ಜಾತೀಯತೆಗೆ ಬುದ್ಧ ಪರಿಹಾರ: ದೇವದಾಸ್:ರಾಜ್ಯ ಮಟ್ಟದ ಬೌದ್ಧ ಸಮಾವೇಶ

13/06/2011

ಹಾಸನ, ಜೂ.12: ಗೌತಮ ಬುದ್ಧನ ತ್ಯಾಗ ಮತ್ತು ಅವನ ಪಂಚಶೀಲ ತತ್ತ್ವಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳುವ ಅಗತ್ಯ ಇದೆ ಎಂದು ದಲಿತ ಸಂಘರ್ಷ ಸಮತಿಯ ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್ ಹೇಳಿದ್ದಾರೆ. ಹಾಸನದ ಅಂಬೇಡ್ಕರ್ ಭವನದಲ್ಲಿ ನಡೆದ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ 2550ನೆ ಬುದ್ಧ ಜಯಂತಿಯ ಅಂಗವಾಗಿ ರಾಜ್ಯ ಮಟ್ಟದ ಬೌದ್ಧ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧನ ತತ್ತ್ವಗಳನ್ನು ಪ್ರತಿಯೊಬ್ಬರು ಪರಿಪಾಲನೆ ಮಾಡುವುದರಿಂದ ದೇಶದಲ್ಲಿ ಶಾಂತಿ ನೆಲಸಲು ಸಾಧ್ಯ ಎಂದು ಅಭಿಪ್ರಾಯಿಸಿದರು.

ಹಾಸನದ ಅಂಬೇಡ್ಕರ್ ಭವನದಲ್ಲಿ ರವಿವಾರ ನಡೆದ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ 2550ನೆ ಬುದ್ಧ ಜಯಂತಿಯ ಅಂಗವಾಗಿ ರಾಜ್ಯ ಮಟ್ಟದ ಬೌದ್ಧ ಸಮಾವೇಶ ಉದ್ಘಾಟಿಸುತ್ತಿರುವ ಗಣ್ಯರು.

ಹಾಸನದ ಅಂಬೇಡ್ಕರ್ ಭವನದಲ್ಲಿ ರವಿವಾರ ನಡೆದ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ 2550ನೆ ಬುದ್ಧ ಜಯಂತಿಯ ಅಂಗವಾಗಿ ರಾಜ್ಯ ಮಟ್ಟದ ಬೌದ್ಧ ಸಮಾವೇಶ ಉದ್ಘಾಟಿಸುತ್ತಿರುವ ಗಣ್ಯರು. ಇಂದಿನ ಜಾತೀಯತೆ, ಅಸ್ಪಶತೆ ಸೇರಿದಂತೆ ಸಾಮಾಜಿಕ ಪಿಡುಗುಗಳಿಗೆ ಬುದ್ಧ ಪರಿಹಾರ ಎಂದು ದೇವದಾಸ್ ನುಡಿದರು.ದೇಶದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರದ ವಿರುದ್ಧ ಬೀಗಿಳಿದು ಹೋರಾಟ ನಡೆಸಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಬುದ್ಧನ ಆದರ್ಶಗಳನ್ನು ಎಲ್ಲರೂ ಪಾಲಿಸಿದ್ದರೆ ಇಂದು ಅಣ್ಣಾ ಹಝಾರೆ ಮತ್ತು ಬಾಬಾ ರಾಮ್‌ದೇವ್ ಹೋರಾಟ ಆರಂಭಿಸುವ ಅಗತ್ಯ ಉದ್ಬವಿಸುತ್ತಿರಲಿಲ್ಲ ಎಂದವರು ಹೇಳಿದರು. ಮನುಷ್ಯನಿಗೆ ಎಷ್ಟೇ ಆಸ್ತಿ-ಪಾಸ್ತಿ ಇದ್ದರೂ ನೆಮ್ಮದಿ ಅತಿಮುಖ್ಯ. ಬುದ್ಧನ ತತ್ತ್ವಾದರ್ಶ ಪಾಲಿಸುವುದರಿಂದ ಶಾಂತಿ ಮತ್ತು ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದು ದೇವದಾಸ್ ತಿಳಿಸಿದರು. ಬೌದ್ಧ ಗುರು ಬೋದಿದತ್ತ ಬಂತೇಜಿ ಮಾತನಾಡಿ, ಗೌತಮ ಬುದ್ಧನ ತತ್ತ್ವಾದರ್ಶಗಳು ಸರಳ ಮತ್ತು ಸುಸಂಸ್ಕೃತವಾಗಿವೆ. ಹಾಗಾಗಿಯೇ ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್‌ರು ದಲಿತ ತತ್ತ್ವದಿಂದ ಬುದ್ಧತ್ವದೆಡೆಗೆ ನಡೆಯಬೇಕೆಂಬ ಆಶಯ ಹೊಂದಿದ್ದರು ಎಂದರು. ಸಮಾವೇಶದಲ್ಲಿ ಸಾವಿರಾರು ಮಂದಿ ಬೌದ್ಧ ಅನುಯಾಯಿಗಳು, ದಲಿತ ಕಾರ್ಯಕರ್ತರು ಭಾಗವಹಿಸಿದ್ದರು.

http://vbnewsonline.com/MainNews/57321/

Fake Charge on Prof.Shivabasavaiah fantasm of untouchability-ದಲಿತ ನೌಕರರ ವಿರುದ್ಧ ಸುಶಿಕ್ಷಿತ ಅಸ್ಪಶತಾಚರಣೆ!

10/03/2011

ದಲಿತ ನೌಕರರ ವಿರುದ್ಧ ಸುಶಿಕ್ಷಿತ ಅಸ್ಪಶತಾಚರಣೆ!

ಶುಕ್ರವಾರ – ಮಾರ್ಚ್ -11-2011

ಮಾನ್ಯರೆ ಒಂದಂತೂ ನಿಜ, ಈ ಪ್ರಪಂಚದಲ್ಲಿ ದಲಿತನಾಗಿ ಹುಟ್ಟಬಾರದು. ಅದೇ ಹುಟ್ಟಿ ಸಣ್ಣ ಪುಟ್ಟ ತಪ್ಪುಮಾಡಿ ದರಂತೂ ಅಥವಾ ಆರೋಪ ಬಂದರಂತೂ ಅವನ ಕಥೆ ಮುಗಿದಂತೆಯೆ. ಮೈಸೂರು ವಿ.ವಿ. ಪ್ರಾಧ್ಯಾಪಕ ಶಿವಬಸವಯ್ಯನವರ ವಿಷಯದಲ್ಲಿ ಆಗುತ್ತಿರುವುದು ಇದೇ. ಅಂದಹಾಗೆ ಇದು ಶಿವಬಸವಯ್ಯನವರೊಬ್ಬರ ಕಥೆಯಲ್ಲ. ದಲಿತರ ವಿಷಯದಲ್ಲಿ ಹಿಂದೆ ಇಂತಹದ್ದು ಹಲವಾರು ನಡೆದಿವೆ. ಉದಾಹರಣೆಗೆ ಹೇಳುವುದಾದರೆ ಬೂಸಾ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ದಿ.ಬಿ. ಬಸವಲಿಂಗಪ್ಪನವರ ರಾಜೀನಾಮೆ ಪಡೆದದ್ದು, ಕಾಪಿ ಹಗರಣದಲ್ಲಿ ಮಾಜಿ ಸಚಿವ ಬಿ.ಸೋಮಶೇಖರ್‌ರವರ ರಾಜೀನಾಮೆ ಪಡೆದದ್ದು, ಇತ್ತೀಚಿನ 2ಜಿ ಸ್ಪೆಕ್ಟ್ರಂ ಪ್ರಕರಣ. 

ಅಬ್ಬಾ ಹೇಳುತ್ತಾ ಹೋದರೆ ಅದೆಷ್ಟು ದಲಿತ ಮಂತ್ರಿಗಳು, ಆಧಿಕಾರಿಗಳು, ಪ್ರಾಧ್ಯಾಪಕರು, ಶಿಕ್ಷಕರು, ನೌಕರರು ಇಂತಹ ವ್ಯವಸ್ಥಿತ ಕುತಂತ್ರಿ ಅಸ್ಪಶತಾಚರಣೆಗೆ ಒಳಪಟ್ಟಿದ್ದಾರೆಯೋ? ಒಂದಂತು ನಿಜ . ಇವರೆಲ್ಲರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ಬಂಧಿಸಿ ಜೈಲಿಗೆ ಅಟ್ಟಲಾಗಿದೆ! ಆದರೆ? ಮಾಜಿ ಪ್ರದಾನಿ ದಿ. ರಾಜೀವ್ ಗಾಂಧಿ ಮತ್ತವರ ಕುಟುಂಬ ಬೋಫೋರ್ಸ್‌ನಂತಹ ಬೃಹತ್ ಹಗರಣದಲ್ಲಿ ಪಾಲ್ಗೊಂಡರೂ ಅವರಿಗೆ ಶಿಕ್ಷೆಯಾ ಗಲೇ ಇಲ್ಲ! ಶಿಕ್ಷೆ ಇರಲಿ ಪ್ರಕರಣವನ್ನೇ ಮುಚ್ಚಿಹಾಕಲಾ ಯಿತು! ಮಾಜಿ ಉಪ ಪ್ರಧಾನಿ ಲಾಲ್‌ಕೃಷ್ಣಅಡ್ವಾಣಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಯಾ ದರೂ ಅವರು ಆಧಿಕಾರದ ಮೇಲೆ ಅಧಿಕಾರ ಪಡೆ ಯುತ್ತಾ ಮನ್ನುಗ್ಗಿದರು. ಅದೇ ದಲಿತ ವರ್ಗಕ್ಕೆ ಸೇರಿದ ಬಂಗಾರು ಲಕ್ಷ್ಮಣ್? ಲಂಚ ಪ್ರಕರಣದಲ್ಲಿ ನೇಪಥ್ಯಕ್ಕೆ ಸರಿದರು!

ಒಂದು ದಾಖಲೆಯ ಪ್ರಕಾರ ಲೋಕಾಯುಕ್ತರ ಬಲೆಗೆ ಬಹುತೇಕ ಬೀಳುವವರು ಅಥವಾ ಬೀಳಿಸಲ್ಪಡುವವರು ದಲಿತ ನೌಕರರು! ಹಾಗಂತ ಸ್ವತಃ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ ಮೋಟಮ್ಮನವರೇ ಹೇಳಿ ದ್ದಾರೆ. ಹಾಗಿದ್ದರೆ ದಲಿತರು ಮಾತ್ರ ಭ್ರಷ್ಟರೇ? ದಲಿತರು ಮಾತ್ರ ವಿಷಯ ಲಂಪಟರೇ? ದಲಿತರು ಮಾಡಿದ್ದು ಮಾತ್ರ ಅಪರಾಧವೇ? ಇತ್ತೀಚಿನ ಬೆಳವಣಿ ಗೆಗಳನ್ನು ನೋಡಿದರೆ ಹಾಗೆಯೇ ಅನಿಸುತ್ತಿದೆ.

ಯಾಕೆಂದರೆ 1.7 ಲಕ್ಷ ಕೋಟಿಯಂತಹ ಬೃಹತ್ ಹಗರಣದಲ್ಲಿ ಯಕಶ್ಚಿತ್ ಒಬ್ಬ ಮಂತ್ರಿ ದಲಿತ ವರ್ಗಕ್ಕೆ ಸೇರಿದೆ. ಎ.ರಾಜ ಬಲಿಯಾಗುತ್ತಾರೆ. ಆದರೆ ಅರುಣ್ ಶೌರಿ, ಧಯಾನಿಧಿ ಮಾರನ್, ನೀರಾ ರಾಡಿಯಾ, ಅನಂತ್ ಕುಮಾರ್ ಇವರೆಲ್ಲ? ರಾಜಾರೋಷವಾಗಿ ಓಡಾಡುತ್ತಾರೆ! ರೇಣುಕಾಚಾರ್ಯರಂತಹವರು ಲಜ್ಜೆಗೆಟ್ಟು ಬಹಿರಂಗವಾಗಿ ಮುತ್ತುಕೊಡುವಂತಹ ಹಗರಣದಲ್ಲಿ ಸಿಕ್ಕಿಬಿದ್ದರೂ ಮಂತ್ರಿಗಳಾಗುತ್ತಾರೆ! ವಾಸ್ತವ ಹೀಗಿರಬೇಕಾ ದರೆ ಶಿವಬಸವಯ್ಯನಂತಹವರು ಮಾಡಿದ ತಪ್ಪಾದರೂ ಏನು? ದಲಿತರಾಗಿ ಹುಟ್ಟಿದ್ದು! ಅಕಸ್ಮಾತ್ ಇವರೇನಾ ದರೂ ಮೇಲ್ವರ್ಗದಲ್ಲಿ ಹುಟ್ಟಿದ್ದರೆ ಇಷ್ಟೊತ್ತಿಗಾಗಲೇ ಅವರನ್ನು ರಕ್ಷಿಸುವ ಕಾರ್ಯ ಭರದಿಂದ ನಡೆದಿರುತಿತ್ತು! ಆದರೆ ಈಗ? ದಲಿತ ವರ್ಗಕ್ಕೆ ಸೇರಿದ ಶಿವಬಸವಯ್ಯ ನವರನ್ನು ಹಿಂದು ಮುಂದು ನೋಡದೆ ತಕ್ಷಣ ಅಮಾನತು ಮಾಡಲಾಗಿದೆ. ಜೈಲಿಗೆ ಅಟ್ಟಲಾಗಿದೆ! ದಲಿತ ನೌಕರರ ವಿರುದ್ಧ ವ್ಯವಸ್ಥಿತ ಮತ್ತು ಸುಶಿಕ್ಷಿತ ಅಸ್ಪಶತಾಚರಣೆ ಎಂದರೆ ಇದೇ ಅಲ್ಲವೇ?

-ರಘೋತ್ತಮ ಹೊ.ಬ

ಚಾಮರಾಜನಗರ

 


ಭೈರಪ್ಪರಿಂದ ಹಿಂದೂ ಧರ್ಮದ ವೌಢ್ಯಗಳಿಗೆ ಬೆಂಬಲ: ಸಿಎನ್ನಾರ್

24/01/2011
ಸೋಮವಾರ – ಜನವರಿ -24-2011

ಬೆಂಗಳೂರು, ಜ. 23: ಎಸ್.ಎಲ್.ಭೈರಪ್ಪನವರು ಬಹುತೇಕ ತಮ್ಮ ಎಲ್ಲ ಕಾದಂಬರಿಗಳಲ್ಲಿಯೂ ಹಿಂದೂ ಧರ್ಮದ ಅರ್ಥವಿಲ್ಲದ ವೌಢ್ಯ ಆಚರಣೆ ಗಳನ್ನು ಬೆಂಬಲಿಸುತ್ತಾರೆ ಎಂದು ಪ್ರೊ.ಸಿ.ಎನ್. ರಾಮಚಂದ್ರನ್ ವಿಷಾದಿಸಿದ್ದಾರೆ.

ನಗರದ ಕನ್ನಡ ಸಾಹಿತ್ಯ ಪರಿಷತ್‌ನ ಸಭಾಂಗಣದಲ್ಲಿಂದು ನವಕರ್ನಾಟಕ ಪ್ರಕಾಶನದ ವತಿಯಿಂದ ಹಮ್ಮಿಕೊಳ್ಳ ಲಾಗಿದ್ದ ಡಾ.ಕೆ.ಎಲ್.ಗೋಪಾಲ ಕೃಷ್ಣಯ್ಯ ಅವರ ‘ಡಾ.ಎಸ್.ಎಲ್.ಭೈರಪ್ಪನವರ ಕಾದಂಬರಿಗಳೊಡನೆ ಧರ್ಮ-ಕರ್ಮ ಜಿಜ್ಞಾಸೆ’ ಕೃತಿಯನ್ನು ಅನಾವರಣ ಗೊಳಿಸಿ ಅವರು ಮಾತನಾಡಿದರು.
ಭೈರಪ್ಪನವರು ತಮ್ಮ ಗ್ರಹಭಂಗ ಕಾದಂಬರಿಯಲ್ಲಿ ಹಿಂದೂ ಧರ್ಮಕ್ಕೆ ವಿರುದ್ಧವಾಗಿ ಮರುಮುದುವೆಯಾಗುವ ಕ್ಯಾತಾಯಿನಿಗೆ ಮೂರು ಸಲ ಅಕಾರಣ ವಾಗಿ ಗರ್ಭಪಾತ ಮಾಡಿಸಿ ಸಾಯಿಸಿದ್ದಾರೆ.

‘ದಾಟು’ವಿನಲ್ಲಿ ಜಾತೀಯತೆ ಯನ್ನು ವಿರೋಧಿಸುವ ದಲಿತ ಸಮುದಾಯದ ಮೋಹನ್‌ದಾಸ್‌ನು ಗರ್ಭಗುಡಿಯನ್ನು ಪ್ರವೇಶಿಸುವಾಗ ಮೂರ್ಚೆ ಹೋಗುತ್ತಾನೆ. ಹಿಂದೂ ಧರ್ಮದ ನಂಬಿಕೆಗಳ ವಿರುದ್ಧವಾಗಿ ಈಜುವ ಪ್ರತಿಯೊಂದು ಪಾತ್ರಗಳು ಅವಸಾನ ಹೊಂದುವಂತೆ ಚಿತ್ರಿಸಿದ್ದಾರೆ ಎಂದು ಅವರು ಆರೋಪಿಸಿದರು.

ಕವಲು ಕಾದಂಬರಿಯಲ್ಲಿ ಕೂಡ ಬೈರಪ್ಪನವರು ಸ್ತ್ರೀಪಾತ್ರಗಳೆಲ್ಲವೂ ಹಣದಾಸೆಗಾಗಿ ಯಾರಿಗಾದರೂ ತಮ್ಮ ಮೈ ಮಾರಿಕೊಳ್ಳುವಂತೆ ಹಾಗೂ ತಮ್ಮ ಗಂಡಂದಿರನ್ನು ವಿನಾಕಾರಣ ಕಾನೂನಿನ ಇಕ್ಕಟ್ಟಿಗೆ ಸಿಲುಕಿಸುವ ಖಳ ಪಾತ್ರಗಳಂತೆ ಚಿತ್ರಿಸಿದ್ದಾರೆ.

ಅವರು ನಮ್ಮ ದೇಶದ ಕಾನೂನುಗಳನ್ನು ಇನ್ನೊಮ್ಮೆ ಅಧ್ಯಯನ ಮಾಡುವುದು ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟರು.

ಯಾವುದೆ ಧರ್ಮ ಎಲ್ಲ ಕಾಲ ಘಟ್ಟದಲ್ಲಿ ಒಂದೆ ರೀತಿ ಇರಲು ಸಾಧ್ಯ ವಿಲ್ಲ. ಆಯಾ ಕಾಲದ ವಿವಿಧ ವರ್ಗಗಳು, ಸಾಮಾಜಿಕ ಸ್ಥಿತಿಗತಿಯನ್ನು ಆಧರಿಸಿ ಧರ್ಮ ಸ್ಥಿತ್ಯಂತರಗೊಳ್ಳುತ್ತಲೆ ಇರುತ್ತದೆ. ವೈದಿಕ ಧರ್ಮವು ಸಾಂಸ್ಕೃತಿಕ ಹಿಂದೂ ಧರ್ಮಕ್ಕಿಂತಲೂ ಪುರಾತನ ವಾದ ಇತಿಹಾಸವನ್ನು ಹೊಂದಿದೆ. ಹಿಂದೂ ಎಂಬ ಶಬ್ದದ ಕೂಡ ಪರಕೀಯ ರಿಂದ ಬಂದುದಾಗಿದೆ ಎಂದರು.
ಬುದ್ಧ ವೈದಿಕ ಪುರೋಹಿತಶಾಹಿ ಧರ್ಮವನ್ನು ವಿರೋಧಿಸಿದರೆ ಹೊರತು ಹಿಂದೂ ಧರ್ಮವನ್ನಲ್ಲ. ಕಾಲಕಾಲಕ್ಕೆ ಬದಲಾಗುವ ಧರ್ಮ ನಮ್ಮನ್ನು ರಕ್ಷಿಸು ತ್ತದೆ ಎಂಬುದನ್ನು ನಂಬುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದರು. ನೂರಾರು ವರ್ಷಗಳ ಹಿಂದೆ ಮುಸ್ಲಿಂ ಮಹಾರಾಜರು 2 ಸಾವಿರ ದೇವಾ ಲಯಗಳನ್ನು ನಾಶಗೊಳಿಸಿದರು.

ಅವರ ವಾರಸುದಾರರಾದ ಇಂದಿನ ಮುಸ್ಲಿಂರು ಈ ದುಷ್ಕೃತ್ಯಕ್ಕೆ ಬಲಿಯಾಗಬೇಕೆಂಬುದು ಭೈರಪ್ಪನವರ ಆವರಣ ಕಾದಂಬರಿಯ ವಾದವಾಗಿದೆ.

ಆದರೆ ಫರ್ಗುಶನ್ ಎಂಬ ವಿದೇಶಿ ವಿದ್ವಾಂಸ ಶೇ.99ರಷ್ಟು ಹಿಂದೂ ಧರ್ಮದ ಅನುಯಾಯಿಯಾಗಿದ್ದು ಕೊಂಡು ಹಿಂದೂ ಧರ್ಮದ ಕುರಿತು ಸಾಕಷ್ಟು ಗ್ರಂಥಗಳನ್ನು ರಚಿಸಿದ್ದಾರೆ. ಆದರೆ ಅವರು ಹಿಂದೂ ಧರ್ಮದ ವಾರಸುದಾರರಲ್ಲ ಎನ್ನುವುದನ್ನು ಭೈರಪ್ಪನವರು ಗಮನಿಸಬೇಕು ಎಂದು ಅವರು ಹೇಳಿದರು

Courtesy : Varthabharathi

http://vbnewsonline.com/Benguluru/41448/