ಬೆಂಗಳೂರು, ಜ. 23: ಎಸ್.ಎಲ್.ಭೈರಪ್ಪನವರು ಬಹುತೇಕ ತಮ್ಮ ಎಲ್ಲ ಕಾದಂಬರಿಗಳಲ್ಲಿಯೂ ಹಿಂದೂ ಧರ್ಮದ ಅರ್ಥವಿಲ್ಲದ ವೌಢ್ಯ ಆಚರಣೆ ಗಳನ್ನು ಬೆಂಬಲಿಸುತ್ತಾರೆ ಎಂದು ಪ್ರೊ.ಸಿ.ಎನ್. ರಾಮಚಂದ್ರನ್ ವಿಷಾದಿಸಿದ್ದಾರೆ.
ನಗರದ ಕನ್ನಡ ಸಾಹಿತ್ಯ ಪರಿಷತ್ನ ಸಭಾಂಗಣದಲ್ಲಿಂದು ನವಕರ್ನಾಟಕ ಪ್ರಕಾಶನದ ವತಿಯಿಂದ ಹಮ್ಮಿಕೊಳ್ಳ ಲಾಗಿದ್ದ ಡಾ.ಕೆ.ಎಲ್.ಗೋಪಾಲ ಕೃಷ್ಣಯ್ಯ ಅವರ ‘ಡಾ.ಎಸ್.ಎಲ್.ಭೈರಪ್ಪನವರ ಕಾದಂಬರಿಗಳೊಡನೆ ಧರ್ಮ-ಕರ್ಮ ಜಿಜ್ಞಾಸೆ’ ಕೃತಿಯನ್ನು ಅನಾವರಣ ಗೊಳಿಸಿ ಅವರು ಮಾತನಾಡಿದರು.
ಭೈರಪ್ಪನವರು ತಮ್ಮ ಗ್ರಹಭಂಗ ಕಾದಂಬರಿಯಲ್ಲಿ ಹಿಂದೂ ಧರ್ಮಕ್ಕೆ ವಿರುದ್ಧವಾಗಿ ಮರುಮುದುವೆಯಾಗುವ ಕ್ಯಾತಾಯಿನಿಗೆ ಮೂರು ಸಲ ಅಕಾರಣ ವಾಗಿ ಗರ್ಭಪಾತ ಮಾಡಿಸಿ ಸಾಯಿಸಿದ್ದಾರೆ.
‘ದಾಟು’ವಿನಲ್ಲಿ ಜಾತೀಯತೆ ಯನ್ನು ವಿರೋಧಿಸುವ ದಲಿತ ಸಮುದಾಯದ ಮೋಹನ್ದಾಸ್ನು ಗರ್ಭಗುಡಿಯನ್ನು ಪ್ರವೇಶಿಸುವಾಗ ಮೂರ್ಚೆ ಹೋಗುತ್ತಾನೆ. ಹಿಂದೂ ಧರ್ಮದ ನಂಬಿಕೆಗಳ ವಿರುದ್ಧವಾಗಿ ಈಜುವ ಪ್ರತಿಯೊಂದು ಪಾತ್ರಗಳು ಅವಸಾನ ಹೊಂದುವಂತೆ ಚಿತ್ರಿಸಿದ್ದಾರೆ ಎಂದು ಅವರು ಆರೋಪಿಸಿದರು.
ಕವಲು ಕಾದಂಬರಿಯಲ್ಲಿ ಕೂಡ ಬೈರಪ್ಪನವರು ಸ್ತ್ರೀಪಾತ್ರಗಳೆಲ್ಲವೂ ಹಣದಾಸೆಗಾಗಿ ಯಾರಿಗಾದರೂ ತಮ್ಮ ಮೈ ಮಾರಿಕೊಳ್ಳುವಂತೆ ಹಾಗೂ ತಮ್ಮ ಗಂಡಂದಿರನ್ನು ವಿನಾಕಾರಣ ಕಾನೂನಿನ ಇಕ್ಕಟ್ಟಿಗೆ ಸಿಲುಕಿಸುವ ಖಳ ಪಾತ್ರಗಳಂತೆ ಚಿತ್ರಿಸಿದ್ದಾರೆ.
ಅವರು ನಮ್ಮ ದೇಶದ ಕಾನೂನುಗಳನ್ನು ಇನ್ನೊಮ್ಮೆ ಅಧ್ಯಯನ ಮಾಡುವುದು ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟರು.
ಯಾವುದೆ ಧರ್ಮ ಎಲ್ಲ ಕಾಲ ಘಟ್ಟದಲ್ಲಿ ಒಂದೆ ರೀತಿ ಇರಲು ಸಾಧ್ಯ ವಿಲ್ಲ. ಆಯಾ ಕಾಲದ ವಿವಿಧ ವರ್ಗಗಳು, ಸಾಮಾಜಿಕ ಸ್ಥಿತಿಗತಿಯನ್ನು ಆಧರಿಸಿ ಧರ್ಮ ಸ್ಥಿತ್ಯಂತರಗೊಳ್ಳುತ್ತಲೆ ಇರುತ್ತದೆ. ವೈದಿಕ ಧರ್ಮವು ಸಾಂಸ್ಕೃತಿಕ ಹಿಂದೂ ಧರ್ಮಕ್ಕಿಂತಲೂ ಪುರಾತನ ವಾದ ಇತಿಹಾಸವನ್ನು ಹೊಂದಿದೆ. ಹಿಂದೂ ಎಂಬ ಶಬ್ದದ ಕೂಡ ಪರಕೀಯ ರಿಂದ ಬಂದುದಾಗಿದೆ ಎಂದರು.
ಬುದ್ಧ ವೈದಿಕ ಪುರೋಹಿತಶಾಹಿ ಧರ್ಮವನ್ನು ವಿರೋಧಿಸಿದರೆ ಹೊರತು ಹಿಂದೂ ಧರ್ಮವನ್ನಲ್ಲ. ಕಾಲಕಾಲಕ್ಕೆ ಬದಲಾಗುವ ಧರ್ಮ ನಮ್ಮನ್ನು ರಕ್ಷಿಸು ತ್ತದೆ ಎಂಬುದನ್ನು ನಂಬುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದರು. ನೂರಾರು ವರ್ಷಗಳ ಹಿಂದೆ ಮುಸ್ಲಿಂ ಮಹಾರಾಜರು 2 ಸಾವಿರ ದೇವಾ ಲಯಗಳನ್ನು ನಾಶಗೊಳಿಸಿದರು.
ಅವರ ವಾರಸುದಾರರಾದ ಇಂದಿನ ಮುಸ್ಲಿಂರು ಈ ದುಷ್ಕೃತ್ಯಕ್ಕೆ ಬಲಿಯಾಗಬೇಕೆಂಬುದು ಭೈರಪ್ಪನವರ ಆವರಣ ಕಾದಂಬರಿಯ ವಾದವಾಗಿದೆ.
ಆದರೆ ಫರ್ಗುಶನ್ ಎಂಬ ವಿದೇಶಿ ವಿದ್ವಾಂಸ ಶೇ.99ರಷ್ಟು ಹಿಂದೂ ಧರ್ಮದ ಅನುಯಾಯಿಯಾಗಿದ್ದು ಕೊಂಡು ಹಿಂದೂ ಧರ್ಮದ ಕುರಿತು ಸಾಕಷ್ಟು ಗ್ರಂಥಗಳನ್ನು ರಚಿಸಿದ್ದಾರೆ. ಆದರೆ ಅವರು ಹಿಂದೂ ಧರ್ಮದ ವಾರಸುದಾರರಲ್ಲ ಎನ್ನುವುದನ್ನು ಭೈರಪ್ಪನವರು ಗಮನಿಸಬೇಕು ಎಂದು ಅವರು ಹೇಳಿದರು
Courtesy : Varthabharathi