ಭೈರಪ್ಪರಿಂದ ಹಿಂದೂ ಧರ್ಮದ ವೌಢ್ಯಗಳಿಗೆ ಬೆಂಬಲ: ಸಿಎನ್ನಾರ್

24/01/2011
ಸೋಮವಾರ – ಜನವರಿ -24-2011

ಬೆಂಗಳೂರು, ಜ. 23: ಎಸ್.ಎಲ್.ಭೈರಪ್ಪನವರು ಬಹುತೇಕ ತಮ್ಮ ಎಲ್ಲ ಕಾದಂಬರಿಗಳಲ್ಲಿಯೂ ಹಿಂದೂ ಧರ್ಮದ ಅರ್ಥವಿಲ್ಲದ ವೌಢ್ಯ ಆಚರಣೆ ಗಳನ್ನು ಬೆಂಬಲಿಸುತ್ತಾರೆ ಎಂದು ಪ್ರೊ.ಸಿ.ಎನ್. ರಾಮಚಂದ್ರನ್ ವಿಷಾದಿಸಿದ್ದಾರೆ.

ನಗರದ ಕನ್ನಡ ಸಾಹಿತ್ಯ ಪರಿಷತ್‌ನ ಸಭಾಂಗಣದಲ್ಲಿಂದು ನವಕರ್ನಾಟಕ ಪ್ರಕಾಶನದ ವತಿಯಿಂದ ಹಮ್ಮಿಕೊಳ್ಳ ಲಾಗಿದ್ದ ಡಾ.ಕೆ.ಎಲ್.ಗೋಪಾಲ ಕೃಷ್ಣಯ್ಯ ಅವರ ‘ಡಾ.ಎಸ್.ಎಲ್.ಭೈರಪ್ಪನವರ ಕಾದಂಬರಿಗಳೊಡನೆ ಧರ್ಮ-ಕರ್ಮ ಜಿಜ್ಞಾಸೆ’ ಕೃತಿಯನ್ನು ಅನಾವರಣ ಗೊಳಿಸಿ ಅವರು ಮಾತನಾಡಿದರು.
ಭೈರಪ್ಪನವರು ತಮ್ಮ ಗ್ರಹಭಂಗ ಕಾದಂಬರಿಯಲ್ಲಿ ಹಿಂದೂ ಧರ್ಮಕ್ಕೆ ವಿರುದ್ಧವಾಗಿ ಮರುಮುದುವೆಯಾಗುವ ಕ್ಯಾತಾಯಿನಿಗೆ ಮೂರು ಸಲ ಅಕಾರಣ ವಾಗಿ ಗರ್ಭಪಾತ ಮಾಡಿಸಿ ಸಾಯಿಸಿದ್ದಾರೆ.

‘ದಾಟು’ವಿನಲ್ಲಿ ಜಾತೀಯತೆ ಯನ್ನು ವಿರೋಧಿಸುವ ದಲಿತ ಸಮುದಾಯದ ಮೋಹನ್‌ದಾಸ್‌ನು ಗರ್ಭಗುಡಿಯನ್ನು ಪ್ರವೇಶಿಸುವಾಗ ಮೂರ್ಚೆ ಹೋಗುತ್ತಾನೆ. ಹಿಂದೂ ಧರ್ಮದ ನಂಬಿಕೆಗಳ ವಿರುದ್ಧವಾಗಿ ಈಜುವ ಪ್ರತಿಯೊಂದು ಪಾತ್ರಗಳು ಅವಸಾನ ಹೊಂದುವಂತೆ ಚಿತ್ರಿಸಿದ್ದಾರೆ ಎಂದು ಅವರು ಆರೋಪಿಸಿದರು.

ಕವಲು ಕಾದಂಬರಿಯಲ್ಲಿ ಕೂಡ ಬೈರಪ್ಪನವರು ಸ್ತ್ರೀಪಾತ್ರಗಳೆಲ್ಲವೂ ಹಣದಾಸೆಗಾಗಿ ಯಾರಿಗಾದರೂ ತಮ್ಮ ಮೈ ಮಾರಿಕೊಳ್ಳುವಂತೆ ಹಾಗೂ ತಮ್ಮ ಗಂಡಂದಿರನ್ನು ವಿನಾಕಾರಣ ಕಾನೂನಿನ ಇಕ್ಕಟ್ಟಿಗೆ ಸಿಲುಕಿಸುವ ಖಳ ಪಾತ್ರಗಳಂತೆ ಚಿತ್ರಿಸಿದ್ದಾರೆ.

ಅವರು ನಮ್ಮ ದೇಶದ ಕಾನೂನುಗಳನ್ನು ಇನ್ನೊಮ್ಮೆ ಅಧ್ಯಯನ ಮಾಡುವುದು ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟರು.

ಯಾವುದೆ ಧರ್ಮ ಎಲ್ಲ ಕಾಲ ಘಟ್ಟದಲ್ಲಿ ಒಂದೆ ರೀತಿ ಇರಲು ಸಾಧ್ಯ ವಿಲ್ಲ. ಆಯಾ ಕಾಲದ ವಿವಿಧ ವರ್ಗಗಳು, ಸಾಮಾಜಿಕ ಸ್ಥಿತಿಗತಿಯನ್ನು ಆಧರಿಸಿ ಧರ್ಮ ಸ್ಥಿತ್ಯಂತರಗೊಳ್ಳುತ್ತಲೆ ಇರುತ್ತದೆ. ವೈದಿಕ ಧರ್ಮವು ಸಾಂಸ್ಕೃತಿಕ ಹಿಂದೂ ಧರ್ಮಕ್ಕಿಂತಲೂ ಪುರಾತನ ವಾದ ಇತಿಹಾಸವನ್ನು ಹೊಂದಿದೆ. ಹಿಂದೂ ಎಂಬ ಶಬ್ದದ ಕೂಡ ಪರಕೀಯ ರಿಂದ ಬಂದುದಾಗಿದೆ ಎಂದರು.
ಬುದ್ಧ ವೈದಿಕ ಪುರೋಹಿತಶಾಹಿ ಧರ್ಮವನ್ನು ವಿರೋಧಿಸಿದರೆ ಹೊರತು ಹಿಂದೂ ಧರ್ಮವನ್ನಲ್ಲ. ಕಾಲಕಾಲಕ್ಕೆ ಬದಲಾಗುವ ಧರ್ಮ ನಮ್ಮನ್ನು ರಕ್ಷಿಸು ತ್ತದೆ ಎಂಬುದನ್ನು ನಂಬುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದರು. ನೂರಾರು ವರ್ಷಗಳ ಹಿಂದೆ ಮುಸ್ಲಿಂ ಮಹಾರಾಜರು 2 ಸಾವಿರ ದೇವಾ ಲಯಗಳನ್ನು ನಾಶಗೊಳಿಸಿದರು.

ಅವರ ವಾರಸುದಾರರಾದ ಇಂದಿನ ಮುಸ್ಲಿಂರು ಈ ದುಷ್ಕೃತ್ಯಕ್ಕೆ ಬಲಿಯಾಗಬೇಕೆಂಬುದು ಭೈರಪ್ಪನವರ ಆವರಣ ಕಾದಂಬರಿಯ ವಾದವಾಗಿದೆ.

ಆದರೆ ಫರ್ಗುಶನ್ ಎಂಬ ವಿದೇಶಿ ವಿದ್ವಾಂಸ ಶೇ.99ರಷ್ಟು ಹಿಂದೂ ಧರ್ಮದ ಅನುಯಾಯಿಯಾಗಿದ್ದು ಕೊಂಡು ಹಿಂದೂ ಧರ್ಮದ ಕುರಿತು ಸಾಕಷ್ಟು ಗ್ರಂಥಗಳನ್ನು ರಚಿಸಿದ್ದಾರೆ. ಆದರೆ ಅವರು ಹಿಂದೂ ಧರ್ಮದ ವಾರಸುದಾರರಲ್ಲ ಎನ್ನುವುದನ್ನು ಭೈರಪ್ಪನವರು ಗಮನಿಸಬೇಕು ಎಂದು ಅವರು ಹೇಳಿದರು

Courtesy : Varthabharathi

http://vbnewsonline.com/Benguluru/41448/


ಅಂಬೇಡ್ಕರ್ ದೃಷ್ಟಿಯಲ್ಲಿ ಕಲಿಯುಗ ಕೃತಿ ಬಿಡುಗಡೆ”ದಲಿತ ಬಣಗಳು ಒಗ್ಗಟ್ಟು ಪ್ರದರ್ಶಿಸಲಿ”: Rajashekhar Koti says , ಚಾಮರಾಜನಗರ

12/07/2010

ಅಂಬೇಡ್ಕರ್ ದೃಷ್ಟಿಯಲ್ಲಿ ಕಲಿಯುಗ ಕೃತಿ ಬಿಡುಗಡೆ ಚಾಮರಾಜನಗರ: ಆಹಾರ ಇಲಾಖೆ ವ್ಯವಸ್ಥಾಪಕ ರಾಜಶೇಖರ ಮೂರ್ತಿ ಅವರು ನಾಗಸಿದ್ದಾರ್ಥ ಹೊಲೆಯಾರ್ ಎಂಬ ಕಾವ್ಯನಾಮದಲ್ಲಿ ರಚಿಸಿರುವ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್………………………………

2010/07/12

http://www.kannadaprabha.com


‘ದಲಿತ ಚಳವಳಿ ಮರುಹುಟ್ಟು ಪಡೆಯಲಿ’

11/07/2010
ಪ್ರಜಾವಾಣಿ ವಾರ್ತೆ
ಭಾನುವಾರ , ಜುಲೈ 11, 2010
ಚಾಮರಾಜನಗರ: ‘ರಾಜ್ಯದಲ್ಲಿ ಛಿದ್ರವಾಗಿರುವ ದಲಿತ ಚಳವಳಿ ಅಂಬೇಡ್ಕರ್ ಮೂಲ ವಿಚಾರಧಾರೆಗಳ ತಳಹದಿ ಮೇಲೆ ಮರುಹುಟ್ಟು ಪಡೆಯಬೇಕಿದೆ’ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಪಿ. ದೇವರಾಜು ಅಭಿಪ್ರಾಯಪಟ್ಟರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಬುದ್ಧ ಮತ್ತು ಅಂಬೇಡ್ಕರ್ ಜಯಂತಿ ಅಂಗವಾಗಿ ದಲಿತ ಸಂಘರ್ಷ ಸಮಿತಿಯ ಚಾಮರಾಜನಗರ ಮತ್ತು ಮೈಸೂರು ಜಿಲ್ಲಾ ಘಟಕದ ಆಶ್ರಯದಲ್ಲಿ ಬುಧವಾರ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ “ದಲಿತ ಸಂಘಟನೆಗಳ ಒಗ್ಗೂಡುವಿಕೆ’ ಕುರಿತು ಅವರು ಮಾತನಾಡಿದರು.70ರ ದಶಕದಲ್ಲಿ ದಲಿತ ಸಂಘರ್ಷ ಸಮಿತಿಯ ಹೋರಾಟ ಪ್ರಬಲವಾಗಿತ್ತು. ದಲಿತರನ್ನು ಜಾಗೃತಗೊಳಿಸಿತ್ತು. 80ರ ದಶಕದ ನಂತರ ಅಂಬೇಡ್ಕರ್ ಅವರ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ದಲಿತರ ಹೋರಾಟ ನಡೆಯಲಿಲ್ಲ. ಹಾಗಾಗಿ, ಸಂಘಟನೆ ಹೋಳಾಯಿತು ಎಂದು ಹೇಳಿದರು.

ಅಂಬೇಡ್ಕರ್ ಹೋರಾಟಕ್ಕೆ ಬುದ್ಧ, ಜ್ಯೋತಿ ಬಾಪುಲೆ, ಕಬೀರ್, ಪೆರಿಯಾರ್ ರಾಮಸ್ವಾಮಿ ಪ್ರೇರಣೆಯಾಗಿದ್ದರು. ಈ ಸಮಾಜ ಸುಧಾರಕರ ಬಗ್ಗೆ ದಲಿತ ಸಂಘಟನೆಗಳು ಅರಿತುಕೊಳ್ಳಲಿಲ್ಲ. ಅದರ ಪರಿಣಾಮ ಚಳವಳಿ ಸೋತಿದೆ. ಇವರ ಬಗ್ಗೆ ಮೊದಲು ದಲಿತ ಹೋರಾಟಗಾರರು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ಷುಲ್ಲಕ ವಿಚಾರಕ್ಕೆ ದಲಿತ ಮುಖಂಡರ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು. ವಿಚಾರವಾದಿಗಳಾಗಿ ಮತ್ತು ಕಾರ್ಯಕರ್ತರಾಗಿ ಮಾತ್ರ ದಲಿತ ನಾಯಕರು ಹೋರಾಟ ಮಾಡಿದರು. ಅಂಬೇಡ್ಕರ್ ಅವರ ಸೈದ್ಧಾಂತಿಕ ನೆಲೆಯಲ್ಲಿ ಚಳವಳಿ ನಡೆಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಬೇಡ್ಕರ್ ಶ್ರೇಷ್ಠ ಆರ್ಥಿಕ, ರಾಜಕೀಯ, ಧಾರ್ಮಿಕ, ಸಾಮಾಜಿಕ ಚಿಂತಕರಾಗಿದ್ದರು. ಅವರ ರಾಜಕೀಯ ವ್ಯಾಖ್ಯಾನಗಳು ಯಾವುದೇ ರಾಜ್ಯಶಾಸ್ತ್ರದ ಪುಸ್ತಕದಲ್ಲಿಲ್ಲ. ಉದ್ದೇಶ ಪೂರ್ವಕವಾಗಿ ಅವರ ರಾಜಕೀಯ ಚಿಂತನೆಗಳನ್ನು ಮರೆ ಮಾಚಲಾಗಿದೆ ಎಂದು ಆರೋಪಿಸಿದರು.

ಮೀಸಲು ಕ್ಷೇತ್ರದಲ್ಲಿ ದಲಿತ ಅಭ್ಯರ್ಥಿಗಳ ವಿರುದ್ಧ ಪ್ರಭಾವಿ ಪಕ್ಷಗಳ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವಂತಿಲ್ಲ ಎಂದು ಪೂನಾ ಒಪ್ಪಂದದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಆದರೆ, ಆ ಒಡಂಬಡಿಕೆಯನ್ನು ತಕ್ಷಣವೇ ಮುರಿದು ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಯಿತು. ಈ ಕುರಿತು ಚರ್ಚೆಯೇ ನಡೆದಿಲ್ಲ ಎಂದರು.

ವಿಧಾನ ಪರಿಷತ್, ರಾಜ್ಯಸಭೆ, ರಕ್ಷಣಾ ವಲಯ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗೆ ಮೀಸಲಾತಿ ಏಕೆ ನಿಗದಿ ಮಾಡಿಲ್ಲ. ಖಾಸಗೀಕರಣ, ಉದಾರೀಕರಣ, ಜಾಗತೀಕರಣ ಸಂದರ್ಭದಲ್ಲಿ ಮೀಸಲಾತಿ ನಾಶಗೊಳ್ಳುತ್ತಿದೆ. ಈ ಬಗ್ಗೆ ದಲಿತ ಮುಖಂಡರು ಗಂಭೀರ ಚಿಂತನೆ ನಡೆಸಬೇಕು ಎಂದರು.
“ದಲಿತರ ಮುಂದಿರುವ ಸವಾಲುಗಳು’ ಕುರಿತು ಡಾ.ಅಪ್ಪಗೆರೆ ಸೋಮಶೇಖರ್, “ದಲಿತರು ಹಾಗೂ ಅಂಬೇಡ್ಕರ್’ ಕುರಿತು ಡಾ.ನರೇಂದ್ರಕುಮಾರ್. ಮಾತನಾಡಿದರು. ವಿಚಾರವಾದಿ ಪ್ರೊಕೆ.ಎಸ್. ಭಗವಾನ್ ಅಧ್ಯಕ್ಷತೆ ವಹಿಸಿದ್ದರು. ವೆಂಕಟೇಶ್‌ಮೂರ್ತಿ ಮತ್ತು ತಂಡದವರು ಕ್ರಾಂತಿ ಗೀತೆ ಹಾಡಿದರು.

http://74.52.92.70/Content/Jul82010/district20100708193576.asp