ಲರ ಅಂತಿಮ ಗುರಿಯಾಗಬೇಕು.  ಇದಕ್ಕೆ ಅಂಬೇಡ್ಕರ್ ಮಾರ್ಗವೊಂದೇ ಪರಿಹಾರ. ಮಹಾರಾಷ್ಟ್ರದ ಮಾಂಗ್, ಬಂಗಾಳದ ಚಂಡಾಲ, ಬಿಹಾರ, ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಪಂಜಾಬ್ಗಳ ಚಮ್ಮಾರ ಜನಾಂಗ, ಆಂಧ್ರದ  ಮಾಲ, ತಮಿಳುನಾಡಿನ ಪರಯ್ಯಾಗಳು ಸೇರಿದಂತೆ ಬಹುತೇಕ ಅಸ್ಪೃಶ್ಯರು ತಮ್ಮ ವಿಮೋಚಕರೆಂದು ಬಾಬಾ ಸಾಹೇಬರನ್ನು ಸ್ವೀಕರಿಸಿರುವುದಕ್ಕೆ ಅಸ್ಪೃಶ್ಯತೆ ಎಂಬ ಸಮಾನ ಅಂಶವೇ ಕಾರಣ. ಇವರ ಐಕ್ಯತೆಗೆ ಭಾಷೆ ಮತ್ತು ಪ್ರದೇಶ ಎಂದೂ ಸಮಸ್ಯೆಯಾಗಿಲ್ಲ. ಆದ್ದರಿಂದ ಬಾಬಾ ಸಾಹೇಬರು ಹೊಲೆಮಾದಿಗರಿಬ್ಬರಿಗೂ ಆದರ್ಶವಾಗಬೇಕು. ಇವರಿಬ್ಬರೂ ಬುದ್ಧರ ನೆರಳಿನಲ್ಲಿ ಒಂದಾಗಬೇಕು.  ಆ ಮೂಲಕ ಮೌರ್ಯ ಸಾಮ್ರಾಜ್ಯದ ಮಹಾನ್ ದೊರೆ ದೇವನಾಂಪ್ರಿಯ ಅಶೋಕನ ಕಾಲದಲ್ಲಿ ಇದ್ದಂತೆ ಇಡೀ ಭಾರತ ಒಂದೇ ಧರ್ಮದ ನೆರಳಲ್ಲಿ  ಪ್ರಜ್ವಲಿಸುವಂತಾಗಬೇಕು.
ಹೊಲೆಮಾದಿಗರಿಬ್ಬರಲ್ಲೂ ಇರುವ ಅಂಬೇಡ್ಕರ್ವಾದಿಗಳು ತಮ್ಮ ಮೌನ ಮುರಿದು ಗಂಭೀರ ಚಚರ್ೆಗೆ ಮುಂದಾಗಬೇಕು.  ನಮ್ಮ ಜಡತ್ವ ಮತ್ತು ನಿಷ್ಕ್ರಿಯತೆಯನ್ನು ತೊರೆದು ಅಸ್ಪೃಶ್ಯ ಸಮುದಾಯಗಳ ಮಧ್ಯೆ ಉಂಟಾಗಿರುವ ಗೊಂದಲವನ್ನು ನಿವಾರಿಸಿ ನವ ಚೈತನ್ಯವನ್ನು ತುಂಬಲು ಸಂಕಲ್ಪ ಮಾಡಬೇಕು.  ಬುದ್ಧರ ಮುಂದೆ ಮಾರ ಗೆದ್ದದ್ದುಂಟೆ? ಸತ್ಯದ ಎದುರು ಸುಳ್ಳು ನಿಲ್ಲಲು ಸಾಧ್ಯವೆ?
ಕೊನೆಯ ಮಾತು:  ನ್ಯಾಯಮೂತರ್ಿ ಎ.ಜೆ.ಸದಾಶಿವ ಆಯೋಗದ ವರದಿ ಪ್ರಕಟವಾಗಬೇಕು.  ಆಯೋಗದ ವರದಿಯಲ್ಲಿ  ಯಾವುದೇ ಜಾತಿಗೆ ಅನ್ಯಾಯವಾಗಿರುವುದು ಕಂಡು ಬಂದರೆ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಒಳಮೀಸಲಾತಿಯೇ ಇದಕ್ಕೆ ಪರಿಹಾರವೆನ್ನುವುದಾದರೆ ಅದನ್ನು ಜಾರಿಗೆ ತರುವ ಗಂಭೀರ ಪ್ರಯತ್ನವಾಗಬೇಕು. ಯಾವುದೇ ಜಾತಿಯ ವಿರೋಧವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬಾರದು.
ಸಾಮಾಜಿಕ ಮತ್ತು ಆಥರ್ಿಕ ಸುಧಾರಣೆಯನ್ನು ತರುವುದೇ ರಾಜಕೀಯ ಅಧಿಕಾರದ ಮೂಲಭೂತ ಉದ್ದೇಶವಾಗಿದೆ. ಸಾಮಾಜಿಕ ಕೆಡುಕುಗಳನ್ನು ತುತರ್ಾಗಿ ನಿವಾರಿಸದಿದ್ದರೆ ರಾಜಕೀಯ ಅಧಿಕಾರಕ್ಕಾಗಿ ನಡೆದ ಹೋರಾಟ ವ್ಯರ್ಥವಾಗುತ್ತದೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ರವರು ಹೇಳಿದ್ದಾರೆ. ಭಾರತೀಯ ಸಮಾಜದ ಅವ್ಯವಸ್ಥೆಗೆ ಜಾತಿ ಪದ್ಧತಿಯೇ ಕಾರಣವಾಗಿರುವುದರಿಂದ ಹೊಲೆಮಾದಿಗರು ಇತರೆ ಹಿಂದೂ ಜಾತಿಗಳತ್ತ ಕೈತೋರುವ ಬದಲು ತಮ್ಮ ನಡುವೆ ಸಾಮಾಜಿಕ ಸಂಬಂಧ ಬೆಳೆಸಲು ಮುಂದಾಗಬೇಕು.  ಬಾಬಾ ಸಾಹೇಬರು ಬಯಸಿದಂತೆ ಬೌದ್ಧ ಧರ್ಮ ಸ್ವೀಕಾರವೇ ಇದಕ್ಕಿರುವ ಏಕೈಕ ಪರಿಹಾರ.  ಜಾತಿ ಎಂಬ ನದಿ ಹರಿದು, ಧಮ್ಮ ಎಂಬ ಸಾಗರ ಸೇರಬೇಕು.ಇಲ್ಲದಿದ್ದರೆ ಹಿಂದೂ ಎಂಬ ಮರುಭೂಮಿಯಲ್ಲಿ ಜಾತಿಗಳೆಂಬ ಬಾವಿಗಳಲ್ಲಿ ಕಪ್ಪೆಗಳಾಗಿ ಸಾಯಬೇಕಾಗುತ್ತದೆ. ಅಮೇರಿಕಾ, ಯುರೋಪ್ನ ಕೋಟ್ಯಾಂತರ ಕ್ರಿಶ್ಚಿಯನ್ನರು ಬೌದ್ಧರಾಗ ಬಹುದಾದರೆ ಒಂದು ಕಾಲದಲ್ಲಿ ಬೌದ್ಧ ಧರ್ಮ ಅವಲಂಭಿಯಾಗಿದ್ದ ಹೊಲೆಮಾದಿಗರೇಕೆ ಮತ್ತೆ
ತಮ್ಮ ಮನೆಗೆ ಮರಳಬಾರದು?  ಯುರೋಪ್ ಖಂಡದ ಹಂಗೇರಿ ದೇಶದಲ್ಲಿ  7% ಜನಸಂಖ್ಯೆ ಇರುವ ಎಸ್ಕಿಮೊ ಜನಾಂಗದವರು 2009ರ ನವೆಂಬರ್ನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ರವರ ಹೆಸರಿನಲ್ಲಿ ಸಂಘವೊಂದನ್ನು ಸ್ಥಾಪಿಸಿ ಬೌದ್ಧ ಧರ್ಮ ಸೇರಿ ಅವರ ಹೆಸರಿನಲ್ಲಿ 3 ಪ್ರೌಢಶಾಲೆಗಳನ್ನು ಪ್ರಾರಂಭಿಸಿದ್ದಾರೆ.  ಬಾಬಾ ಸಾಹೇಬರ ಮಾರ್ಗ ದೇಶದ ಗಡಿದಾಟಿ ವಿಶ್ವಮಾನ್ಯತೆ ಪಡೆಯುವತ್ತ ಸಾಗಿದೆ.  ಹೊಲೆಮಾದಿಗರು ಜಾತಿ ವ್ಯವಸ್ಥೆಯನ್ನು ವಿರೋಧಿಸುವುದು ನಿಜವಾಗಿದ್ದರೆ, ಅಸ್ಪೃಶ್ಯತೆ ತೊಲಗಬೇಕೆಂದು ಬಯಸುವುದು ಸತ್ಯವಾಗಿದ್ದರೆ ಮೊದಲು ಹೊಲಗೇರಿ ಮತ್ತು ಮಾದಿಗ ಕೇರಿ ಮಧ್ಯೆ ಇರುವ  ಬೇಲಿಯನ್ನು ಕಿತ್ತುಹಾಕಬೇಕು.  ಶಿಕ್ಷಣಕ್ಕಾಗಿ ಅಮೇರಿಕಾ, ಇಂಗ್ಲೆಂಡ್, ಜಪಾನ್, ಜರ್ಮನಿ, ಆಸ್ಟ್ರೇಲಿಯಾ ಮುಂತಾದ ದೇಶಗಳಿಗೆ VISA ಪಡೆದು ಹೋಗುವ ನಾವು ಕನಿಷ್ಠ ಹೊಲಗೇರಿ ಮತ್ತು ಮಾದಿಗ ಕೇರಿಗಳ ಮಧ್ಯೆ ಮುಕ್ತ ಸಾಮಾಜಿಕ ಸಂಬಂಧಕ್ಕೆ ಮುಂದಾಗದಿದ್ದರೆ ಜಾತಿವ್ಯವಸ್ಥೆಯನ್ನು, ಅಸ್ಪೃಶ್ಯತೆಯನ್ನು ಟೀಕಿಸುವ ನೈತಿಕತೆಯನ್ನು ಕಳೆದುಕೊಂಡಂತೆಯೇ ಸರಿ.  6000 ತುಂಡಾಗಿರುವ ಭಾರತವೆಂಬ ಬಟ್ಟೆಯನ್ನು ಹೊಲಿಯುವ ಕೆಲಸ ಮೊದಲು ಎರಡು ಪ್ರಮುಖ ತುಂಡುಗಳ ಜೋಡಣೆಯಿಂದಲೇ ಪ್ರಾರಂಭವಾಗಬೇಕು. ಹೊಲೆಮಾದಿಗರ ನಂತರ ಜಲಗಾರರೊಂದಿಗೆ ಸಾಮಾಜಿಕ ಸಂಬಂಧ ಬೆಳೆಯಬೇಕು.  ಅಸ್ಪೃಶ್ಯ ಜಾತಿಗಳ ಮಧ್ಯೆ ಸಾಮಾಜಿಕ ಸಂಬಂಧ ಬೆಳೆಯದೆ ಸ್ಪೃಶ್ಯ ಜಾತಿಗಳಲ್ಲಿ ಬದಲಾವಣೆಯನ್ನು ನಿರೀಕ್ಷಿಸುವುದು ಹೇಗೆ ಸಾಧ್ಯ?   ಎಡಗೈ ಮತ್ತು ಬಲಗೈ ಒಂದಾದರೆ ಮಾತ್ರ ಚಪ್ಪಾಳೆ ಸದ್ದು ಕೇಳಲು ಸಾಧ್ಯ. ಇಲ್ಲದಿದ್ದಲ್ಲಿ ಪಟ್ಟಭದ್ರ ಜಾತಿಗಳ ಚಿಟಿಕೆ ಸದ್ದಿನ ಮುಂದೆ ಮಂಡಿ ಊರಬೇಕಾಗುತ್ತದೆ ಎಚ್ಚರ!
——————————————————————————————————
ಈ ಲೇಖನವನ್ನು  “ಡಾ.ಅಂಬೇಡ್ಕರ್ ದೃಷ್ಟಿಯಲ್ಲಿ ಕಲಿಯುಗ” ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಲೇಖಕ: ನಾಗಸಿದ್ಧಾರ್ಥ ಹೊಲೆಯಾರ್
ಮೈಸೂರು-19

ಮನುಸ್ಮೃತಿ ಮತ್ತು ಸಾಮಾಜಿಕ ಮೀಸಲಾತಿ

15/10/2010

ಮೀಸಲಾತಿ ಹಾಗೆಂದಾಕ್ಷಣ ಬಹುತೇಕರ ಕಣ್ಣು ಕೆಂಪಗಾಗುತ್ತದೆ. ಅವರ ಆ ಕೆಂಪಗಾದ ಕಣ್ಣು ಮೊದಲು ನೋಡುವುದು ದಲಿರತ್ತ. ಈ ಮೀಸಲಾತಿಯಿಂದ ದಲಿತರು ಹೆಚ್ಚಿಕೊಂಡವರೆ, ಈ  ಸಕರ್ಾರದ ಪ್ರತಿಯೊಂದು ಸವಲತ್ತು ಇವರಿಗೇನೆ. ಒಂದು ರೀತಿ ಇವರು ಗೌಮರ್ೆಂಟ್ ಬ್ರಾಹ್ಮಣರು ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಆಶ್ಚರ್ಯವೆಂದರೆ ಅಂತಹ ಆಕ್ರೋಶವನ್ನು ಮೀಸಲಾತಿ ವ್ಯಾಪ್ತಿಯೊಳಗೆ ಬರುವ ಒಬಿಸಿಗಳೂ ಕೂಡ ವ್ಯಕ್ತಪಡಿಸುತ್ತಾರೆ.!       ಪ್ರಶ್ನೆಯೇನೆಂದರೆ ಮೀಸಲಾತಿ ಎಂಬ ಈ ಪರಿಕಲ್ಪನೆ ಹೊಸದೆ? ದಲಿತರಿಗೆ ಹಿಂದುಳಿದವರಿಗೆ ಈಗ ಸಿಗುತ್ತಿರುವ ಅದು ಹಿಂದೆ ಯಾರಿಗೂ ಸಿಕ್ಕಿಲ್ಲವೇ? ಹಿಂದೆ ಎಂದೂ ಕೂಡ ಅದು ಜಾರಿ ಇರಲಿಲ್ಲವೇ? ಯಾವ ರೂಪದಲ್ಲಾದರೂ ಸರಿ ಅಂತಹ ಒಂದು  ಪದ್ಧತಿ ಈ ದೇಶದಲ್ಲಿ ಅಸ್ತಿತ್ವ ದಲ್ಲಿರಲಿಲ್ಲವೇ? ಹಾಗಿದ್ದರೆ ಅಂತಹ ಮೀಸಲಾತಿಯ ಜನಕ ಯಾರು? ಫಲಾನುಭವಿಗಳಾದರೂ ಯಾರು? ಅಂದು ಜಾರಿಯಾದ ಆ ಮೀಸಲಾತಿಯ ಪರಿಣಾಮವಾದರೂ ಏನು? ಇತ್ಯಾದಿ ಪ್ರಶ್ನೆಗಳು ಪುಂಖಾನು ಪುಂಖವಾಗಿ ಹುಟ್ಟಿಕೊಳ್ಳುತ್ತವೆ. ಅಕ್ಷರಶಃ ನಿಜ, ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುವುದು ಮನುಸ್ಮೃತಿಯಲ್ಲಿ ಹಾಗು ಅಂತಹ ಮೀಸಲಾತಿ ಪ್ರಥಮ ಫಲಾನುಭವಿಗಳಾದ ಬ್ರಾಹ್ಮಣರಲ್ಲಿ.    ಹಾಗಿದ್ದರೆ ಮನು ಸಂವಿಧಾನ ಬರೆದನೆ? ಮತ್ತು ಅಂತಹ ಸಂವಿಧಾನದಲ್ಲಿ ಹಕ್ಕು ಮತ್ತು ಕರ್ತವ್ಯಗಳನ್ನು, ವಿಧಿಗಳನ್ನು ಸೇರಿಸಿದನೇ? ಮತ್ತು ಅಂತಹ ಸಂವಿಧಾನ ಜಾರಿಯಲ್ಲಿತ್ತೇ? ಯಾರ ಕಾಲದಲ್ಲಿ ಅದು ಜಾರಿಯಲ್ಲಿತ್ತು? ಹೇಗಿತ್ತು? ಯಾವರೀತಿ ಇತ್ತು? ಇತ್ಯಾದಿ ಪ್ರಶ್ನೆಗಳಿಗೆ  ಬಾಬಾಸಾಹೇಬ್ ಡಾ. ಅಂಬೇಡ್ಕರ್ರವರು ತಮ್ಮ ಕ್ರಾಂತಿ ಮತ್ತು ಪ್ರತಿಕ್ರಾಂತಿ ಎಂಬ ಕೃತಿಯಲ್ಲಿ (ಬಾಬಾಸಾಹೇಬರ ಈ ಕೃತಿಯನ್ನು ಉಲ್ಟಾ ಪಲ್ಟಾ ಖ್ಯಾತಿಯ ಚಲನಚಿತ್ರ ನಿದರ್ೇಶಕ ಎನ್.ಎಸ್.ಶಂಕರ್ ಕನ್ನಡಕ್ಕೆ ಅನುವಾದಿಸಿದ್ದಾರೆ) ಉತ್ತರ ಕೊಡುತ್ತಾ ಹೋಗುತ್ತಾರೆ.  ಅಂಬೇಡ್ಕರರ ಪ್ರಕಾರ  ಈ  ದೇಶದಲ್ಲಿ ಸಾಮಾಜಿಕ ಮೀಸಲಾತಿ ಜಾರಿಗೆ ತಂದ ಮನುಸ್ಮೃತಿಎಂಬ ಅಘೋಷಿತ ಸಂವಿಧಾನ ಜಾರಿಗೆ ಬಂದದ್ದು ಬೌದ್ಧರಾಗಿದ್ದ  ಮೌರ್ಯ ವಂಶದ  ಕೊನೆಯ ದೊರೆ ಬೃಹದ್ರಥ ಮೌರ್ಯನ್ನು ಕೊಂದು ಶುಂಗವಂಶದ ಮೂಲಕ   ಬ್ರಾಹ್ಮಣರ ಆಳ್ವಿಕೆಗೆ ಅಡಿಪಾಯ ಇಟ್ಟ ಪುಷ್ಯಮಿತ್ರನ ಕಾಲದಲ್ಲಿ. ಪುಷ್ಯಮಿತ್ರನ ಈ ಬ್ರಾಹ್ಮಣ ಕ್ರಾಂತಿ ಕ್ರಿಸ್ತ ಪೂರ್ವ 185 ರಲ್ಲಿ ಜರುಗಿತ್ತೆಂಬುದನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಇಂತಹ ಬ್ರಾಹ್ಮಣ ಕ್ರಾಂತಿಗೆ ಪೂರಕವಾದ ಕಾನೂನಾದ ಮನುಸ್ಮೃತಿ ರೂಪುಗೊಂಡದ್ದು ಕ್ರಿಸ್ತ ಪೂರ್ವ 170 ರಿಂದ 150 ರ ಅವಧಿಯಲ್ಲಿರಬೇಕು ಎನ್ನುತ್ತಾರೆ ಅಂಬೇಡ್ಕರ್. ಮುಂದುವರಿದು ಅವರು ಮನುಸ್ಮೃತಿ ಎಂಬ ಅಂತಹ ಕಾನೂನಿನ ಜನಕ  ಸುಮತಿಭಾರ್ಗವ ಎಂಬ ಬ್ರಾಹ್ಮಣ, ಮತ್ತದರ ಮೊದಲ ಫಲಾನುಭವಿಗಳು ಬ್ರಾಹ್ಮಣರು ಎಂಬ ಅಭಿಪ್ರಾಯವನ್ನು ಸ್ಪಷ್ಟವಾಗಿ ದಾಖಲಿಸುತ್ತಾರೆ.      ಹಾಗಿದ್ದರೆ ಬ್ರಾಹ್ಮಣರಿಗೆ ಈ ಪರಿಯ ವ್ಯಾಪಕ ಸವಲತ್ತು  ಕೊಟ್ಟ ಮತ್ತು ಅಂತಹ ಕೊಡುವಿಕೆಯ ಮೂಲಕ  ಇಡೀ ದೇಶವನ್ನು ಸಾಮಾಜಿಕ ಅಸಮಾನತೆಗೆ ತಳ್ಳಿದ ಮನುಧರ್ಮಶಾಸ್ತ್ರದ ಬಗ್ಗೆ ಚಚರ್ಿಸಲು ಯಾರು ಯಾಕೆ ಪ್ರಯತ್ನಿಸಿಲ್ಲ? ಅಥವಾ ವಿಶ್ಲೇಷಿಸಲು ಹೋಗಿಲ್ಲ? ಉತ್ತರ ಸ್ಪಷ್ಟ. ಎಲ್ಲೋ ಒಂದು ಕಡೆ ಅಂತಹ ಚಚರ್ೆಯಾಗಬಾರದು, ತಾವು ಪಡೆಯುತ್ತಿರುವ ಇಂತಹ ಸವಲತ್ತುಗಳು  ಯಾರಿಗೂ ಗೊತ್ತಾಗಬಾರದು ಎಂದು ಕುತ್ಸಿತ ಮನಸ್ಸುಗಳು ತಡೆದಿವೆ. ಇದು ಹೇಗೆ ಎಂದರೆ ಮನುಸ್ಮೃತಿ ಬರೆದದ್ದು ಯಾರು ಎಂದರೆ ಅದು ದೈವ ಮೂಲದ್ದು ಎನ್ನಲಾಗಿದೆ! ಅಂದರೆ ಸಾಕ್ಷಾತ್ ದೇವರೇ ಅದನ್ನು ಬರೆದಿರುವುದರಿಂದ  ಯಾರೂ ಅದನ್ನು ಪ್ರಶ್ನಿಸಬಾರದೆಂದರ್ಥ!  ನಿಜಕ್ಕೂ ಇದು ಅಪಾಯಕಾರಿ ಹುನ್ನಾರ. ಎರಡು ಸಾವಿರ ವರ್ಷಗಳೀಂದ ಕೆಲವೊಂದು ಸಮುದಾಯಗಳು ಪಡೆಯುತ್ತಿರುವ ಅಘೋಷಿತ ಸೌಲಭ್ಯಗಳನ್ನು, ಸಾಮಾಜಿಕ ಮೀಸಲಾತಿಯನ್ನು ಪ್ರಶ್ನಿಸಬಾರದೆಂದರೆ? ಅಂತಹ ಮೀಸಲಾತಿಯಿಂದ  ಈ ದೇಶದಲ್ಲಿ ಉಂಟಾಗಿರುವ  ಸಾಮಾಜಿಕ ಏರುಪೇರುಗಳನ್ನು ಪ್ರಶ್ನಿಸಬಾರದೆಂದರೆ? Never, ಅಂತಹ ಪ್ರಶ್ನೆಗಳನ್ನು ಹೆಚ್ಚು ಹೆಚ್ಚು ಕೇಳಬೇಕು. ಇಲ್ಲದಿದ್ದರೆ ಇನ್ನು ಹತ್ತು ಲಕ್ಷ ವರ್ಷವಾದರೂ ಸರಿ  ಸಮಾಜ ಹೀಗೆಯೇ ಇರುತ್ತದೆ. ಸಾಮಾಜಿಕ ತಾರತಮ್ಯವೂ ತೊಲಗುವುದಿಲ್ಲ, ಸಮಾನತೆಯಂತೂ ಸಾಧ್ಯವೇ ಇಲ್ಲ.    ಹಾಗಿದ್ದರೆ ಇಷ್ಟೊಂದು ಅಪಾಯಕಾರಿ ಎನಿಸುವ ಮನುಸ್ಮೃತಿಯು ಬ್ರಾಹ್ಮಣರಿಗೆ ಕೊಟ್ಟಿರುವುದಾದರೂ ಏನು? ಮನುಸ್ಮೃತಿಯ ಒಂದೆರಡು ಸಾಲುಗಳನ್ನು ಉಲ್ಲೇಖಿಸುವುದಾದರೆ ಮುಖದಿಂದ ಬಂದವನಾದ್ದರಿಂದ, ಜ್ಯೇಷ್ಠನಾದ್ದರಿಂದ ಮತ್ತು ವೇದವನ್ನು ಹೊಂದಿದವನಾದ್ದರಿಂದ ಬ್ರಾಹ್ಮಣನೇ ಈ ಸೃಷ್ಟಿಯ ಪ್ರಭು, ಈ ಜಗತ್ತಿನಲ್ಲಿರುವುದೆಲ್ಲ ಬ್ರಾಹ್ಮಣನ    ಸೊತ್ತು. ತನ್ನ ಶ್ರೇಷ್ಠ ಜನ್ಮದಿಂದಲೇ ಬ್ರಾಹ್ಮಣನು ಎಲ್ಲಾ ವಸ್ತುಗಳಿಗೂ ಅರ್ಹತೆ ಪಡೆದಿದ್ದಾನೆ, ಅಧ್ಯಯನ, ಅಧ್ಯಾಪನ, ತನಗಾಗಿ ಮತ್ತು ಇತರಿಗಾಗಿ ಯಜ್ಙ ಯಾಗಾದಿಗಳನ್ನು ಮಡುವುದು. ದಾನಕೊಡುವುದು ಮತ್ತು ಸ್ವೀಕರಿಸುವುದು ಇವು ಬ್ರಾಹ್ಮಣನ ಕೆಲಸಗಳು!     ಇಷ್ಟು ಹೇಳಿದ ಮೇಲೆ ಮುಗಿದು ಹೋಯಿತು! ಮನು ಬ್ರಾಹ್ಮಣರನ್ನು ಯಾವ ಸ್ಥಾನದಲ್ಲಿಟ್ಟ ಮತ್ತು ಅವರಿಗೆ ಯಾವ ಯಾವ  ಕೆಲಸಗಳನ್ನು ಮೀಸಲಿಟ್ಟ ಎಂಬುದು ಅರ್ಥವಾಗುತ್ತದೆ. ಇನ್ನು ಬ್ರಾಹ್ಮಣರಿಗೆ ಸಲ್ಲಬೇಕಾದ ಹಣಕಾಸಿಗೆ ಸಂಬಧಪಟ್ಟಂತೆ? ಈ ಕೆಳಗಿನ ಸಾಲುಗಳು ಅದಕ್ಕೆ ಸಾಕ್ಷಿ ಒದಗಿಸುತ್ತವೆ.      ವಿಧ್ವಾಂಸರು ಎಲ್ಲರಿಗೂ ಅಧಿಪತಿಯಾದ್ದರಿಂದ ಬ್ರಾಹ್ಮಣನ ಕಣ್ಣಿಗೆ ಬಿದ್ದ ಪುರಾತನ ನಿಧಿಯು ಆತನಿಗೇ ಸಲ್ಲುತ್ತದೆ, ಅದೇ ರಾಜನಿಗೆ ನಿಧಿ ಸಿಕ್ಕಿದರೆ ಅದರಲ್ಲಿ ಅರ್ಧವನ್ನು ಬ್ರಾಹ್ಮಣರಿಗೆ ಕೊಟ್ಟು ಉಳಿದರ್ಧವನ್ನು ರಾಜಕೋಶಕ್ಕೆ ಸೇರಿಸಬೇಕು! ಇದಿಷ್ಟು ಮನು ಬ್ರಾಹ್ಮಣರಿಗೆ ಹಣಕಾಸು ‘ನಿಧಿ’ಗೆ ಸಂಬಂಧಪಟ್ಟಂತೆ ನೀಡುವ ಹಕ್ಕುಗಳು ಮುಂದುವರಿದು ಮನು    ತನ್ನ ಕಾಲ ಸನ್ನಿಹಿತವಾದಾಗ ರಾಜನು ಎಲ್ಲಾ ಧನವನ್ನು ಬ್ರಾಹ್ಮಣರಿಗೆ ಒಪ್ಪಿಸಿ, ರಾಜ್ಯವನ್ನು ಮಗನಿಗೆ ಒಪ್ಪಿಸಿ ರಣಭೂಮಿಯಲ್ಲಿ ಸಾವು ಪಡೆಯ ಬೇಕು ಎನ್ನುತ್ತಾನೆ.  ಅಂದಹಾಗೆ ಮನು ಬ್ರಾಹ್ಮಣರಿಗೆ ಹಣಕಾಸು ಹಕ್ಕು ನೀಡಿದ.  ಆದರೆ ಈ ಹಣಕಾಸಿನ ಹಕ್ಕಿಗೆ ಕಳಸವಿಟ್ಟಂತೆ ಮನು ಬ್ರಾಹ್ಮಣರಿಗೆ ನೀಡಿದ್ದು ದಕ್ಷಿಣೆ ಮತ್ತು ದಾನದ ಹಕ್ಕು. ಇದು ಹೇಗೆ ಎಂದರೆ ಮನು  ಉದಾರ ದಕ್ಷಿಣೆಗಳನ್ನು ಕೊಟ್ಟು ರಾಜನು ಯಾಗವನ್ನು ಮಾಡಬೇಕು. ಧಮರ್ಾರ್ಥವಾಗಿ ಬ್ರಾಹ್ಮಣರಿಗೆ ಧನ ಭೋಗಾದಿಗಳನ್ನು ಕೊಡಬೇಕು ಎನ್ನುತ್ತಾನೆ . ಮುಂದುವರಿದು ಮನು ಬ್ರಾಹ್ಮಣೇತರರಿಗೆ ಕೊಟ್ಟ ದಾನ ಸಾಮಾನ್ಯ, ಬ್ರಾಹ್ಮಣನಿಗೆ ಕೊಟ್ಟದ್ದು ದುಪ್ಪಟ್ಟು ಫಲಕಾರಿ, ಅಧ್ಯಯನ ಶೀಲ ಬ್ರಾಹ್ಮಣನಿಗೆ ಕೊಟ್ಟ ದಾನ ಶತ ಸಹಸ್ರಫಲವುಳ್ಳದ್ದು, ಅದೇ ವೇದಪಾರಂಗತ ಬ್ರಾಹ್ಮಣನಿಗೆ  ಮಾಡಿದ ದಾನ ಅನಂತ ಫಲಕಾರಿ  ಎಂದು ದಾನವನ್ನು ಶಾಸನಬದ್ಧಗೊಳಿಸುತ್ತಾನೆ. ಇದು ಹೇಗೆ ಎಂದರೆ ಸ್ವತಃ ಅಂಬೇಡ್ಕರ್ರವರೆ ಮನು ಬ್ರಾಹ್ಮಣರಿಗೆ ದಾನದ ಹಕ್ಕು ಕೊಟ್ಟಿದ್ದ.  ಆ ದಾನ ಯಾವಾಗಲೂ ಹಣ ಅಥವಾ ಚಿರಾಸ್ತಿಯಾಗಿರಬೇಕಿತ್ತು. ಆದರೆ ಕಾಲಾಂತರದಲ್ಲಿ, ಬ್ರಾಹ್ಮಣನಿಗೆ ಉಪಪತ್ನಿಯಾಗಿ ಇರಿಸಿಕೊಳ್ಳಲು ಹೆಣ್ಣಿನ ಉಡುಗೊರೆ  ಅಥವಾ ಹಣ ಕೊಟ್ಟು ಬಿಡಿಸಿಕೊಳ್ಳಬಹುದಾದ ಹೆಣ್ಣನ್ನು ಒತ್ತೆಯಾಗಿಡುವ ಕ್ರಿಯೆ ಸಹ ‘ದಾನದ ಕಲ್ಪನೆ’ಗೆ ಸೇರಿತು!  ಎನ್ನುತ್ತಾರೆ.     ಒಟ್ಟಾರೆ ಮನು ನೀಡಿದ ಈ ದಾನದ ಹಕ್ಕಿನಿಂದಾಗಿ ಬ್ರಾಹ್ಮಣರಿಗೆ ಧನ ಧಾನ್ಯವಲ್ಲದೆ ಬೇರೆಯವರ ಮನೆಯ ಹೆಣ್ಣು ಕೂಡ ಧಕ್ಕಿತು! ಹೀಗಿರುವಾಗ ಇದನ್ನು (ಮನುಧರ್ಮಶಾಸ್ತ್ರ) ನಾಗರೀಕ ಕಾನೂನು ಎನ್ನಬೇಕೆ? ಮತ್ತು ಅಂತಹ ಕಾನೂನು ಈಗಲೂ ಅನೌಪಚಾರಿಕವಾಗಿ ಜಾರಿಯಲ್ಲಿರುವುದನ್ನು ಖಂಡಿಸದೆ ಇರಬೇಕೆ?    ಇರಲಿ ಬ್ರಾಹ್ಮಣರಿಗೆ ಶಿಕ್ಷಣ ಮತ್ತು ಆಥರ್ಿಕ ‘ಮೀಸಲಾತಿ’ ನೀಡಿದ ಮನು ಅವರ ರಕ್ಷಣೆಗಾಗಿ ಯಾವ ರೀತಿಯ ‘ಕಾನೂನು’ ರೂಪಿಸಿದ ಎಂದು ಚಚರ್ಿಸೋಣ. ಏಕೆಂದರೆ ಎಲ್ಲರೂ ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ ಯನ್ನು ಟೀಕಿಸುತ್ತಾರೆ. ಅಂತಹ ಕಾಯ್ದೆಯನ್ನು ಆಗಲೇ ಮನು ಬ್ರಾಹ್ಮಣರಿಗೆ ನೀಡಿದ್ದ ಎಂಬುದನ್ನು ಬಹುತೇಕರು ಗಮನಿಸಲು ಹೋಗಿಲ್ಲ! ಅದಕ್ಕೆ ಅವನ ಒಂದೆರಡು ಸಾಲುಗಳನ್ನು ಇಲ್ಲಿ ಹೇಳುವುದಾದರೆ ತನಗೆ ಹಾನಿ ಮಾಡಿದವರ ವಿರುದ್ಧ ಬ್ರಾಹ್ಮಣನು ರಾಜನಿಗೆ ದೂರು ಒಯ್ಯಬೇಕಿಲ್ಲ. ತನ್ನ ಸ್ವಂತ ಬಲದಿಂದಲೇ ಅವರನ್ನು ಶಿಕ್ಷಿಸಬಲ್ಲನು. ಹಾಗೆಯೇ ಮನು  ವಣರ್ಾಶ್ರಮ ಧರ್ಮಕ್ಕೆ ಚ್ಯುತಿಬಂದಾಗ ಅಥವಾ ವಿಪ್ಲವಕಾಲದಲ್ಲಿ ದ್ವಿಜರು ಆತ್ಮ ರಕ್ಷಣೆಗಾಗಿ ಶಸ್ತ್ರ ಹಿಡಿಯಬಲ್ಲರು ಎನ್ನುತ್ತಾನೆ.  ಇವಿಷ್ಟರಿಂದಲೇ ಅರ್ಥವಾಗುತ್ತದೆ, ಬ್ರಾಹ್ಮಣರ ಮೇಲಿನ ದೌರ್ಜನ್ಯಕ್ಕೆ ಬ್ರಾಹ್ಮಣರು ಯಾವ ಕ್ರಮವನ್ನಾದರೂ  ಕೈಗೊಳ್ಳ ಬಹುದಿತ್ತು! ಅಂದಹಾಗೆ ಬ್ರಾಹ್ಮಣರಿಗೆ ನೀಡಲಾದ ಈ ಪರಿಯ ಸ್ವರಕ್ಷಣೆಯ ಹಕ್ಕು  ಯಾವ ಮಟ್ಟದಲ್ಲಿತ್ತೆಂದರೆ ಆತ್ಮ ರಕ್ಷಣೆಗಾಗಿ ಅಥವಾ ದಕ್ಷಿಣೆಗಾಗಿ ಉಂಟಾದ ವ್ಯಾಜ್ಯದಲ್ಲಿ, ಸ್ತ್ರೀಯರು ಮತ್ತು ಬ್ರಾಹ್ಮಣರ ರಕ್ಷಣೆಗಾಗಿ ಬ್ರಾಹ್ಮಣನು ಕೊಲೆ ಮಾಡಿದರೂ ಅಪರಾಧವಲ್ಲ!     ಆಶ್ಚರ್ಯ! ಈ ಜಗತ್ತಿನಲ್ಲಿ ಕೊಲೆ ಮಾಡಿದರೂ ಕೂಡ ಅಪರಾಧವಲ್ಲ! ಮನು ಅಂತಹ ಮಹತ್ತರ ಹಕ್ಕನ್ನು ಬ್ರಾಹ್ಮಣರಿಗೆ ಕೊಟ್ಟಿದ್ದಾನೆ! ಇಂತಹ ಒಂದು ಹಕ್ಕನ್ನು ಕನಸಿನಲ್ಲಿಯೂ ಕೂಡ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ! ಪ್ರಶ್ನೆ ಎಂದರೆ ಸ್ವರಕ್ಷಣೆಗಾಗಿ ಇಷ್ಟೆಲ್ಲಾ ಹಕ್ಕುಗಳನ್ನು ಕೊಟ್ಟಮೇಲೆ ಅಂತಹ ಸಮುದಾದದ ಮೆಲೆ ದೌರ್ಜನ್ಯವಾದರೂ ಎಲ್ಲಿ ನಡೆಯುತ್ತದೆ? ಹೀಗಿರುವಾಗ ಇಂತಹ ಅನೌಪಚಾರಿಕ ಹಕ್ಕನ್ನು ಪ್ರಶ್ನಿಸದ  ಕುತ್ಸಿತ ಮನಸ್ಸುಗಳು ಎಸ್.ಸಿ./ ಎಸ್.ಟಿ ದೌರ್ಜನ್ಯ ತಡೆ ಕಾಯಿದೆ ಬಗ್ಗೆ ಕೊಂಕು ಮಾತನಾಡುವುದೇಕೆ?   ಒಂದಂತು ನಿಜ ಶೂದ್ರರಿಗೆ ವಿದ್ಯೆಯನ್ನು ನಿರಾಕರಿಸುವ ಮೂಲಕ, ಕ್ಷತ್ರಿಯರನ್ನು ಕ್ಷಾತ್ರಕ್ಷೇತ್ರಕ್ಕೆ ಕಳುಹಿಸುವ ಮೂಲಕ, ವೈಶ್ಯರನ್ನು ಕೃಷಿ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ಮೀಸಲಿರಿಸುವ ಮೂಲಕ, ಶಿಕ್ಷಣವನ್ನು ತಮಗೆ ಮಾತ್ರ ಮೀಸಲಿರಿಸಿಕೊಳ್ಳುವುದರ ಮೂಲಕ ಬ್ರಾಹ್ಮಣರು ಸಮಾಜದ ದಿಕ್ಕು ತಪ್ಪಿಸಲು ಮತ್ತು ತಪ್ಪು ಮಾರ್ಗದರ್ಶನ ನೀಡಲು ಸ್ವಂತಂತ್ರವಾದ ಏಕೈಕ ಶಿಕ್ಷಿತ ವರ್ಗವಾದರು. ಏಕೆಂದರೆ ಭಾರತೀಯ ಸಮಾಜದಲ್ಲಿ ಇಂತಿಂತಹವರಿಗೆ ಇಂತಹದ್ದೆ ಕೆಲಸ, ಮತ್ತು ಆ ಕೆಲಸ ಮಾಡುವವರು ಇಂತಹದ್ದೆ ಜಾತಿ ಎಂದು ಮಾರ್ಗದರ್ಶನ ನೀಡಿದ್ದು ಅವರೇ ಅಲ್ಲವೆ. ಏಕೆಂದರೆ ಮನು ಎಂದು ಕರೆಸಿಕೊಳ್ಳುವ ಸುಮತಿ ಭಾರ್ಗವನೆಂಬ ಆತ ಬ್ರಾಹ್ಮಣನೇ ಅಲ್ಲವೇ? ಮತ್ತು ಆತ ಬರೆದ ಮನು ಧರ್ಮಶಾಸ್ತ್ರ ಬ್ರಾಹ್ಮಣರ ಏಳ್ಗೆಗಾಗಿಯೇ ಅಲ್ಲವೇ? ಹೀಗಿರುವಾಗ ಮನುಸ್ಮೃತಿಎಂಬ ಪ್ರಾಚೀನ ಕಾಲದ ಕಾನೂನಿನ ಮೂಲಕ ಪಡೆದಿರುವ ಆ ಅಮೂಲ್ಯ ಮೀಸಲಾತಿ ಇರುವಾಗ ಅವರು ಸಮಾಜದಲ್ಲಿ ಉನ್ನತವರ್ಗದವರಾಗಿರದೆ ಇನ್ನೇನಾಗಿರಲು ಸಾಧ್ಯ? ಉನ್ನತವರ್ಗದವರಾಗಿರಲಿ, ಅಭ್ಯಂತರವೇನಿಲ್ಲ. ಅದು ಅವರ ಹಕ್ಕು. ಪ್ರಶ್ನೆ ಏನೆಂದರೆ ಹಿಂದುಳಿದವರ್ಗದವರಿಗೆ ಮತ್ತು ದಲಿತರಿಗೆ ಪ್ರಸ್ತುತ ಸಂವಿಧಾನಬದ್ಧವಾಗಿ ನೀಡಲ್ಪಡುತ್ತಿರುವ ಅದೇ ಹಕ್ಕುಗಳನ್ನು ವಿರೋಧಿಸುವುದೇಕೆ? ಎನ್ನುವುದು. ಮಾತೆತ್ತಿದರೆ ಪ್ರತಿಭೆ, ಪ್ರತಿಭೆ ಎನ್ನುತ್ತಾರೆ. Merit? My foot! D meritಅಥವಾ ಪ್ರತಿಭೆ ಅವರ ವ್ಯಕ್ತಿಗತವಾಗಿ ಬಂದದ್ದಲ್ಲ. ಅದು ಮನುಸ್ಮೃತಿ ಮೂಲಕ ಅವರು ಪಡೆದ ಸಾಮಾಜಿಕ ಮೀಸಲಾತಿಯಿಂದ ಪಡೆದದ್ದು. ಹೀಗಿರುವಾಗ ಅಂತಹದ್ದೆ ಮೀಸಲಾತಿಯನ್ನು, ಹಕ್ಕುಗಳನ್ನು ಸಂವಿಧಾನಬದ್ಧವಾಗಿ ಈ ದೇಶದ ಶೋಷಿತ ವರ್ಗಗಳು ಪಡೆದರೆ ಕರುಬುವುದೇಕೆ?   ಒಂದಂತು ನಿಜ, ಮನುಸ್ಮೃತಿ ಸ್ವಯಂಭೂ (ದೈವ ಸ್ವರೂಪಿ) ಇರಬಹುದು. ಆದರೆ ಭಾರತದ ಸಂವಿಧಾನ ಮತ್ತು ಶೋಷಿತರಿಗೆ ಅದು ನೀಡಿರುವ ಹಕ್ಕುಗಳು? ಮಹಾಮಾನವ ಅಂಬೇಡ್ಕರ್ ಸ್ವರೂಪಿ. ಹಾಗಿದ್ದರೆ ಇಲ್ಲಿ ಯಾರು ಗ್ರೇಟ್? ದೈವ ಅಥವಾ ಮಾನವ? Man is always great. Because he is the creator of god!

ರಘೋತ್ತಮ ಹೊ.ಬ

ಚಾಮರಾಜನಗರ 571313

ಮೊ:9481189116


Naga Siddhartha Holeyar “ನಾಗಸಿಧ್ಧಾರ್ಥ ಹೊಲೆಯಾರ್”, ವೈಚಾರಿಕ ಸಾಹಿತ್ಯದ ಹೊಸನೀರು

08/07/2010

ಖ್ಯಾತ ತತ್ವಶಾಸ್ತ್ರಜ್ಙ ಹೆಚ್.ಡ್ರಮಂಡ್ ವೈಚಾರಿಕತೆಗೆ ಸಂಬಂಧಿಸಿದಂತೆ ಒಂದೆಡೆ ಹೀಗೆ ಹೇಳುತ್ತರೆ. ಬಾಬಾಸಾಹೇಬ್ ಅಂಬೇಡ್ಕರ್ರವರು ತಮ್ಮ “ಜಾತಿ ನಿಮರ್ೂಲನೆ” ಎಂಬ ಕೃತಿಯ ಮುನ್ನುಡಿಯಲ್ಲಿ ಡ್ರಮಂಡ್ರ ಈ  ಸಾಲುಗಳನ್ನು ಬಳಸಿಕೊಳ್ಳುತ್ತ್ತಾರೆ ಆ ಅದ್ಭುತ ಸಾಲುಗಳು ಇಂತಿವೆ.”ವಿಚಾರ ಮಾಡಲೊಲ್ಲದವನು ಮತಾಂಧ, ವಿಚಾರ ಮಾಡಲರಿಯದವನು ಮೂರ್ಖ, ವಿಚಾರ ಮಾಡಲಂಜುವವನು ಗುಲಾಮ”. ಬಹುಶಃ ವೈಚಾರಿಕತ ೆಅಧಾರಿತ ಸಮಾಜದ ದೃಷ್ಡಿಕೋನ ಹೇಗಿರಬೇಕೆಂಬುದಕ್ಕೆ  ಡ್ರಮಂಡ್ರ ಈ ಸಾಲುಗಳು ಕನ್ನಡಿ ಹಿಡಿಯುತ್ತವೆ. ಇಂದು  ಚಾಮಾರಾಜನಗರದಲ್ಲಿ ಬಿಡುಗಡರೆಯಾಗುತ್ತಿರುವ  ನಾಗಸಿದ್ಧಾರ್ಥ ಹೊಲೆಯಾರರ ‘ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ದೃಷ್ಟಿಯಲ್ಲಿ ಕಲಿಯುಗ” ಎಂಬ ಕೃತಿ ಅಂತಹ ವೈಚಾರಿಕತೆಯ ಸಣ್ಣ ಬಿಂಬ ಎನ್ನಲಡ್ಡಿಯಿಲ್ಲ. ಈ ಹಿನ್ನೆಲೆಯಲ್ಲಿ ನಾಗಸಿದ್ಧಾರ್ಥ ಹೊಲೆಯಾರರ ಬದುಕು ಬರಹದ ಸಣ್ಣ ಚಿತ್ರಣ ಇಲ್ಲಿದೆ.
“ನಾಗಸಿದ್ಧಾರ್ಥ ಹೊಲೆಯಾರ್” ಎಂಬ ಕಾವ್ಯನಾಮದಿಂದ ಸಾಹಿತ್ಯ ಲೊಕಕ್ಕೆ ಪರಿಚಯವಾಗುತ್ತಿರುವ ಇವರ ಮೂಲ ಹೆಸರು ರಾಜಶೇಖರಮೂತರ್ಿ. ವೃತ್ತಿಯಲ್ಲಿ ಉಪತಹಸೀಲ್ದಾರರು, ಪ್ರವೃತ್ತಿಯಲಿ ಲೇಖಕ. ಲೇಖಕ ಅನ್ನುವದಕ್ಕಿಂತ ಸಂಶೋದಕ. ಆ ಸಂಶೋಧನೆಗೆ ಅಂಬೇಡ್ಕರ್ವಾದದ ನೆಲೆಗಟ್ಟಿದೆ. ಶೊಷಿತರ ಪರ ಕಾಳಜಿ ಇದೆ. ಸಾಮಾಜಿಕ ಹೊಣೆಗಾರಿಕೆಯ ನಿರತಂರ ತುಡಿತವಿದೆ.
ಸಿದ್ಧಾರ್ಥ ಹೊಲೆಯಾರರ ಜನ್ಮ ಸ್ಥಳ ಚಾಮಾರಾಜನಗರ ತಾಲ್ಲೂಕಿನ ಮಂಗಲ ಹೊಸುರು ಗ್ರಾಮ. ತಂದೆ ಎಸ್ ಬಸವಯ್ಯ, ತಾಯಿ ದೇವಾಜಮ್ಮ . ಇವರದು ಸುಶಿಕ್ಷಿತ ದಲಿತ ಕುಟುಂಬ. ಅಂತಹ ಶಿಕ್ಷಣದ ಸಂಸ್ಕಾರ ಇವರಿಗೆ ಅದುದರಿಂದಲೇ ಬಾಲ್ಯದಿಂದಲೆ ಇವರದು ಪ್ರಶ್ನಿಸುವ ಮನೋಭಾವ. ಕವನಗಳನ್ನು ಕಥೆಗಳನ್ನು ಬರೆಯುವ ಹುಚ್ಚು. ಸಮಾಜದ ಬದಲಾವಣೆಗೆ ತಹತಹಿಸುವ ಗುಣ. ಇಂತಹ ಗುಣವೇ ಇವರನ್ನು ನವದೆಹಲಿಯ ಖ್ಯಾತ ಸಂಶೋಧಕ ಶ್ರೀ ಎನ್. ಕೆ. ಶಮರ್ಾಜಿಯವರ ಸಂಪರ್ಕ ಪಡೆಯುವಂತೆ ಮಾಡಿದ್ದು. “ದಲಿತ್ ವಾಯ್ಸ್ ‘ ಆಂಗ್ಲ ಮಾಸಿಕದಲ್ಲಿ ಇವರ ಒಂದು ಪತ್ರ ಪ್ರಕಟವಾದದ್ದು, ಆ ಪತ್ರದ ಜಾಡು ಹಿಡಿದು ಶ್ರೀ ಎನ್. ಕೆ. ಶಮರ್ಾರವರು ಸಿದ್ಧಾರ್ಥ ಹೊಲೆಯಾರರನ್ನು ತಮ್ಮ ತೆಕ್ಕೆಗೆ ಸೆಳೆದು ಕೊಂಡದ್ದು, ಸಿದ್ದಾರ್ಥ ಹೊ;ಲೆಯಾರರ ವೈಚಾರಿಕತೆಗೆ ನೀರೆರೆದದ್ದು, ಬಹುಶಃ ವ್ಯಕ್ತಿಯೊಬ್ಬರ ಜೀವನಕ್ಕೆ ಸಿಗಬಹುದಾದ ನೈಜ ತಿರುವು ಎನ್ನಬಹುದು. ಸ್ವತಃ ಸಿದ್ಧಾರ್ಥ ಹೊಲೆಯಾರರೆ ” ನಾನೊಬ್ಬ ಲೇಖಕನಾಗಲು ನನಗೆ ಅಂಬೇಡ್ಕರ್ ವಾದದ ದೀಕ್ಷೆ ನೀಡಿದ ನನ್ನ ಪರಮ ಪೂಜ್ಯ ಗುರುಗಳಾದ ನವದೆಹಲಿಯ ಶ್ರೀ ಎನ್ ಕೆ ಶಮರ್ಾರವರೆ ಕಾರಣ ಎನ್ನುತ್ತಾರೆ.  ಪ್ರಸ್ತುತ ಇಂದು ಬಿಡುಗಡೆಯಾಗುತ್ತಿರುವ ಕೃತಿ ಅಂತಹ ಅಂಬೇಡ್ಕರ್ವಾದದ ದೀಕ್ಷೆಯಿಂದ ಒಡಮೂಡಿದ ಕೃತಿ ಎಂದರೆ ಅತಿಶಯೋಕ್ತಿಯೇನಲ್ಲ.
ಹಾಗಿದ್ದರೆ ಈ ಕೃತಿಯಲ್ಲಿ ಅಂತಹದ್ದೇನಿದೆ? ಲೇಖಕರು ಪ್ರಾರಂಭದಲ್ಲೇ ಹೇಳುವ ಹಾಗೆ” ವಿಜ್ಞಾನ ಮತ್ತು ತಂತ್ರ ಜ್ಞಾನವನ್ನು ಅಜ್ಞಾನದ ಪ್ರಚಾರಕ್ಕೆ ದುರ್ಬಳಕೆ ಮಾಡುತ್ತಿರುವುದರಿಂದ ವೀಕ್ಷಕರ ಮೇಲಾಗುತ್ತಿರುವ ದುಷ್ಪರಿಣಾಮದ ಹಿನ್ನೆಲೆಯಲ್ಲಿ ಕಲಿಯುಗದ ಬಗ್ಗೆ ಜನರಲ್ಲಿರುವ ಮೌಢ್ಯ ದ ಬಗ್ಗೆ ಕೆಲವರಲ್ಲಾದರೂ ಜಾಗೃತಿಮೂಡಿಸುವ ಉದ್ದೇಶದಿಂದ ….” ಹೌದು , ಇಲ್ಲಿ ಮೌಢ್ಯದ ವಿರುದ್ಧ ಚಾಟಿಯನ್ನೆ ಬೀಸಲಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಲೇಖಕರು ಭಾರತದ ಇತಿಹಾಸವನ್ನು ಪುನರ್ರಚಿಸುವ ಅಗತ್ಯವನ್ನು ಒತ್ತಿ ಹೇಳುತ್ತಾರೆ. “ಬೇಟೆಗಾರರಿಂದ ರಚಿತವಾದ  ಇತಿಹಾಸ” ಆ ಬೇಟೆಗಾರರಿಂದ ತಪ್ಪಿಸಿಕೊಂಡ ಹುಲಿಯ ಇತಿಹಾಸ ಆಗಿರಲು ಹೇಗೆ ಸಾಧ್ಯ? ಎಂದು ಈ ದೇಶದ ಮೂಲನಿವಾಸಿಗಳ ಹಿನ್ನೆಲಿಯಲ್ಲಿ ಭಾರತದ “ಮನು ಪ್ರಣೀತ ” ಇತಿಹಾಸವನ್ನು ಪ್ರಶ್ನಿಸುತ್ತಾರೆ.  ಹಾಗೆ ಪ್ರಶ್ನಿಸುವ ಅವರು  ಸುಮ್ಮನೇ ಕೂರುವುದಿಲ್ಲ. ಇತಿಹಾಸಕ್ಕೆ  ಹೊಸ ಬೆಳಕು ಚೆಲ್ಲು ವ ಪ್ರಯತ್ನವನ್ನೂ ಕೂಡ ಮಾಡುತ್ತಾರೆ. ಉದಾಹರಣೆಗೆ “ನಾಗ ಬೌದ್ಧ ಹೊಲೆಯರ ಇತಿಹಾಸ” ಎಂಬ ಲೇಖನದಲ್ಲಿ,  ” ಹೊಲ” ಎಂದರೆ “ಭೂಮಿ,” “ಹೊಲೆಯ” ಎಂದರೆ “ಹೊಲದ ಒಡೆಯ” ಎಂದು ಹೊಲೆಯ  ಎಂಬ ಪದಕ್ಕೆ ಹೊಸ ಅರ್ಥವನ್ನೇ ನೀಡುತ್ತಾರೆ. ಮತ್ತು ಇದಕ್ಕೆ ಸೂಕ್ತ ಆಧಾರವನ್ನು ಸಹ ನೀಡುತ್ತಾರೆ, ಮತ್ತೊಂದೆಡೆ ಅಂಬೇಡ್ಕರ್ರವರು “ಅಸ್ಪೃಶ್ಯರು ಮೂಲತಃ ನಾಗ ಜನಾಂಗದವರು” ಎಂದಿರುವುದಕ್ಕೆ ಸಮರ್ಥನೆಯಾಗಿ ಲೇಖಕರು, “ನಾಗರೀಕ”, “ನಾಗರೀಕತೆ”, “ನಗರ” ಈ ಪದಗಳು “ನಾಗ ಜನಾಂಗ ದ  ವ್ಯಕಿ”್ತಯನ್ನು, “ನಾಗ ಜನಾಂಗದ ಸಂಸ್ಕೃತಿ”ಯನ್ನು, ಮತ್ತು “ಅವರು ವಾಸಿಸುತ್ತಿದ್ದ ಸ್ಥಳ”ಗಳನ್ನು ಸೂಚಿಸುತ್ತಿದ್ದವು ಎನ್ನುತ್ತಾರೆ.
ಒಟ್ಟಾರೆ ಹೊಲೆಯಾರರು ತಮ್ಮ ಈ ಕೃತಿಯಲ್ಲಿ ಇತಿಹಾಸವೆಂಬ ಗೀಜಗನ ಗೂಡಿಗೆ ಕೈ ಹಾಕುವ ಪ್ರಯತ್ನ ಮಾಡಿದ್ದಾರೆ. ಉದಹರಣೆಗೆ “ಬೌದ್ಧ ಬಿಕ್ಕು ಯೇಸು ಕ್ರಿಸ್ತ” ಎಂಬ ಲೇಖನ ಅಂತಹ ಪ್ರಯತ್ನಗಳಲ್ಲೊಂದು. ಅದಲ್ಲದೇ “ಪೇಜಾವರ ಶ್ರೀಗಳಿಗೊಂದು ಬಹಿರಂಗ ಪತ್ರ” ಎಂಬ ಲೇಖನದಲ್ಲಿ, “ಬುದ್ಧ, ಬೌದ್ಧ ಬಿಕ್ಕು ಮತ್ತು ಬಿಕ್ಕುಣಿಯರನ್ನು ಧರ್ಮಸ್ಥಳ ಮಂಜುನಾಥ, ತಿರುಪತಿಯ ಬಾಲಾಜಿ, ಕೇದಾರನಾಥ, ಶ್ರೀ ರಂಗನಾಥ,ಪುರಿಯ ಜಗನ್ನಥ, ಕಾಶಿ ವಿಶ್ವನಾಥ, ಕಂಚಿ ಕಾಮಕ್ಷಿ, ಮಧುರೈ ಮೀನಾಕ್ಷಿ, ಎಲ್ಲಮ್ಮ, ಪೊಲ್ಲಮ್ಮ, ಮಾರಮ್ಮ  ಇತ್ಯಾದಿ ರೂಪಗಳಲ್ಲಿ ಪೂಜಿಸಲಾಗುತ್ತಿದೆ” ಎಂದು ಇತಿಹಾಸದ  ಬುಡವನ್ನೆ ಅಲುಗಾಡಿಸುವ ಪ್ರಯತ್ನ ಮಾಡಿದ್ದಾರೆ.
ಇದಿಷ್ಟೆ ಅಲ್ಲದೆ ಅಸ್ಪೃಶ್ಯರ ಮಧ್ಯೆ ಇರುವ “ಎಡಗೈ-ಬಲಗೈ” ಸಮಸ್ಯೆಯ ಬಗ್ಗೆ ಮಾನವೀಯ ಕಳಕಳಿಯ       ಹಿನ್ನೆಲೆಯಲ್ಲಿ ಬರೆಯುವ ಲೇಖಕರು , ಸಮಾಜದ ಅತ್ಯಂತ ತಳಸಮುದಾಯವಾದ ಜಲಗಾರರ ಸಮಸ್ಯೆಗಳನ್ನು ಎತ್ತಿಕೊಳ್ಳುತ್ತಾ ” ಚಂದ್ರ ಲೋಕವೆಂಬ ನಿಜರ್ೀವ ಲೋಕದ ಬಗ್ಗೆ ತರಲೆಕೆಡಿಸಿಕೊಳ್ಳುವ ವಿಜ್ಞಾನಿಗಳು ಮ್ಯಾನ್ ಹೋಲ್ಗಳನ್ನು ಶುಚಿಗೊಳಿಸಲು ಇನ್ನೂ ಏಕೆ ಒಂದೂ ಯಂತ್ರವನ್ನು ಕಂಡುಹಿಡಿದಿಲ್ಲ? ಎಂದು ಆತಂಕದಿಂದ ಪ್ರಶ್ನಿಸುತ್ತಾರೆ.  ಆ ನಿಟ್ಟಿನಲಿ ಮಾಹಿತಿತಂತ್ರಜ್ಞಾನ (IT), ಜೈವಿಕ ತಂತ್ರಜ್ಞಾನ(BT) ಯ ಹಾಗೆ ಶೌಚ ತಂತ್ರಜ್ಞಾನ (
Scavenging Technology)  ಕೂಡ ಅಭಿವೃದ್ಧಿಯಾಗಬೇಕು ಎಂಬ ಗಂಭೀರ ಸಲಹೆಯನ್ನು ನೀಡುತ್ತಾರೆ.
ಒಟ್ಟಾರೆ ನಾಗಸಿದ್ಧಾರ್ಥ ಹೊಲೆಯಾರರ ಈ ಕೃತಿ ಮಾನವ ಪರ ಕಾಳಜಿಯ ಕೃತಿಯಾಗಿದೆ. ಅದಕ್ಕೆ ಹೊಸ ದಿಕ್ಕು ಸೂಚಿಸುವ ಛಾತಿ ಇದೆ.  ಎಲ್ಲವನ್ನು ನೇರವಾಗಿ ಹೇಳುವ ದಿಟ್ಟ ಗುಣ ಇದೆ. ಈ ಸಂಧರ್ಭದಲ್ಲಿ  ಖ್ಯಾತ ಚಿಂತಕ ಜೆ. ಆರ್. ಲಾವೆಲ್ರ ಹೇಳಿಕೆ ಇಲ್ಲಿ ಉಲ್ಲೇಖನೀಯ, “ನಾವು ಮಾತನಾಡುತ್ತೇವೆ ನಮ್ಮನ್ನು ಎಲ್ಲರೂ ಕೇಲಿಸಿಕೊಳ್ಳಲಿ. ಇದರಿಂದ  ಪ್ರಪಂಚದ ವ್ಯವಸ್ಥೆ ಬಿರುಕು ಬಿಟ್ಟರೂ ಬಿಡಲಿ, ನಾವು ಒಂದು ಶಬ್ಧವನ್ನೂ ಬಚ್ಚಿಡುವುದಿಲ್ಲ. ಆಡಿದ ಒಂದು ಅಕ್ಷರವನ್ನೂ ಹಿಂದಕ್ಕೆ ತೆಗೆದು ಕೊಳ್ಳುವುದಿಲ್ಲ. ಅಂಜುಬುರುಕರು ಅಂಜುತ್ತಿರಲಿ , ಹೇಡಿಗಳು ಹಿಂಜರಿಯಲಿ, ಸಂಪ್ರದಾಯವಾದಿಗಳು ಎದುರಾಗಿ ನಿಲ್ಲಲಿ, ನಾವು ಯಾವುದನ್ನು ಧೈರ್ಯದಿಂದ ವಿಚಾರಿಸಿದ್ದೇವೆಯೋ ಅದನ್ನು ಹೇಳುವ ಧೈರ್ಯವು ನಮಗಿದೆ.”                                                                                                        ನಾಗಸಿದ್ಧಾರ್ಥ ಹೊಲೆಯಾರರು ಎಲ್ಲವನ್ನು ಧೈರ್ಯದಿಂದ ಹೇಳಿದ್ದಾರೆ. ಅವರು ಯಾವುದನ್ನೂ ಬಚ್ಚಿಟ್ಟಿಲ್ಲ. ಹಿಂಜರಿಯಲು ಹೋಗಿಲ್ಲ      , ಅಂಜಿಕೆಯಂತೂ ಇಲ್ಲವೇ ಇಲ್ಲ. ಆದರೆ ಎಲ್ಲರೂ ಕೇಳಿಸಿ ಕೊಳ್ಳಲಿ ಎಂಬ ಕಳಕಳಿ ಇದೆ. ತನ್ನ ವಿಚಾರಗಳನ್ನು  ಎಲ್ಲರಿಗೂ ಮುಟ್ಟಿಸಬೇಕೆಂಬ ಅಧಮ್ಯ ಉತ್ಸಾಹವಿದೆ. ಮತ್ತು ಹಾಗಯೇ ಸಮಯ ಕೂಡ ಇದೆ ಯಾಕೆಂದರೆ ಸಿದ್ಧಾರ್ಥ ಹೊಲೆಯಾರರಿಗೆ ಈಗಿನ್ನೂ ನಲವತ್ತು.
ಒಟ್ಟಿನಲಿ ನಾಗಸಿದ್ಧಾರ್ಥ ಹೊಲೆಯಾರರ ” ಬಾಬಾಸಾಹೇಬ್ ಡಾ.ಅಂಬೇಡ್ಕರ್ ದೃಷ್ಟಿಯಲ್ಲಿ ಕಲಿಯುಗ” ಎಂಬ ಈ ಕೃತಿ ವೈಚಾರಿಕ ಸಾಹಿತ್ಯಕ್ಕ್ಕೆ ಹರಿದು ಬರುತ್ತಿರುವ ಸಣ್ಣ ತೊರೆ. ಓದುಗರು ಅದರ ಒಂದೊಂದು ಗುಟುಕನ್ನೂ ಮಾನವೀಯ ಕಳಕಳಿಯ ಹಿನ್ನೆಲೆಯಲ್ಲಿ ಸ್ವೀಕರಿಸಬೇಕಾಗಿದೆ. ಕಡೆಯದಾಗಿ ಕನ್ನಡ ಮರಾಠಿಯ ಮೊದಲ ದಲಿತ ಲೇಖಕ ಎಂದು ಗುರುತಿಸಲ್ಪಡುವ ದೇವರಾಯ ಹಿಂಗಳೆಯವರು ಅಂಬೇಡ್ಕರರನ್ನು ಕುರಿತು ಒಂದು ಕವನ ಬರೆದಿದ್ದಾರೆ. ಅದರ ಒಂದೆರಡು ಸಾಲುಗಳು  ಇಂತಿವೆ.
ಅವನು ಸೂರ್ಯ
ನಾವು ಅವನ ತುಣುಕುಗಳು
ಲೇಖಕ ನಾಗಸಿದ್ಧಾರ್ಥ ಹೊಲೆಯಾತರರು ಅಂತಹ ತುಣುಕಿನ ಒಂದಂಶವಾಗಿ ಬೆಳಗಲಿ, ಕನ್ನಡ ಸಾಹಿತ್ಯದ ಆಸ್ತಿಯಾಗಲಿ ಎಂಬುದಷ್ಟೆ ಈ ಲೇಖನದ ಕಳಕಳಿ
.
-ರಘೋತ್ತಮ ಹೊ.ಬ

ಚಾಮರಾಜನಗರ-571313
ಮೊಬೈಲ್-9481189116