ಆಸೆ ತೋರಿಸಿ ಮತಾಂತರ ಸಲ್ಲದು | |
ಎಲ್ಲ ಕಲಹಗಳಿಗೂ ಮನುಷ್ಯನ ಮನಸ್ಸೇ ಕಾರಣ. ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೆ ಮನಸ್ಸುಗಳ ಪರಿವರ್ತನೆ ಆಗಬೇಕು. ಬುದ್ಧ ಇದನ್ನೇ ಹೇಳಿದ್ದಾನೆ. ಆಚರಣೆಗಳಲ್ಲಿ ಭಿನ್ನತೆ ಇದ್ದ ಮಾತ್ರಕ್ಕೆ ದ್ವೇಷ ಸಾಧಿಸುವ ಅಗತ್ಯವಿಲ್ಲ | |
‘ವಿದೇಶಿಗನಾದ ನಾನು ಭಾರತೀಯರಿಗೆ ಭಾರತದ ಇತಿಹಾಸ ಮತ್ತು ತತ್ವ ಬೋಧಿಸುವುದೆಂದರೆ ಮುಜುಗರ ಎನಿಸುತ್ತದೆ. ಆದರೂ ಅನಿವಾರ್ಯವಾಗಿ ಅದನ್ನು ಮಾಡುತ್ತಿದ್ದೇನೆ…’ ಎನ್ನುತ್ತಲೆ ಮಾತಿಗಿಳಿದರು ಧಮ್ಮಾಚಾರಿ ಸುಭೂತಿ. ಮೂಲತಃ ಇಂಗ್ಲೆಂಡಿನ ಲಂಡನ್ ಸಮೀಪದ ಚೆಟಮ್ ನಿವಾಸಿ ಅಲೆಕ್ಝಾಂಡರ್ ಕೆನಡಿ ತತ್ವಶಾಸ್ತ್ರದ ಪದವೀಧರ. 1970ರ ದಶಕದಲ್ಲಿ ಉರ್ಗೇನ್ ಸಂಘರಕ್ಷಿತ ಎಂಬ ಬೌದ್ಧ ವಿದ್ವಾಂಸರು ‘ಫ್ರೆಂಡ್ಸ್ ಆಫ್ ದಿ ವೆಸ್ಟರ್ನ್ ಬುದ್ಧಿಸ್ಟ್ ಆರ್ಡರ್’ ಎಂಬ ಸಂಘಟನೆ ಮೂಲಕ ಪಶ್ಚಿಮ ದೇಶಗಳಲ್ಲಿ ಬೌದ್ಧ ಧರ್ಮ ಪ್ರಚಾರ ನಡೆಸುತ್ತಿದ್ದರು. ಇವರ ಪ್ರಭಾವಕ್ಕೆ ಒಳಗಾದ ಕೆನಡಿ ತಮ್ಮ 21ನೇ ವಯಸ್ಸಿನಲ್ಲಿ ‘ಸುಭೂತಿ’ ಆಗಿ ಪರಿವರ್ತಿತರಾದರು. 1978ರಲ್ಲಿ ಅಸ್ತಿತ್ವಕ್ಕೆ ಬಂದ ‘ತ್ರೈಲೋಕ್ಯ ಬೌದ್ಧ ಮಹಾಸಂಘ ಸಹಾಯಕ ಗಣ’ದ ಮೂಲಕ ಸುಭೂತಿ ಧಮ್ಮ ತತ್ವ ಬೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ‘ಸಂಘರಕ್ಷಿತ’, ‘ಎ ನ್ಯೂ ವಾಯ್ಸಿ ಇನ್ ಬುದ್ಧಿಸ್ಟ್ ಟ್ರಡಿಷನ್’, ‘ಹೌ ಟು ಲಿವ್ ದಿ ಬುದ್ಧಿಸ್ಟ್ ಲೈಫ್’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಗುಲ್ಬರ್ಗದ ಬುದ್ಧ ವಿಹಾರದಲ್ಲಿ ಈಚೆಗೆ ನಡೆದ ಅಂತರರಾಷ್ಟ್ರೀಯ ಧಮ್ಮಕ್ರಾಂತಿ ಮಹಾಶಿಬಿರದಲ್ಲಿ ಪಾಲ್ಗೊಂಡಿದ್ದ ಅವರು ‘ಪ್ರಜಾವಾಣಿ’ ಜತೆಗೆ ತಮ್ಮ ವಿಚಾರಗಳನ್ನು ಹಂಚಿಕೊಂಡರು. * ನಿಮ್ಮ ಕೌಟುಂಬಿಕ ಹಿನ್ನೆಲೆ ಮತ್ತು ಧರ್ಮಾಂತರಕ್ಕೆ ಕಾರಣ? ‘ಎಲ್ಲದಕ್ಕೂ ದೇವರೇ ಕಾರಣ’ ಎಂಬುದು ಕ್ರೈಸ್ತರ ನಂಬಿಕೆ. ನನಗೆ ದೇವರಲ್ಲಿ ನಂಬಿಕೆ ಬರುತ್ತಿರಲಿಲ್ಲ. ಅಲ್ಲದೆ ಆ ಧರ್ಮದಲ್ಲಿನ ಕೆಲವು ಕಂದಾಚಾರಗಳು ನನಗೆ ಸರಿ ಅನಿಸಲಿಲ್ಲ. ಪದವಿ ಮುಗಿಸುವ ವೇಳೆಗೆ ನನ್ನ ಚಿಂತನೆಗಳು ಮತ್ತಷ್ಟು ಸ್ಪಷ್ಟವಾದವು. ‘ಬಿಬಿಸಿ ರೇಡಿಯೋ’ದಲ್ಲಿ ಒಮ್ಮೆ ಉರ್ಗೇನ್ ಸಂಘರಕ್ಷಿತ ಅವರ ಬೌದ್ಧ ಉಪನ್ಯಾಸ ಕೇಳಿ ಪ್ರಭಾವಿತನಾದೆ. ಲಭ್ಯವಿದ್ದ ಬೌದ್ಧ ಸಾಹಿತ್ಯವನ್ನು ಓದಿದೆ. ಉರ್ಗೇನ್ ಅವರನ್ನು ಭೇಟಿಯಾಗಿ ಅನುಯಾಯಿ ಆದೆ. ಟೇಲರ್ ಆಗಬೇಕೆಂಬ ಕನಸು ಕಂಡಿದ್ದೆ. ಈಗ ಧಮ್ಮ ಪ್ರಚಾರಕನಾಗಿ ಇಲ್ಲಿ ಬಂದಿದ್ದೇನೆ. ಅದಕ್ಕೆ ಅಡ್ಡಿ ಆಗಬಾರದು ಎಂದು ಬ್ರಹ್ಮಚಾರಿ ಆಗೇ ಉಳಿದಿದ್ದೇನೆ. * ಮತಾಂತರದ ಬಗ್ಗೆ ಪಶ್ಚಿಮದ ರಾಷ್ಟ್ರಗಳು ಮತ್ತು ಭಾರತದಲ್ಲಿ ಇರುವ ವ್ಯತ್ಯಾಸ? * ಹಿಂದೂ ಧರ್ಮದ ಬಗ್ಗೆ ನೀವು ಏನು ತಿಳಿದುಕೊಂಡಿದ್ದೀರಿ, ಅದರ ಬಗ್ಗೆ ಅಭಿಪ್ರಾಯವೇನು? ಸೂಫಿ ಸಂತರು ಹಾಗೂ ಭಕ್ತಿ ಚಳವಳಿಯ ಕಬೀರ, ತುಳಸಿದಾಸ, ರವಿದಾಸ, ರಮಣ ಮಹರ್ಷಿ ಮತ್ತಿತರರ ಕೃತಿಗಳನ್ನು ಓದಿದ್ದೇನೆ. ಇನ್ನು ಹಲವು ಸುಧಾರಕರ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ. * ಕ್ರೈಸ್ತ ಧರ್ಮದಲ್ಲಿ ಕಂದಾಚಾರಗಳು ಇವೆ ಎಂದಿದ್ದೀರಿ. ಆದಾಗ್ಯೂ ಅದು ಇಷ್ಟೊಂದು ವಿಶಾಲವಾಗಿ ಬೆಳೆಯುತ್ತಿರುವುದು ಹೇಗೆ? * ಒತ್ತಾಯದ ಮತಾಂತರಕ್ಕೆ ನಿಮ್ಮ ಅಭಿಪ್ರಾಯ * ಅಂಬೇಡ್ಕರ್ ಮತಾಂತರದ ನಂತರ ಬೌದ್ಧ ಧರ್ಮ ಪರಿಶಿಷ್ಟ ಜಾತಿ ಜನಾಂಗಕ್ಕೆ ಸೀಮಿತ ಧರ್ಮ ಆಗುತ್ತಿದೆಯೇ? * ಧರ್ಮ ಮತ್ತು ಮೂರ್ತಿ ಪೂಜೆ ಕುರಿತು ನಿಮ್ಮ ವಿಶ್ಲೇಷಣೆ? * ಧರ್ಮ- ಧರ್ಮಗಳ ಮಧ್ಯದ ದ್ವೇಷ ನಿವಾರಣೆ ಹೇಗೆ? source :prajavani Jan/10/2010 |
ಆಸೆ ತೋರಿಸಿ ಮತಾಂತರ ಸಲ್ಲದು
10/07/2010ಸಾಂಚಿಯ ಬೌದ್ಧ ಸ್ಮಾರಕಗಳು
09/07/2010ಸಾಂಚಿಯ ಬೌದ್ಧ ಸ್ಮಾರಕಗಳು*
UNESCO ವಿಶ್ವ ಪರಂಪರೆಯ ತಾಣ ಸಾಂಚಿಯ ಮಹಾ ಸ್ತೂಪ ರಾಷ್ಟ್ರ
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ ಘೋಷಿತ ವರ್ಷ 1989 (13ನೆಯ ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.
ಸಾಂಚಿಯ ಬೌದ್ಧ ಸ್ಮಾರಕಗಳು ಭಾರತದ ಮಧ್ಯ ಪ್ರದೇಶ ರಾಜ್ಯದ ರಾಯ್ಸೇನ್ ಜಿಲ್ಲೆಯಲ್ಲಿವೆ. ಭೋಪಾಲದಿಂದ ೪೬ ಕಿ.ಮೀ. ದೂರದಲ್ಲಿರುವ ಸಾಂಚಿ ಗ್ರಾಮದಲ್ಲಿ ಹಲವು ಬೌದ್ಧ ಸ್ಮಾರಕಗಳಿದ್ದು ಇವುಗಳ ನಿರ್ಮಾಣಕಾಲವು ಕ್ರಿ.ಪೂ. ೩ನೆಯ ಶತಮಾನದಿಂದ ಕ್ರಿ.ಶ. ೧೨ನೆಯ ಶತನಮಾನದವರೆಗೆ. ಇಲ್ಲಿನ ಸ್ತೂಪಗಳಿಗೆ ಶಿಲಾತೋರಣಗಳಿದ್ದು ಅವು ಪ್ರೇಮ, ಶಾಂತಿ, ವಿಶ್ವಾಸ ಮತ್ತು ಧೈರ್ಯವನ್ನು ಪ್ರತಿನಿಧಿಸುತ್ತವೆ. ಸಾಂಚಿಯ ಮಹಾಸ್ತೂಪವನ್ನು ಅಶೋಕ ಚಕ್ರವರ್ತಿಯು ನಿರ್ಮಿಸಿದನು.
ಬೌದ್ಧ ಧರ್ಮಕ್ಕೆ 10,000 ದಲಿತರ ಮತಾಂತರ
09/07/2010ಭೂಪಾಲ್, ಶನಿವಾರ, 11 ಅಕ್ಟೋಬರ್ 2008 ( 19:23 IST )
ಬುದ್ಧ ಜಯಂತಿಯ ದಿನವಾದ ಶುಕ್ರವಾರ ಮಧ್ಯಪ್ರದೇಶದ ಪುಕಾರಣ್ಯ ಗ್ರಾಮ ಸಮೀಪದ ಕಾನ್ಪುರದಲ್ಲಿ ಹಿಮಾಚಲ ಪ್ರದೇಶದ ಮಾಜಿ ರಾಜ್ಯಪಾಲ ಮಾತಾ ಪ್ರಸಾದ್, ಆಚಾರ್ಯ ಸಂದೇಶ್ ಭಾಲೆಕಾರ್ ಸೇರಿದಂತೆ ಹಲವು ಬೌದ್ಧ ಭಿಕ್ಷುಗಳ ಸಮ್ಮುಖದಲ್ಲಿ 10 ಸಾವಿರ ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸಿದರು.
ಪುಕಾರಣ್ಯ ಗ್ರಾಮದ ಕಾನ್ಪುರದಲ್ಲಿ ನಡೆದ ಬೌದ್ಧ ಧರ್ಮ ದೀಕ್ಷಾ ಕಾರ್ಯಕ್ರಮದಲ್ಲಿ ಈ ಮತಾಂತರ ಪ್ರಕ್ರಿಯೆ ನಡೆಯಿತು.ಇಂದಿನಿಂದ ನಾವು ಶ್ರೀರಾಮ ಸೇರಿದಂತೆ ಯಾವುದೇ ಹಿಂದೂ ದೇವ-ದೇವತೆಗಳನ್ನು ಪೂಜಿಸುವುದಿಲ್ಲ. ಆ ನಿಟ್ಟಿನಲ್ಲಿ ನಾವು ಕೇವಲ ಬುದ್ಧನ ತತ್ವಗಳನ್ನು ಮಾತ್ರ ಅನುಸರಿಸುತ್ತೇವೆ. ಇದು ನಮಗೆ ಮರುಜನ್ಮ ನೀಡಿದಂತಾಗಿದೆ ಎಂದು ರೂರಾ ಗ್ರಾಮದ ಶಾಕುಂತಲಾ ಕಮಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬೃಹತ್ ಸಮಾರಂಭದಲ್ಲಿ ಭಾರತೀಯ ದಲಿತ್ ಪ್ಯಾಂಥರ್ ಪಕ್ಷದ ಅಧ್ಯಕ್ಷ ಧಾನಿ ರಾವ್ ಅವರು ಭಾಗವಹಿಸಿದ್ದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾರ್ಗದರ್ಶನ, ವಿಚಾರಧಾರೆಯನ್ವಯ ಬೌದ್ಧ ದೀಕ್ಷೆ ಕಾರ್ಯಕ್ರಮ ನಡೆಸಲಾಗಿದೆ ಎಂದು ಹೇಳಿದರು.
(ಮೂಲ – ವೆಬ್ದುನಿಯಾ)